ಅಥವಾ

ಒಟ್ಟು 37 ಕಡೆಗಳಲ್ಲಿ , 23 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಿಯಾಚಾರದ ಪಥವಿಡಿದು ನಲಿನಲಿದುಲಿದಡೂ ಲಿಂಗಸಾಹಿತ್ಯವಿಲ್ಲ. ಮನವೆ ಲಿಂಗದಲ್ಲಿ ನೆಲೆಗೊಳಿಸುವೆನೆಂದು ಧ್ಯಾನಮೌನದಲ್ಲಿ ನಿಂತಡೂ ಲಿಂಗಸಾಹಿತ್ಯವಿಲ್ಲ. ಸರ್ವಪ್ರಪಂಚುಗಳು ವಾಯುವಿಂದ ತೋರುತ್ತಿರಲು ಆ ಪ್ರಪಂಚನಳಿದು ಲಿಂಗವನೊಡೆವೆರಸುವೆನೆಂದು ಶ್ವಾಸ ನಿಃಶ್ವಾಸಂಗಳ ಪಿಡಿದು ನಿಲಿಸಿದರೂ ಲಿಂಗಸಾಹಿತ್ಯವಿಲ್ಲ. ಸದ್ಭಕ್ತಿವೆತ್ತು ಭಾವಪ್ರಸಂಗದಿಂ ಕಂಗಳಂ ಕಳೆದು ಜಿಹ್ವೆಯಂ ಕೊಯಿದು ಶಿರವನರಿದು, ಹಸ್ತವನುತ್ತರಿಸಿತ್ತಡೂ ಲಿಂಗಸಾಹಿತ್ಯವಿಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ ಅಷ್ಟಾಂಗಯೋಗ ಘಟ್ಟಿಗೊಂಡು, ಪ್ರಾಣ ಮನ ಪವನ ಹುರಿಗೂಡಿ, ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯವೆಂಬ ಷಡಾಧಾರದ ಬಳಿವಿಡಿದು, ನೆತ್ತಿಯಿಂದುತ್ತರಕ್ಕೆ ಉಚ್ಚಳಿಸಿ ಹಾಯಿದು, ನಡುನೆತ್ತಿ ತೂತಾದಡೂ ಲಿಂಗಸಾಹಿತ್ಯವಿಲ್ಲ. ಸತ್ಯ, ಸಮತೆ, ಸಮಾಧಾನ, ಸದ್ಭಾವ, ಸವಿರಕ್ತಿಯಿಂದತ್ಯಾನಂದ ತೋರುತ್ತಿರಲು ಅದು ನೆಲೆಗೊಂಡು ನಿಲ್ಲದಾಗಿ ಹೇಳದೆ ಬಂದು ಕೇಳದೆ ಹೋಯಿತ್ತು. ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ ಅನುಭವವ ಮಾಡಿ ಫಲವೇನಯ್ಯಾ ?
--------------
ಆದಯ್ಯ
ಅಂತರಂಗ ಬಹಿರಂಗದಲ್ಲಿ ಸರ್ವಾಚಾರ ಸಂಪತ್ತಿನ ಆಚರಣೆಯನರಿಯದ ಮೂಢಾತ್ಮಂಗೆ ಲಿಂಗಾಂಗ ಸಮರಸವ ಹೇಳಿ ಸರ್ವಾಂಗ ಸ್ನಾನಧೂಳನ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣ ಕ್ರಿಯಾಭಸಿತವ ಧರಿಸುವ ನಿರ್ಣಯವ ಹೇಳಿ ಅಂತರಂಗದ ಜಪವ ಹೇಳುವನೊಬ್ಬ ಆಚಾರದ್ರೋಹಿ ನೋಡಾ, ರಾಮನಾಥ.
--------------
ಜೇಡರ ದಾಸಿಮಯ್ಯ
ತ್ಯಾಗಾಂಗನಾಗಿ ಕೊಡುತ್ತಿದ್ದಲ್ಲಿ ಭೋಗಾಂಗನಾಗಿ ಸುಖಿಸುತ್ತಿದ್ದಲ್ಲಿ ಯೋಗಾಂಗನಾಗಿ ವಾಯುದ್ವಾರ ಭೇದಂಗಳನರಿತು ಧ್ಯಾನ ಧಾರಣ ಸಮಾದ್ಥಿಗಳಲ್ಲಿದ್ದಡೂ ಒಂದು ಕುರಿತು ಲಕ್ಷಸಿ ವಸ್ತು ಇದೇನೆಂದು ವಿಶ್ವಾಸದಿಂದಲ್ಲದಾಗದು. ಹಿಂದಕ್ಕಾದ ದೇವಪದವಂತರು ಮುಂದಕ್ಕೆ ಅರಿದು ಕೂಡುವ ಅರುಹಿರಿಯ ಶರಣತತಿಗಳೆಲ್ಲರು ವಿಶ್ವಾಸದಿಂದಲ್ಲದೆ ದೃಷ್ಟವ ಕಾಣರು. ಇದು ಕಾರಣ, ಬಾಹ್ಯಕರ್ಮ ಅಂತರಂಗ ಶುದ್ಧ ನಿರವಯವೆಂಬುದೊಂದು ಕುರುಹಿನ ನೆಮ್ಮುಗೆ ಉಂಟಹನ್ನಕ್ಕ ವಿಶ್ವಾಸಬೇಕು. ಇದು ಸಂಗನಬಸವಣ್ಣ ಕೊಂಡು ಬಂದ ಲಿಂಗದ ಬಟ್ಟೆ. ಬ್ರಹ್ಮೇಶ್ವರಲಿಂಗವೆಂಬ ವಸ್ತುವ ಕೂಡುವ ದೃಷ್ಟ.
--------------
ಬಾಹೂರ ಬೊಮ್ಮಣ್ಣ
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾದ್ಥಿ ಎಂದು ಈಯೆಂಟು ಅಷ್ಟಾಂಗಯೋಗಂಗಳು. ಈ ಯೋಗಂಗಳೊಳಗೆ ಉತ್ತರಭಾಗ, ಪೂರ್ವಭಾಗೆಯೆಂದು ಎರಡು ಪ್ರಕಾರವಾಗಿಹವು. ಯಮಾದಿ ಪಂಚಕವೈದು ಪೂರ್ವಯೋಗ; ಧ್ಯಾನ, ಧಾರಣ, ಸಮಾದ್ಥಿಯೆಂದು ಮೂರು ಉತ್ತರಯೋಗ. ಇವಕ್ಕೆ ವಿವರ: ಇನ್ನು ಯಮಯೋಗ ಅದಕ್ಕೆ ವಿವರ: ಅನೃತ, ಹಿಂಸೆ, ಪರಧನ, ಪರಸ್ತ್ರೀ, ಪರನಿಂದೆ ಇಂತಿವೈದನು ಬಿಟ್ಟು ಲಿಂಗಪೂಜೆಯ ಮಾಡುವುದೀಗ ಯಮಯೋಗ. ಇನ್ನು ನಿಯಮಯೋಗ- ಅದಕ್ಕೆ ವಿವರ: ಬ್ರಹ್ಮಚಾರಿಯಾಗಿ ನಿರಪೇಕ್ಷನಾಗಿ ಆಗಮಧರ್ಮಂಗಳಲ್ಲಿ ನಡೆವವನು. ಶಿವನಿಂದೆಯ ಕೇಳದಿಹನು. ಇಂದ್ರಿಯಂಗಳ ನಿಗ್ರಹವ ಮಾಡುವವನು. ಮಾನಸ, ವಾಚಸ, ಉಪಾಂಶಿಕವೆಂಬ ತ್ರಿಕರಣದಲ್ಲಿ ಪ್ರಣವ ಪಂಚಾಕ್ಷರಿಯ ಸ್ಮರಿಸುತ್ತ ಶುಚಿಯಾಗಿಹನು. ಆಶುಚಿತ್ತವ ಬಿಟ್ಟು ವಿಭೂತಿ ರುದ್ರಾಕ್ಷೆಯ ಧರಿಸಿ ಶಿವಲಿಂಗಾರ್ಚನತತ್ಪರನಾಗಿ ಪಾಪಕ್ಕೆ ಬ್ಥೀತನಾಗಿಹನು. ಇದು ನಿಯಮಯೋಗ. ಇನ್ನು ಆಸನಯೋಗ- ಅದಕ್ಕೆ ವಿವರ: ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ, ಅರ್ಧಚಂದ್ರಾಸನ, ಪರ್ಯಂಕಾಸನ ಈ ಐದು ಆಸನಯೋಗಂಗಳಲ್ಲಿ ಸ್ವಸ್ಥಿರಚಿತ್ತನಾಗಿ ಮೂರ್ತಿಗೊಂಡು ಶಿವಲಿಂಗಾರ್ಚನೆಯ ಮಾಡುವುದೀಗ ಆಸನಯೋಗ. ಇನ್ನು ಪ್ರಾಣಾಯಾಮ- ಅದಕ್ಕೆ ವಿವರ: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳು. ಇವಕ್ಕೆ ವಿವರ: ಪ್ರಾಣವಾಯು ಇಂದ್ರ ನೀಲವರ್ಣ. ಹೃದಯಸ್ಥಾನದಲ್ಲಿರ್ದ ಉಂಗುಷ್ಠತೊಡಗಿ ವಾ[ಣಾ]ಗ್ರಪರಿಯಂತರದಲ್ಲಿ ಸತ್ಪ್ರಾಣಿಸಿಕೊಂಡು ಉಚ್ಛಾಸ ನಿಶ್ವಾಸನಂಗೆಯ್ದು ಅನ್ನ ಜೀರ್ಣೀಕರಣವಂ ಮಾಡಿಸುತ್ತಿಹುದು. ಅಪಾನವಾಯು ಹರಿತವರ್ಣ. ಗುಧಸ್ಥಾನದಲ್ಲಿರ್ದು ಮಲಮೂತ್ರಂಗಳ ವಿಸರ್ಜನೆಯಂ ಮಾಡಿಸಿ ಆಧೋದ್ವಾರಮಂ ಬಲಿದು ಅನ್ನರಸ ವ್ಯಾಪ್ತಿಯಂ ಮಾಡಿಸುತ್ತಿಹುದು. ವ್ಯಾನವಾಯು ಗೋಕ್ಷಿರವರ್ಣ. ಸರ್ವಸಂದಿಗಳಲ್ಲಿರ್ದು ನೀಡಿಕೊಂಡಿರ್ದುದನು ಮುದುಡಿಕೊಂಡಿರ್ದುದನು ಅನುಮಾಡಿಸಿ ಅನ್ನಪಾನವ ತುಂಬಿಸುತ್ತಿಹುದು. ಉದಾನವಾಯ ಎಳೆಮಿಂಚಿನವರ್ಣ. ಕಂಠಸ್ಥಾನದಲ್ಲಿರ್ದು ಸೀನುವ, ಕೆಮ್ಮುವ, ಕನಸ ಕಾಣುವ, ಏಳಿಸುವ ಛರ್ದಿ ನಿರೋಧನಂಗಳಂ ಮಾಡಿ ಅನ್ನ ರಸವ ಆಹಾರಸ್ಥಾನಂಗೆಯಿಸುತ್ತಿಹುದು. ಸಮಾನವಾಯು ನೀಲವರ್ಣ. ನಾಬ್ಥಿಸ್ಥಾನದಲ್ಲಿರ್ದು ಅಪಾದಮಸ್ತಕ ಪರಿಯಂತರ ದೇಹಮಂ ಪಸರಿಸಿಕೊಂಡಂಥಾ ಅನ್ನರಸವನು ಎಲ್ಲಾ[ಲೋ] ಮನಾಳಂಗಳಿಗೆ ಹಂಚಿಕ್ಕುವುದು. ಈ ಐದು ಪ್ರಾಣಪಂಚಕ. ಇನ್ನು ನಾಗವಾಯು ಪೀತವರ್ಣ. [ಲೋ] ಮನಾಳಂಗಳಲ್ಲಿರ್ದು ಚಲನೆಯಿಲ್ಲದೆ ಹಾಡಿಸುತ್ತಿಹುದು. ಕೂಮವಾಯುವ ಶ್ವೇತವರ್ಣ. ಉದರ ಲಲಾಟದಲ್ಲಿರ್ದು ಶರೀರಮಂ ತಾಳ್ದು [ದೇಹಮಂ] ಪುಷ್ಟಿಯಂ ಮಾಡಿಕೊಂಡು ಬಾಯ ಮುಚ್ಚುತ್ತ ತೆರೆವುತ್ತ ನೇತ್ರದಲ್ಲಿ ಉನ್ಮೀಲನ ನಿಮೀಲನವಂ ಮಾಡಿಸುತ್ತಿಹುದು. ಕೃಕರವಾಯು ಅಂಜನವರ್ಣ. ನಾಸಿಕಾಗ್ರದಲ್ಲಿರ್ದು ಕ್ಷುಧಾದಿ ಧರ್ಮಂಗಳಂ ನೆಗಳೆ ಗಮನಾಗಮನಂಗಳಂ ಮಾಡಿಸುತ್ತಿಹುದು. ದೇವದತ್ತವಾಯು ಸ್ಫಟಿಕವರ್ಣ. ಗುಹ್ಯ[ಕಟಿ] ಸ್ಥಾನದಲ್ಲಿರ್ದು ಕುಳ್ಳಿರ್ದಲ್ಲಿ ಮಲಗಿಸಿ, ಮಲಗಿರ್ದಲ್ಲಿ ಏಳಿಸಿ ನಿಂದಿರಿಸಿ ಚೇತರಿಸಿ ಒರಲಿಸಿ ಮಾತಾಡಿಸುತ್ತಿಹುದು. ಧನಂಜಯವಾಯು ನೀಲವರ್ಣ. ಬ್ರಹ್ಮರಂಧ್ರದಲ್ಲಿರ್ದು ಕರ್ಣದಲ್ಲಿ ಸಮುದ್ರಘೋಷಮಂ ಘೋಷಿಸಿ ಮರಣಗಾಲಕ್ಕೆ ನಿರ್ಘೋಷಮಪ್ಪುದು. ಈ ಪ್ರಕಾರದಲ್ಲಿ ಮೂಲವಾಯುವೊಂದೇ ಸರ್ವಾಂಗದಲ್ಲಿ ಸರ್ವತೋಮುಖವಾಗಿ ಚರಿಸುತ್ತಿಹುದು. ಆ ಪವನದೊಡನೆ ಪ್ರಾಣ ಕೂಡಿ ಪ್ರಾಣದೊಡನೆ ಪವನ ಕೂಡಿ ಹೃದಯ ಸ್ಥಾನದಲ್ಲಿ ನಿಂದು ಹಂಸನೆನಿಸಿಕೊಂಡು ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಗ್ನೇಯ ಎಂಬ ಷಡುಚಕ್ರದಳಂಗಳಮೇಲೆ ಸುಳಿದು ನವನಾಳಂಗಳೊಳಗೆ ಚರಿಸುತ್ತಿಹುದು. ಅಷ್ಟದಳಂಗಳೇ ಆಶ್ರಯವಾಗಿ ಅಷ್ಟದಳಂಗಳ ಮೆಟ್ಟಿ ಚರಿಸುವ ಹಂಸನು ಅಷ್ಟದಳಂಗಳಿಂದ ವಿಶುದ್ಧಿಚಕ್ರವನೆಯ್ದಿ ಅಲ್ಲಿಂದ ನಾಸಿಕಾಗ್ರದಲ್ಲಿ ಹದಿನಾರಂಗುಲ ಪ್ರಮಾಣ ಹೊರಸೂಸುತ್ತಿಹುದು; ಹನ್ನೆರಡಂಗುಲ ಪ್ರಮಾಣ ಒಳಗೆ ತುಂಬುತ್ತಿಹುದು. ಹೀಂಗೆ ರೇಚಕ ಪೂರಕದಿಂದ ಮರುತ ಚರಿಸುತ್ತಿರಲು ಸಮಸ್ತ್ರ ಪ್ರಾಣಿಗಳ ಆಯುಷ್ಯವು ದಿನ ದಿನಕ್ಕೆ ಕುಂದುತ್ತಿಹುದು. ಹೀಂಗೆ ಈಡಾ ಪಿಂಗಳದಲ್ಲಿ ಚರಿಸುವ ರೇಚಕ ಪೂರಕಂಗಳ ಭೇದವನರಿದು ಮನ ಪವನಂಗಳ ಮೇಲೆ ಲಿಂಗವ ಸಂಬಂದ್ಥಿಸಿ ಮನ ಪವನ ಪ್ರಾಣಂಗಳ ಲಿಂಗದೊಡನೆ ಕೂಡಿ ಲಿಂಗ ಸ್ವರೂಪವ ಮಾಡಿ ವಾಯು ಪ್ರಾಣತ್ವವ ಕಳೆದು ಲಿಂಗ ಪ್ರಾಣಿಯ ಮಾಡಿ ಹೃದಯ ಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ ಪರಶಿವ ಧ್ಯಾನದಲ್ಲಿ ತರಹರವಾಗಿಪ್ಪುದೀಗ ಪ್ರಾಣಾಯಾಮ. ಇನ್ನು ಪ್ರತ್ಯಾಹಾರಯೋಗ-ಅದಕ್ಕೆ ವಿವರ: ಆಹಾರದಿಂ ನಿದ್ರೆ, ನಿದ್ರೆಯಿಂ ಇಂದ್ರಿಯಂಗಳು, ಇಂದ್ರಿಯಂಗಳಿಂದ ವಿಷಯಂಗಳು ಘನವಾಗುತ್ತಿಹುವು ನೋಡಾ. ಆ ವಿಷಯದಿಂದ ದುಃಕರ್ಮಗಳ ಮಿಗೆ ಮಾಡಿ ಜೀವಂಗೆ ಭವ ಭವದ ಬಂಧನವನೊಡಗೂಡಿ ಆಯಸಂ ಬಡುತ್ತಿಪ್ಪರಜ್ಞ್ಞಾನ ಕರ್ಮಿಗಳು; ಈ ಅವಸ್ಥೆಯ ಹೊಗದಿಹರು ಸುಜ್ಞಾನಿ ಧರ್ಮಿಗಳು. ಅದರಿಂದಲಾಹಾರಮಂ ಕ್ರಮ ಕ್ರಮದಿಂದ ಉದರಕ್ಕೆ ಹವಣಿಸುತ್ತ ಬಹುದು. ಗುರು ಕೃಪೆಯಿಂದ ಈ ಪ್ರಕಾರದಲ್ಲಿ ಸರ್ವೇಂದ್ರಿಯಂಗಳನು ಲಿಂಗಮುಖದಿಂದ ಸಾವಧಾನವ ಮಾಡಿಕೊಂಡಿಪ್ಪುದೀಗ ಪ್ರತ್ಯಾಹಾರಯೋಗ. ಈ ಐದು ಪೂರ್ವಯೋಗಂಗಳು. ಇನ್ನು ಧ್ಯಾನ, ಧಾರಣ, ಸಮಾದ್ಥಿಯೆಂದು ಮೂರು ಉತ್ತರಯೋಗಂಗಳು. ಇನ್ನು ಧ್ಯಾನಯೋಗ- ಅದಕ್ಕೆ ವಿವರ: ಅಂತರಂಗದ ಶುದ್ಧ ಪರಮಾತ್ಮ ಲಿಂಗವನೇ ಶಿವಲಿಂಗ ಸ್ವರೂಪವ ಮಾಡಿ ಕರಸ್ಥಲಕ್ಕೆ ಶ್ರೀಗುರು ತಂದು ಕೊಟ್ಟನಾಗಿ ಆ ಕರಸ್ಥಲದಲ್ಲಿದ್ದ ಶಿವಲಿಂಗವೇ ಪರಮಾರ್ಥಚಿಹ್ನವೆಂದರಿದು ಆ ಲಿಂಗವನೇ ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೇಯ, ಬ್ರಹ್ಮರಂಧ್ರ ಮುಖ್ಯವಾದ ಸ್ಥಾನಂಗಳಲ್ಲಿ ಆ ಶಿವಲಿಂಗಮೂರ್ತಿಯನೆ ಆಹ್ವಾನ ವಿಸರ್ಜನೆಯಿಲ್ಲದೆ ಧ್ಯಾನಿಪುದೀಗ ಧ್ಯಾನಯೋಗ. ಆ ಲಿಂಗವ ಭಾವ, ಮನ, ಕರಣ ಮುಖ್ಯವಾದ ಸರ್ವಾಂಗದಲ್ಲಿ ಧರಿಸುವುದೀಗ ಧಾರಣಯೋಗ. ಆ ಸತ್ಕಿ ್ರಯಾ ಜ್ಞಾನಯೋಗದಿಂದ ಪ್ರಾಣಂಗೆ ಶಿವಕಳೆಯ ಸಂಬಂದ್ಥಿಸಿ ಇಷ್ಟ, ಪ್ರಾಣ, ಭಾವವೆಂಬ ಲಿಂಗತ್ರಯವನು ಏಕಾಕಾರವ ಮಾಡಿ ಅಖಂಡ ಪರಿಪೂರ್ಣ ಕೇವಲ ಪರಂಜ್ಯೋತಿ ಸ್ವರೂಪವಪ್ಪ ಮಹಾಲಿಂಗದೊಳಗೆ ಸಂಯೋಗವಾಗಿ ಬ್ಥಿನ್ನವಿಲ್ಲದೆ ಏಕಾರ್ಥವಾಗಿಹುದೀಗ ಸಮಾದ್ಥಿಯೋಗ. ಇಂತೀ ಅಷ್ಟಾಂಗಯೋಗದಲ್ಲಿ ಶಿವಲಿಂಗಾರ್ಚನೆಯ ಮಾಡಿ ಶಿವತತ್ವದೊಡನೆ ಕೂಡುವುದೀಗ ಲಿಂಗಾಂಗಯೋಗ. ಇನ್ನು ಕರ್ಮಕಾಂಡಿಗಳು ಮಾಡುವ ಕರ್ಮಯೋಗಂಗಳು- ಅವಾವವೆಂದಡೆ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರವೆಂಬ ಈ ಐದನು ಲಿಂಗವಿರಹಿತವಾಗಿ ಮಾಡುತ್ತಿಪ್ಪರಾಗಿ ಈ ಐದು ಕರ್ಮಯೋಗಂಗಳು. ಅವರು ಲಕ್ಷಿಸುವಂಥಾ ವಸ್ತುಗಳು ಉತ್ತರಯೋಗವಾಗಿ ಮೂರು ತೆರ. ಅವಾವವೆಂದಡೆ: ನಾದಲಕ್ಷ ್ಯ, ಬಿಂದುಲಕ್ಷ ್ಯ, ಕಲಾಲಕ್ಷ ್ಯವೆಂದು ಮೂರು ತೆರ. ನಾದವೇ ಸಾಕ್ಷಾತ್ ಪರತತ್ವವೆಂದೇ ಲಕ್ಷಿಸುವರು. ಬಿಂದುವೇ ಆಕಾರ, ಉಕಾರ, ಮಕಾರ, ಈ ಮೂರು ಶುದ್ಧಬಿಂದು ಸಂಬಂಧವೆಂದೂ. ಆ ಶುದ್ಧ ಬಿಂದುವೇ ಕೇವಲ ದಿವ್ಯ ಪ್ರಕಾಶವನುಳ್ಳದೆಂದೂ ಲಕ್ಷಿಸುವರು. ಕಲೆಯೇ ಚಂದ್ರನ ಕಲೆಯ ಹಾಂಗೆ, ಸೂರ್ಯನ ಕಿರಣಂಗಳ ಹಾಂಗೆ, ಮಿಂಚುಗಳ ಪ್ರಕಾಶದ ಹಾಂಗೆ, ಮುತ್ತು, ಮಾಣಿಕ್ಯ, ನವರತ್ನದ ದೀಪ್ತಿಗಳ ಹಾಂಗೆ, ಪ್ರಕಾಶಮಾಯವಾಗಿಹುದೆಂದು ಲಕ್ಷಿಸುವುದೀಗ ಕಲಾಲಕ್ಷ ್ಯ. ಈ ಎಂಟು ಇತರ ಮತದವರು ಮಾಡುವ ಯೋಗಂಗಳು. ಇವ ಲಿಂಗವಿರಹಿತವಾಗಿ ಮಾಡುವರಾಗಿ ಕರ್ಮಯೋಗಂಗಳು. ಈ ಕರ್ಮಕೌಶಲ್ಯದಲ್ಲಿ ಲಿಂಗವಿಲ್ಲ ನೋಡಾ. ಅದುಕಾರಣ ಇವ ಮುಟ್ಟಲಾಗದು. ಇನ್ನು ವೀರಮಾಹೇಶ್ವರರುಗಳ ಲಿಂಗಸಂಧಾನವೆಂತೆಂದರೆ: ಬ್ರಹ್ಮರಂಧ್ರದಲ್ಲಿಪ್ಪ ನಾದ ಚೈತನ್ಯವಪ್ಪ ಪರಮ ಚಿತ್ಕಲೆಯನೇ ಭಾವ, ಮನ, ಕರದಲ್ಲಿ ಶ್ರೀಗುರು ತಂದು ಸಾಹಿತ್ಯವ ಮಾಡಿದನಾಗಿ ಭಾವದಲ್ಲಿ ಸತ್ತ್ವರೂಪವಪ್ಪ ಭಾವಲಿಂಗವೆನಿಸಿ, ಪ್ರಾಣದಲ್ಲಿ ಚಿತ್ ಸ್ವರೂಪವಪ್ಪ ಪ್ರಾಣಲಿಂಗವೆನಿಸಿ, ಕರಸ್ಥಲದಲ್ಲಿ ಆನಂದ ಸ್ವರೂಪವಪ್ಪ ಇಷ್ಟಲಿಂಗವೆನಿಸಿ, ಒಂದೇ ವಸ್ತು ತನು, ಮನ, ಭಾವಂಗಳಲ್ಲಿ ಇಷ್ಟ, ಪ್ರಾಣ, ಭಾವವಾದ ಭೇದವನರಿದು ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ ತೃಪ್ತಿಲಿಂಗವ ಭಾವಜ್ಞಾನದಿಂದ ಗ್ರಹಿಸಿ ಈ ಲಿಂಗತ್ರಯವಿಡಿದಾಚರಿಸಿ ಲಿಂಗದೊಡನೆ ಕೂಡಿ ಲಿಂಗವೇ ತಾನು ತಾನಾಗಿ ವಿರಾಜಿಸುತ್ತಿಪ್ಪುದೀಗ ಶಿವಯೋಗ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಧ್ಯಾನ ಧಾರಣ ಸಮಾದ್ಥಿಯೆಂಬೀ ಮೂರು, ಕರ್ಮಕಾಂಡ. ಚಿಚ್ಛಕ್ತಿ ಚಿದ್ಘನ ಸುಶಕ್ತಿ ಚಿದಾದಿತ್ಯಸಂಪದ ತ್ರಿವಿಧಭೇದ, ಜ್ಞಾನಕಾಂಡ. ಇಂತೀ ಭಾವ, ನಿಜವ ನೆಮ್ಮಿ ಕುರುಹುದೋರದೆ, ಭಾವ ನಿರ್ಭಾವವಾಗಿ ನಿಂದುದು ಪ್ರಾಣಲಿಂಗಸಂಬಂಧ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಬಳಿಕ ಕ್ರಿ....ತನ್ನ ಶಿಷ್ಯನ ಕರೆದೆಲೆ ಮಗನೆ ನಿನ್ನ ಪ್ರಾ[ಣ]ಲಿಂಗವಿದು ತಾನೆ, ತತ್ವಾತೀತಮಾದ ಪರವಸ್ತುವಿದು ತಾನೆ, ಹರಿಬ್ರಹ್ಮರರಸಿ ಕಾಣದ ನಿಜತತ್ವವಿದ ನಿನ್ನು ನಿಮಿ...ರ್ಧಮಾದರೂ ನಿನ್ನ ಶರೀರದಿಂ ವಿಯೋಗಮಾಗದಂತೆ ಸಾವಧಾನದಿಂ ಧರಿಸು, ತ್ರಿಕಾಲಂ ತಪ್ಪದರ್ಚಿಸುತ್ತಿರು, ಲಿಂಗಾರ್ಪಿತವಲ್ಲ ದೇನೊಂದನು ಸ್ವೀಕರಿಸದಿರು, ಸಕಲಭೋಗಮೋಕ್ಷಂಗಳೆಲ್ಲಾ...ಸಾರಿದವೆಂದು ನಂಬು, ಸರ್ವ ಕ್ಲೇಶಮಂ ಬಿಡು, ನಿತ್ಯಸುಖಿಯಾಗು, ಸತ್ಯಮಿದೆಂಬಿವು ಮೊದ ಲಾದ ಶಿವಕ್ರಿಯೆಗಳ ನುಪದೇಶಂಗೆಯುಂತು ಪೇಳ ವೀರಶೈವದೀಕ್ಷೆಯಾದೊಡೆ ಆಜ್ಞಾದೀಕ್ಷೆ ಉಪ[ಮಾ]ದೀಕ್ಷೆ, ಸ್ವಸ್ಥಿಕಾರೋಹಣ, ಕಳಶಾಬ್ಥಿಷೇಕ, ವಿಭೂತಿಯ ಪಟ್ಟ, ಲಿಂಗಾಯತ, ಲಿಂಗಸ್ವಾಯತಮೆಂದು ಸಪ್ತವಿಧಮಾಗಿಹುದವರಲ್ಲಿ ಶ್ರೀಗುರು ತನ್ನಾಜ್ಞೆಯನೆ ಶಿಷ್ಯನಲ್ಲಿ ಪ್ರತಿಪಾದಿಸೊದೆ ಆಜ್ಞಾದೀಕ್ಷೆ ಎನಿಸೂದು. ಪುರಾತನ ಸಮಯಾಚಾರಕ್ಕೆ ಸದೃಶಮಾಗಿ ಮಾಡೂದೆ ಉಪಮಾದೀಕ್ಷೆ ಎನಿಸೂದು. ಸ್ವಸ್ತಿಕಮೆಂಬ ಮಂಡಲದ ಮೇಲೆ ಶಿಷ್ಯನಂ ಕುಳ್ಳಿರಿಸಿ ಮಂತ್ರ ನ್ಯಾಸಾದಿಗಳಂ ಮಾಡಿ ಮಂತ್ರಶರೀರಿ ಎನಿಸೂದೆ ಸ್ವಸ್ತಿಕಾರೋಣವೆನಿಸೂದು. ಪಂಚಕಳಶೋದಕಂಗಳಿಂ ಶಿಷ್ಯಂಗೆ ಸ್ನಪನಂಗೆಯ್ವುದೆ ಕಳಶಾಬ್ಥಿಷೇಕವೆನಿ ಸೂದು. ಆಗಮೋಕ್ತಸ್ಥಾನಂಗಳಲ್ಲಿ ತತ್ತನ್ಮಂತ್ರಂಗಳಿಂ ಶ್ರೀವಿಭೂತಿ ಧಾರಣಂ ಗೆಯ್ವುದೆ ವಿಭೂತಿಯ ಪಟ್ಟವೆನಿಸೂದು. ಆಚಾರ್ಯಂ ತಾನೂ ಶಿಷ್ಯಂಗೆ ಕೊಡಲುತಕ್ಕ ಲಿಂಗವನರ್ಚಿಸಿ ಶಿಷ್ಯನಂ ನೋಡಿಸೊದೆ ಲಿಂಗಾಯತವೆನಿಸೂದು. ಆ ಶ್ರೀಗುರುವಿತ್ತ ಲಿಂಗವನೆ ಶಿಷ್ಯನು ಸಾವಧಾನದಿಂದುತ್ತಮಾಂಗಾದಿ ಸ್ಥಾನಂಗಳಲ್ಲಿ ಧರಿಸೂದೆ ಲಿಂಗಸ್ವಾಯತವೆನಿಸೂದು. ಇಂತು ಶಾಸ್ತ್ರೋಕ್ತ ಕ್ರಮದಿಂ ಸಾಂಗಿಕಮಾದ ಶಿವದೀಕ್ಷೆಯಿಂ ಲಿಂಗಾಂಗಸಂಬಂದ್ಥಿಯಾದ ವೀರಶೈವನು ಮಾಳ್ಪ ಶಿವಲಿಂಗ ಪೂಜಾಕ್ರಮವೆಂತೆಂದೊಡೆ :ಶ್ರೇಷ್ಠರುಗಳಾ ವಾವುದನಾಚರಿಸುವರದನೆ ಲೋಕದವರನುವರ್ತಿಪುದರಿಂ, ಜಗಕ್ಕುಪದೇಶ ಮಪ್ಪಂತೆ ತಾನು ನಿತ್ಯನಿರ್ಮಲನಾದರೂ ಮಂತ್ರನ್ಯಾಸಾ... [ಸಾಂಸ್ಥಿಕಮಾಗಿ] ಶಿವಲಿಂಗಾರ್ಚನೆಯಂ ಮಾಡುವಲ್ಲಿ ಮೊದಲು...ಳತನುಲಿಂಗುಪದೇಶಮಂ ಮಾಳ್ಪುದು. ಪದಿನೆಂಟುಕುಲ ಪ್ರವರ್ತನೆಯನಳಿದು, ಶರಣರ ಕುಲ ವನೊ.... ಶಿವಪೂಜೋಪಚಾರವೆ ತನಗೆ ಸಂಸಾರವೆನಲದುವೆ ನಿಸ್ಸಂಸಾರ ದೀಕ್ಷೆ ತ್ರಿಮಲ ಭವದೊಳು...ಲಿಂಗಾಂಗಸಮರಸವ ಮಾಳ್ಪುದೆ ತತ್ವದೀಕ್ಷೆ. ಲಿಂಗಾಂಗಸ್ವಯ ಲಿಂಗ ನೀನೆಂದು ತಿಳುಪುವದೆ ಅ...ಹವು ಹಿಂಗದಾ ಸಚ್ಚಿದಾನಂದಬ್ರಹ್ಮಾತ್ಮಕ ತಾನೆನಲ ದುಸತ್ಯಶುದ್ಧೀದಕ್ಷೆ. ಯೀ ಸಪ್ತಕವ....ಯದೆಹುದೆ ಏಕಾಗ್ರಚಿತ್ತದೀಕ್ಷೆ. ವ್ರತನಿಯಮಂ[ಗಳಲ್ಲಿ]....ಯ ಕರಣಭಾವಾರ್ಪಿತಗಳಂ ಸರ್ವಕಾಲದೊಳು ಇಷ್ಟ ಪ್ರಾಣವಾಸ ಲಿಂಗಂ.....ದಿರ್ಪುದೆ ....ದೀಕ್ಷೆಯೆನಿಪುದು. ಆದಿಮಧ್ಯಾವ ಸಾನರಹಿತ ಶಿವ ತಾನೆ ನಲ....ಚ್ಚಿ ಬೇರ್ಪಡಿಸದಿರವೆ ಸದ್ಯೋನ್ಮುಕ್ತಿದೀಕ್ಷೆ. ಈ ಏಳನು ಭಾವಕುಪದೇಶ ಮಂ....(ಅಪೂರ್ಣ)
--------------
ಶಾಂತವೀರೇಶ್ವರ
ಷಡ್ವಿಧ ಚಕ್ರಂಗಳಿಲ್ಲದಂದು, ಷಡ್ವಿಧ ಮೂರ್ತಿಗಳಿಲ್ಲದಂದು, ಷಡ್ವಿಧ ಲಿಂಗಂಗಳಿಲ್ಲದಂದು, ಷಡ್ವಿಧ ಶಕ್ತಿಗಳಿಲ್ಲದಂದು, ಷಡ್ವಿಧ ಭಕ್ತಿಯಿಲ್ಲದಂದು, ಷಡ್ವಿಧ ಹಸ್ತಂಗಳಿಲ್ಲದಂದು, ಷಡ್ವಿಧ ಕಲೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಅಕಾರ ಉಕಾರ ಮಕಾರಗಳಿಲ್ಲದಂದು, ನಾದ ಬಿಂದು ಕಲೆಗಳಿಲ್ಲದಂದು, ಗುರು ಲಿಂಗ ಜಂಗಮವಿಲ್ಲದಂದು, ಇಷ್ಟ ಪ್ರಾಣ ಭಾವಂಗಳಿಲ್ಲದಂದು, ಧ್ಯಾನ ಧಾರಣ ಸಮಾದ್ಥಿಗಳಿಲ್ಲದಂದು, ನಾಮ ರೂಪ ಕ್ರಿಯೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಮನ ನಿರ್ಮನಂಗಳಿಲ್ಲದಂದು, ಭಾವ ನಿರ್ಭಾವಂಗಳಿಲ್ಲದಂದು, ಜ್ಞಾನ ಮಹಾಜ್ಞಾನಂಗಳಿಲ್ಲದಂದು, ಶಬ್ದ ನಿಃಶಬ್ದಂಗಳಿಲ್ಲದಂದು, ಆತ್ಮ ನಿರಾತ್ಮಂಗಳಿಲ್ಲದಂದು, ನಾನು ನೀನಿಲ್ಲದಂದು, ಅತ್ತತ್ತಲೆ. ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನ ನಿರ್ಭರಿತ ನಿಃಶೂನ್ಯ ಅಪರಂಪರ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿರ್ಗಮನಿಯಾದ ಶರಣಂಗೆ ಸಂಧಾನವಲ್ಲದೆ ಗಮನಿಯಾದ ಶರಣಂಗೆ ಅನುಗೊಳದೆಂಬ ಅಣ್ಣಗಳು ನೀವು ಕೇಳಿರೇ. ಸೂರ್ಯನು ರಥವನೇರಿ ಪದಾರ್ಥಂಗಳ ಚಬುಕುಮಾಡಿ ಮನೋವೇಗದಿಂ ಪಶ್ಚಿಮ ಸಮುದ್ರಕ್ಕೆ ದಾಳಿಯಿಡಲು ರವಿಕಿರಣಂಗಳು ಹಿಂದುಳಿದಿಪ್ಪವೇ? ಅದು ಕಾರಣ- ಪುಷ್ಪವಿದ್ದಲ್ಲಿ ಪರಿಮಳವಿಪ್ಪುದು. ಅಂಗವಿದ್ದಲ್ಲಿ ಲಿಂಗವಿಪ್ಪುದು. ಲಿಂಗವಿದ್ದಲ್ಲಿ ಆ ಲಿಂಗದ ಮೇಲೆ ಮನವಿಪ್ಪುದು. ಲಿಂಗದ ಮೇಲೆ ಮನವಿಪ್ಪಲ್ಲಿಯೇ ಶರಣ. ಆ ಶರಣ ನಡೆದಲ್ಲಿಯೇ ಉರಿವಗ್ನಿಯ ಮೇಲೆ ತಂಗಾಳಿ ಬೀಸಿದಂತೆ. ತ್ರಿಪುಟಿಯ ಮೇಲೆ ಚಿದ್ಭೆಳಗು ಓಲಾಡುತ್ತಿದೆ. ಆ ಶರಣ ನೋಡುವಲ್ಲಿಯೇ ಪ್ರಣವದ ಬಳ್ಳಿ ಮನವ ಸುತ್ತುತ್ತಿದೆ. ಆ ಶರಣ ನೋಡುವಲ್ಲಿಯೇ ಪಂಚವರ್ಣಂಗಳ ಸ್ವರೂಪು ಲಿಂಗಾರ್ಪಿತವಾಗುತ್ತಿದೆ. ಶರಣ ಕುಂಬ್ಥಿಸುವಲ್ಲಿಯೇ ಓಂಕಾರ ಒಡಗೂಡುವುದಯ್ಯ. ಶರಣ ರೇಚಿಸುವಲ್ಲಿಯೇ ಪಂಚಾಕ್ಷರಂಗಳು ಎಡೆಯಾಡುತ್ತಿವೆ. ಶರಣ ಸುಳಿವಲ್ಲಿಯೇ ಹಲವು ಪ್ರಕಾರದ ವಸ್ತುಗಳ ತನುಸೋಂಕು ಲಿಂಗಮನವ ತುಂಬುತ್ತಿದೆ. ಇದು ಕಾರಣ ತೋಂಟದಾರ್ಯನ ಕರುಣಪ್ರಸಾದಮಂ ಪಡೆದು ತತ್ವಸ್ವರೂಪ ಧ್ಯಾನ ಧಾರಣ ಅರ್ಪಿತಾವಧಾನವನರಿದ ಶರಣಂಗೆ ಗಮನಾಗಮನವೆಂಬುಭಯವುಂಟೇ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಅಯ್ಯ ! ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯು ಪ್ರಾಣಗುಣಂಗಳ ನಷ್ಟವ ಮಾಡಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾನ್ಯ, ಧಾರಣ, ಸಮಾಧಿಯೆಂಬ ಹಠಯೋಗ ಜಡಶೈವಮಾರ್ಗವನುಳಿದು, ನಿಭ್ರ್ರಾಂತ, ನಿಶ್ಚಿಂತ, ನಿರ್ಗುಣಾನಂದಲೀಲೆಯನರಿದು, ಹಿಂದೆ ಹೇಳಿದ ಸದ್ಭಕ್ತ_ಮಹೇಶ_ಪ್ರಸಾದಿಸ್ಥಲವ ಅಂಗವ ಮಾಡಿಕೊಂಡು ಸರ್ವಾಂಗಲೋಚನಮೂರ್ತಿಯಾಗಿ ಪ್ರಭಾವಿಸುವ ನಿಜಪ್ರಾಣಲಿಂಗಿಯಂತರಂಗದಲ್ಲಿ ಚಿನ್ಮಯ ಸ್ವರೂಪಲೀಲೆಯಿಂ ಸಮಸ್ತ ತತ್ತ್ವಾನುಭಾವವನೊಳಗು ಮಾಡಿಕೊಂಡು ಹದಿನಾಲ್ಕು ಸ್ಥಲಂಗಳ ಗರ್ಭೀಕರಿಸಿಕೊಂಡು ಐದು ಸಾವಿರದ ನೂರ ಎಂಬತ್ತುನಾಲ್ಕು ಮಂತ್ರಮಾಲೆಗಳ ಪಿಡಿದುಕೊಂಡು ಇಪ್ಪತ್ತುನಾಲ್ಕು ಸಕೀಲಗರ್ಭದಿಂ, ಬಂಗಾರ ಲೋಹವನೊಳಕೊಂಡಂತೆ, ತನ್ನ ಸೋಂಕಿದವರೆಲ್ಲ ತನ್ನಂತೆಯೆಂಬ ಗುರುವಚನೋಕ್ತಿಪ್ರಮಾಣದಿಂದೆ ಶಬ್ದದೊಳಗೆ ನಿಃಶಬ್ದವಡಗಿರ್ಪ ಹಾಂಗೆ ಏಕಸ್ವರೂಪಿನಿಂದೆ ಯಜನಸ್ವರೂಪಮೂರ್ತಿ ಜಂಗಮಲಿಂಗವಾಗಿ ನೆಲಸಿರ್ಪುದು ನೋಡ ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಧ್ಯಾನ ಧಾರಣ ಸಮಾಧಿ ಯೋಗಂಗಳಿಂದ ಕಾಬುದು ತನುಪ್ರಾಪ್ತಿ ಐಸೆ ? ಅದು ಸ್ಥೂಲ ಸೂಕ್ಷ್ಮ ಕಾರಣಕ್ಕೆ ಘಟಯೋಗಸಂಬಂಧ. ಅದು ಬ್ರಹ್ಮನ ಭಿತ್ತಿ, ವಿಷ್ಣುವಿನ ಆಗು, ರುದ್ರನ ಚೇಗೆ, ಅದು ಗುರು ಚರ ಪರಕ್ಕೆ ಕೊಟ್ಟ ಹಸಿಗೆ. ಸಾಕಾರದಲ್ಲಿ ಕಂಡು, ನಿರಾಕಾರದಲ್ಲಿ ಅರಿದು, ಬೆಳಗಿನ ಬಯಲಲ್ಲಿ ನಿರವಯಾಂಗನಾಗಿ ಇರಬೇಕು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವನರಿವುದಕ್ಕೆ.
--------------
ಶಿವಲೆಂಕ ಮಂಚಣ್ಣ
ಲಿಂಗತನುವಿಂಗೆ ಶೃಂಗಾರವಪ್ಪ ತೆರನಾವುದೆಂದಡೆ: ಕಾಮ ಕ್ರೋಧ ಲೋಭ ಮೋಹಾದಿಗಳಲ್ಲಿ ತೆರಪುಗೊಡದಿಪ್ಪುದು. ಲಿಂಗವೆ ಅಂಗವಾಗಿ, ಧ್ಯಾನ ಧಾರಣ ನಿಜವಾಸನಿವಾಸವಾಗಿ, ನಿಶ್ಚಯ ನಿಜತತ್ವವಾಗಿ ನಿಂದುದೆ ಆಭರಣವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಧ್ಯಾನದಲ್ಲಿ ಕುಳ್ಳಿರ್ದು, ಜ್ಞಾನದಲ್ಲಿ ನೋಡಿ, ಮೌನ ಮುಗ್ಧವ ಮಾಡಿ, ಸ್ವಾನುಭಾವದಿಂದರಿದು, ಮತ್ತೇನೇನು ಹೊದ್ದಲೀಯದೆ, ತಾನು ತಾನಾಗಿ, ಜ್ಞಾನಕ್ಕತೀತನಾಗಿ, ಧ್ಯಾನ ಧಾರಣ ಸಮಾಧಿಯ ಮೆಟ್ಟಿ ನಿಂದ ನಿಜಲಿಂಗೈಕ್ಯಂಗೆ ನಮೋ ನಮೋ ಎಂಬೆ. ಇಂದೆನ್ನ ಭವ ನಷ್ಟವಾಗಿ ಹೋದವು ಕಾಣಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ.
--------------
ಹಡಪದ ಅಪ್ಪಣ್ಣ
ಇಹಲೋಕ ಪರಲೋಕವೆಂಬ ಸಂದಳಿಯಿತ್ತಯ್ಯಾ. ಗುರುವಿನ ಹಸ್ತದಲ್ಲಿ ಸತ್ತು, ಪಂಚಾಕ್ಷರಿಯಿಂದೆತ್ತಿದ ಕಾರಣದಲ್ಲಿ ; ನಿತ್ಯವೂ ಲಿಂಗಾರ್ಚನೆಯ ಮಾಡುವ ಕಾರಣದಲ್ಲಿ; ನಿತ್ಯವೂ ವಿಭೂತಿ ರುದ್ರಾಕ್ಷಿಯ ಧಾರಣ ಮಾಡುವ ಕಾರಣದಲ್ಲಿ; ಇಹಲೋಕವೆಂದೇನು, ಪರಲೋಕವೆಂದೇನು, ಹಂಗು ಹರಿದು ನಾನು ನೀನಾದ ಬಳಿಕ? ಎಲೆ ಅಯ್ಯಾ, ಭಕ್ತರ ಸವಾಂಗ ಲಿಂಗತನು; ಭಕ್ತರಿಪ್ಪ ಲೋಕವೆ ರುದ್ರಲೋಕ. ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿನ್ನ ಹಸ್ತವ ಮಸ್ತಕದಲ್ಲಿಟ್ಟಡಯಿತ್ತು! .
--------------
ಸಿದ್ಧರಾಮೇಶ್ವರ
ಅಯ್ಯಾ, ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಕ್‍ಜ್ಞಾನ ಸದ್ವರ್ತನೆ ಸಗುಣ ನಿರ್ಗುಣ ನಿಜಗುಣ ಸಚ್ಚರಿತ್ರ ಸದ್ಭಾವ ಅಕ್ರೋಧ ಸತ್ಯವಚನ ಶಮೆದಮೆ ಭವಿಭಕ್ತಭೇದ ಸತ್ಪಾತ್ರದ್ರವ್ಯಾರ್ಪಣ ಗೌರವಬುದ್ಧಿ ಲಿಂಗಲೀಯ ಜಂಗಮಾನುಭಾವ ದಶವಿಧಪಾದೋದಕ ಏಕಾದಶಪ್ರಸಾದ ಷೋಡಶಭಕ್ತಿನಿರ್ವಾಹ, ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಚನೆ, ತ್ರಿವಿಧ ಷಡ್ವಿಧ ನವವಿಧ ಜಪ, ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಪಣ. ಚಿದ್ವಿಭೂತಿ ಸ್ನಾನ ಧೂಳನ ಧಾರಣ, ಸರ್ವಾಂಗದಲ್ಲಿ ಚಿದ್ರುದ್ರಾಕ್ಷಿಧಾರಣ, ತಾ ಮಾಡುವ ಸತ್ಯಕಾಯಕ, ತಾ ಬೇಡುವ ಸದ್ಭಕ್ತಿಭಿಕ್ಷ, ತಾ ಕೊಟ್ಟು ಕೊಂಬ ಭೇದ, ತಾನಾಚರಿಸುವ ಸತ್ಯ ನಡೆನುಡಿ, ತಾ ನಿಂದ ನಿರ್ವಾಣಪದ. ಇಂತೀ ಬತ್ತೀಸ ನೆಲೆಕಲೆಗಳ ಸದ್ಗುರುಮುಖದಿಂದರಿದ ಬಸವ ಮೊದಲಾದ ಸಮಸ್ತ ಗಣಂಗಳೆಲ್ಲಾ ಪ್ರಮಥ ನಿರಾಭಾರಿ ವೀರಶೈವ ಸನ್ಮಾರ್ಗವಿಡಿದಾಚರಿಸಿದರು ನೋಡಾ. ಇಂತು ಪ್ರಮಥಗಣವಾಚರಿಸಿದ ಸತ್ಯ ಸನ್ಮಾರ್ಗವರಿಯದ ಮೂಢ ಅಧಮರನೆಂತು ಶಿವಶಕ್ತಿ ಶಿವಭಕ್ತ ಶಿವಜಂಗಮವೆಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಶ್ರುತಿವಿಧಿಸಿದ ಶ್ರೀವಿಭೂತಿಯ ಪರಂಜ್ಯೋತಿಯೆಂದರಿದು ಭವಭೀತಿ ಮೃತ್ಯುಭಯಕ್ಕಂಜಿ ಜಮದಗ್ನಿ ಅಗಸ್ತ್ಯ ಕಸ್ಯಪ ಮೊದಲಾದ ಎಲ್ಲಾ ಋಷಿಗಳು ಧರಿಸಿ ಕೊರಜರಾದರು ನೋಡಾ. ಶ್ರೀವಿಭೂತಿಯ ಪರಂಜ್ಯೋತಿಯೆಂದರಿದು ಎಲ್ಲಾ ದೇವರ್ಕಳು ಎಲ್ಲಾ ಶ್ರುತಿ ಸ್ಮøತಿಗಳು ಧರಿಸಿದವು ನೋಡಾ. ಶ್ರೀವಿಭೂತಿಯೆ ಪರಂಜ್ಯೋತಿಯೆಂದರಿದು ಗಾಯತ್ರಿ ಬ್ರಹ್ಮ ವಿಷ್ಣು ಇಂದ್ರಾದಿ ದೇವರ್ಕಳು ಧರಿಸಿದರು ನೋಡಾ. ಶ್ರೀವಿಭೂತಿಯ ಪರಂಜ್ಯೋತಿ ನಿರುತವಿದು ನಂಬಿ ಧರಿಸಿ ಬದುಕು ಮನುಜಾ. ಶ್ರೀವಿಭೂತಿಯೆ ಪರಂಜ್ಯೋತಿಯೆಂಬುದು. ಇದಕ್ಕೆ ಜಾಬಾಲೋಪನಿಷತ್ : ``ಓಂ ಸ ಏಷ ಭಸ್ಮ ಜ್ಯೋತಿ ಸ್ಸಏಷ ಭಸ್ಮ ಜ್ಯೋತಿರಿತ'' ಇಂತೆಂದುದು ಶ್ರುತಿ. ಇದಕ್ಕೆ ಮಾನವಪುರಾಣೇ : ``ಭಸ್ಮ ಜ್ಯೋತಿರ್ಭವತ್ಯೇವ ಶಿವಾಖ್ಯಂ ನ ಹಿ ಸಂಶಯಃ | ಜಾಬಾಲೋಪನಿಷತ್ಸರ್ವಂ ಪ್ರಾಹೇದಂ ಪರಯಾ ಮುದಾ ||'' ಇಂತೆಂದುದಾಗಿ, ಇನ್ನು ವಿಭೂತಿ ಅಭಿಮಂತ್ರ ವಿಭೂತಿಧಾರಾ ಎಂಬುದಕ್ಕೆ ಕಾತ್ಯಾಯನ ಗೃಹ್ಯೇ, ಕಾತ್ಯಾಯನ ಸ್ಮೃತಿ, ಬೋಧಾಯನ ಸ್ಮೃತಿ, ಅಭಿಮಂತ್ರ ಶ್ರುತಿ : ``ಮಾನಸ್ತೋಕೇ ತನಯೇ ಮಾನ ಆಯುಷಿ ಮಾನೋ ಗೋಷು ಮಾನೋ ಅಶ್ವೇಷು ರೀರಿಷಃ | ವೀರಾನ್ಮಾನೋ ರುದ್ರ ಭಾಮಿತೋ ವಧೀರ್ಹವಿಷ್ಮಂತೋ ಶಮಿತ್ವಾ ಹವಾಮಹೇ ||'' ಇಂತೆಂದುದು ಶ್ರುತಿ. ಇನ್ನು ವಿಭೂತಿಧಾರಾ ಎಂಬುದಕ್ಕೆ ಶ್ರುತಿ: ``ಓಂ, ಕುಕ್ಷರುಷಿ ರುದ್ರೋ ದೇವತಾ ಜಗತೀ ಛಂದಃ | ಓಂ, ತ್ರಿಯಾಯುಷಂ ಜಮದಗ್ನೇಃ ಕಶ್ಯಪಸ್ಯ ತ್ರಿಯಾಯುಷಂ | ಅಗಸ್ತ್ಯಸ್ಯ ತ್ರಿಯಾಯುಷಂ ತನ್ಮೇ ಅಸ್ತು ತ್ರಿಯಾಯುಷಂ | ಯದ್ದೇವಾನಾಂ ತ್ರಿಯಾಯುಷಂ ಶತಾಯುಷಂ ಕುರು ತ್ವಾನಿ || ಲಲಾಟ ಭುಜದ್ವಯಂ ನಾಭೇರುತ್ವಾರುಷಿ | ಬ್ರಹ್ಮಣ ರುಷಿ ವೈದಿಕಂ ಸದಾ || '' ಇಂತೆಂದುದು ಶ್ರುತಿ. ಇದಕ್ಕೆ ಬೋಧಾಯನ ಶ್ರುತಿ : ``ಮಾನಸ್ತೋಕೇತ್ಯಾದಿ ಮಂತ್ರೇಣ ಮಂತ್ರಿತಂ ಭಸ್ಮ ಧಾರಯೇತ್ | ಊಧ್ರ್ವಪುಂಡ್ರಂ ಭವೇತ್ ಸಾಮ ಮಧ್ಯಪುಂಡ್ರಂ ಯಜೂಂಷಿ ಚ | ಅಧಃ ಪುಂಡ್ರಮೃಚಃ ಸಾಕ್ಷಾತ್ ತಸ್ಮಾತ್ ಪುಂಡ್ರಂ ತ್ರಿಯಾಯುಷಂ ||'' ಇದಕ್ಕೆ ಲೈಂಗ್ಯ ಪುರಾಣೇ : ``ಅಕಾರೋನಾಮಿಕಂ ಪ್ರೋಕ್ತಂ ಉಕಾರೋ ಮಧ್ಯಮಾಂಗುಲಿಃ | ಮಕಾರೋ ತಜ್ರ್ಜನಿಸ್ಥಾನಂ ತ್ರಿಭಿಃ ಕುರ್ಯಾತ್ ತ್ರಿಪುಂಡ್ರಕಂ ||'' ಇಂತೆಂದುದಾಗಿ. ಇದಕ್ಕೆ ಕಾಲಾಗ್ನಿರುದ್ರೋಪನಿಷತ್ : ``ಹರಃ ಓಂ, ಅಥ ಕಾಲಾಗ್ನಿರುದ್ರಂ ಭಗವಂತಂ ಸನತ್ಕುಮಾರಃ ಅಪಪ್ರಚ್ಛಧೀಹಿ ಭಗವನ್ ತ್ರಿಪುಂಡ್ರವಿಧಿಂ ಸತತ್ವಂ ಕಿಂ ದ್ರವ್ಯಂ ಕ್ರಿಯತ್ ಸ್ಥಾನಂ ಕತಿ ಪ್ರಮಾಣಂ ಕಾ ರೇಖಾ ಕೇ ಮಂತ್ರಾಃ ಕಾ ಶಕ್ತಿಃ ಕಿಂ ದೈವತಂ ಕಃ ಕರ್ತಾ ಕಿಂ ಫಲಮಿತಿ ಚ || ತಂ ಹ್ಯೋವಾಚ ಭಗವಾನ್ ಕಾಲಾಗ್ನಿ ರುದ್ರಃ ಯದ್ದ್ರವ್ಯಂ ತದಾಗ್ನೇಯಂ ಭಸ್ಮ, ಸದ್ಯೋಜಾತಾದಿ ಪಂಚಬ್ರಹ್ಮ ಮಂತ್ರೈಃ ಪರಿಗೃಹ್ಯ ಅಗ್ನಿರಿತಿ ಭಸ್ಮೇತ್ಯನೇನ ಚಾಭಿಮಂತ್ರ್ಯ ಮಾನಸ್ತೋಕ ಇತಿ ಸಮುದ್ದøತ್ಯ, ಮಾನೊ ಮಹಾಂತಮಿತಿ ಜಲೇನ ಸಂಸೃಜ್ಯ, ತ್ರಿಯಾಯುಷಮಿತಿ ಶಿರೋ ಲಲಾಟವಕ್ಷ ಸ್ಕಂಧೇಷು ತ್ರಿಯಾಯುಷೈಸ್ತ್ರ್ಯಂಬಕೈಸ್ತ್ರಿಶಕ್ತಿಭಿಸ್ತಿರ್ಯಕ್ ತಿಸ್ರೋ ರೇಖಾಃ ಪ್ರಕುರ್ವೀತ ವ್ರತಮೇತಚ್ಛಾಂಭವಂ ಸರ್ವೇಷು ದೇವೇಷು ವೇದವೇದಾದಿಭಿರುಕ್ತಂ ಭವತಿ ತಸ್ಮಾತ್ತತ್ಸಮಾಚರೇನ್ಮುಮುಕ್ಷುರ್ನಪುನರ್ಭವಾಯ || ಅಥ ಸನತ್ಕುಮಾರಃ ಪಪ್ರಚ್ಛ ಪ್ರಮಾಣಮಸ್ಯ ತ್ರಿಪುಂಡ್ರಧಾರಣಸ್ಯ ತ್ರಿಧಾರೇಖಾಭವತ್ಯಾಲಲಾಟಾದಾಚಕ್ಷುಷೋರಾಮೂಧ್ರ್ನೋರಾಭ್ರುವೋರ್ಮ- ಧ್ಯತಶ್ಚ ಪ್ರಥಮಾ ರೇಖಾ ಸಾ ಗಾರ್ಹಪತ್ಯಶ್ಚಾಕಾರೋ ರಜೋ ಭೂರ್ಲೋಕಃ ಸ್ವಾತ್ಮಾ ಕ್ರಿಯಾಶಕ್ತಿಃ ಋಗ್ವೇದಃ ಪ್ರಾತಃ ಸವನಂ ಮಹೇಶ್ವರೋ ದೇವತೇತಿ || ಯಾsಸ್ಯ ದ್ವಿತೀಯಾ ರೇಖಾ ಸಾ ದಕ್ಷಿಣಾಗ್ನಿರುಕಾರಃ ಸ್ವತ್ವ ಮಂತ್ರರಿಕ್ಷಮಂತರಾತ್ಮಾ ಚೇಚ್ಛಾಶಕ್ತಿಃ ಯಜುರ್ವೇದೋ ಮಾಧ್ಯಂ ದಿನಂ ಸವನಂ ಸದಾಶಿವೋ ದೇವತೇತಿ || ಯಾsಸ್ಯ ತೃತೀಯಾ ರೇಖಾ ಸಾsಹವನೀಯೋ ಮಕಾರಸ್ತಮೋ - ದ್ಯೌರ್ಲೋಕಃ ಪರಮಾತ್ಮಾ ಜ್ಞಾನಶಕ್ತಿಃ ಸಾಮವೇದಸ್ತøತೀಯಂ ಸವನಂ ಮಹಾದೇವೋ ದೇವತೇತಿ || ಏವಂ ತ್ರಿಪುಂಡ್ರವಿಧಿಂ ಭಸ್ಮನಾ ಕರೋತಿ ಯೋ ವಿದ್ವಾನ್ ಬ್ರಹ್ಮಚಾರೀ ಗೃಹೀ ವಾನಪ್ರಸ್ಥೋ ಯತಿರ್ವಾ ಸಃ ಸಮಸ್ತ ಮಹಾಪಾತಕೋ - ಪಪಾತಕೇಭ್ಯಃ ಪೂತೋ ಭವತಿ, ಸ ಸರ್ವೇಷು ತೀರ್ಥೇಷು ಸ್ನಾತೋ ಭವತಿ, ಸ ಸರ್ವಾನ್ ಜ್ಞಾತೋ ಭವತಿ, ಸ ಸರ್ವಾನ್ ವೇದಾನಧೀತೋ ಭವತಿ, ಸ ಸತತಂ ಸಕಲರುದ್ರಮಂತ್ರಜಾಪೀ ಭವತಿ, ಸ ಸಕಲಭೋಗಾನ್‍ಭುಂಕ್ತೆ ದೇಹಂತ್ಯಕ್ತ್ವ ಶಿವಸಾಯುಜ್ಯಮೇತಿ ನ ಸ ಪುನರಾವರ್ತತೇನ ಸ ಪುನರಾವರ್ತತ ಇತ್ಯಾಹ ಭಗವಾನ್ ಕಾಲಾಗ್ನಿರುದ್ರಃ ||'' ಇಂತೆಂದುದಾಗಿ, ಇದಕ್ಕೆ ಭೀಮತಂತ್ರಾಗಮೇ : ``ಸರ್ವತೀರ್ಥೇಷು ಯತ್‍ಪುಣ್ಯಂ ಸರ್ವಯಜ್ಞೇಷು ಯತ್‍ಫಲಂ| ತತ್‍ಫಲಂ ಕೋಟಿಗುಣಿತಂ ಭಸ್ಮಸ್ನಾನಾನ್ನಸಂಶಯಃ||'' ಇಂತೆಂದುದಾಗಿ, ಇದಕ್ಕೆ ಭವಿಷ್ಯೋತ್ತರಪುರಾಣೇ : ``ಶಿವಾಗ್ನಿಕಾರ್ಯಂ ಯಃ ಕೃತ್ವಾ ಕುರ್ಯಾತ್ರಿಯಾಯುಷಂ | ಆತ್ಮವಿತ್ ವಿಶುದ್ಧ ಃ ಸರ್ವಪಾಪೈಶ್ಚ ಸಿತೇನ ಭಸ್ಮನಾ || '' ಇಂತೆಂದುದಾಗಿ, ಇದಕ್ಕೆ ಪರಾಶರಪುರಾಣೇ : ``ಕ್ರಿಯಾಯುಷ್ಯಾಣಿ ಕುರುತೇ ಲಲಾಟೇಚ ಭುಜದ್ವಯೇ | ನಾಶಿಕಾಂತೇ ಚ ಧೃತ್ವಾರ್ಷೇ | '' (?) ಇದಕ್ಕೆ ಬ್ರಹ್ಮಪುರಾಣೇ : ``ಶ್ರಾದ್ಧೇ ಯಜ್ಞೇ ಜಪೇ ಹೋಮೇ ವೈಶ್ವದೇವೇ ಸುರಾರ್ಚನೇ | ಧೃತತ್ರಿಪುಂಡ್ರಪೂತಾತ್ಮಾ ಮೃತ್ಯುಂ ಜಯತಿ ಮಾನವ ಃ || '' ಇಂತೆಂದುದಾಗಿ, ಇದಕ್ಕೆ ಆದಿತ್ಯಪುರಾಣೇ : ``ಸರ್ವಾಶ್ರಮಾಣಾಂ ವರ್ಣಾನಾಂ ಭಸ್ಮ ರುದ್ರಾಕ್ಷ ಧಾರಣಂ | ಕರ್ತವ್ಯಂ ಮಂತ್ರತಶ್ಚೋಕ್ತಂ ದ್ವಿಜಾನಾಂ ನಾತ್ರ ಸಂಶಯಃ || '' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ ಃ ``ವಿಪ್ರಾದೀನಾಂಚ ಸರ್ವೇಷಾಂ ಲಲಾಟಂ ಭಸ್ಮಶೂನ್ಯಕಂ | ಭಿಕ್ಷಾ ಚ ಜಪಹೋಮಂ ಚಾರ್ಪಣಂ ನಿಷ್ಫಲಂ ಭವೇತ್ || '' ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ಸಿತೇನ ಭಸ್ಮನಾ ಕಾರ್ಯಂ ತ್ರಿಸಂಧ್ಯಾಂ ತ್ರಿಪುಂಡ್ರಕಂ | ಸರ್ವಪಾಪವಿನಿರ್ಮುಕ ್ತಃ ಶಿವಸಾಯುಜ್ಯಮಾಪ್ನುಯಾತ್ || '' ಇಂತೆಂದುದಾಗಿ, ಇದಕ್ಕೆ ಲೋಕಾಕ್ಷಿ ಸ್ಮೃತಿ : ``ಮಧ್ಯಮಾನಾಮಿಕಾಂಗುಷೆ*ೀ ತ್ರಿಪುಂಡ್ರಂ ಭಸ್ಮನಾ ಧೃತಂ | ತತ್ತ್ರಿಪುಂಡ್ರಂ ಭವೇತ್ಪುಣ್ಯಂ ಮಹಾಪಾತಕನಾಶಕಂ ''|| ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ನೃಪಾಣಾವಿೂೀಶ್ವರಾಣಾಂ ಚ ಭಸ್ಮೀ ತ್ರೇಣ ಚ ಚಂದನಂ | ತ್ರಿಪುಂಡ್ರಂ ವಿಧಿವತ್ಕುರ್ಯಾತ್ ಸುಗಂಧೇನಾಪಿ ವಾಗುಹಾಂ || ಭಸ್ಮನಾಯೈ ತ್ರಿಸಂಧ್ಯಾಂ ಚ ಗೃಹಸ್ಥೋ ಜಲಸಂಯುತಂ | ಸರ್ವಕಾಲೇ ಭವೇತ್ ಸ್ತ್ರೀಣಾಂ ಯತಿನಾಂ ಜಲವರ್ಜಿತಂ || ವಾನಪ್ರಸ್ಥೇಷು ಕಾಂಸ್ಯಾನಾಂ ದೀಕ್ಷಾಹೀನಂ ಮೃಣಂ ತಥಾ | ಮಧ್ಯಾಹ್ನೇ ಪ್ರಾಕ್‍ಜಲಯುಕ್ತಂ ಪರಾಕ್ ಜಲವಿವರ್ಜಿತಂ ||'' ಇಂತೆಂದುದಾಗಿ, ಇದಕ್ಕೆ ಕ್ರಿಯಾಸಾರೇ : ``ಶುದ್ಧ ತಾ ಜಲೇನೈೀವ ಭಸ್ಮಸ್ಯಾತ್ ತ್ರಿಪುಂಡ್ರಕಂ | ಯೋ ಧಾರಯೇತ್ ಪರಬ್ರಹ್ಮ ಸಂಪ್ರಾಪ್ನೋತಿ ನ ಸಂಶಯಃ|| ಮಧ್ಯಮಾನಾಮಿಕಾಂಗುಷೆ* ೈರನುಲೋಮವಿಲೋಮತಃ ||'' ಧಾರಯದ್ಯಗ್ನಿ ತ್ರಿಪುಂಡ್ರಾಂತಂ ಸ ರುದ್ರೋ ನಾತ್ರ ಸಂಶಯಃ ||'' ಇಂತೆಂದುಗಾಗಿ, ಇದಕ್ಕೆ ಕ್ರಿಯಾಸಾರೇ : ``ಮಧ್ಯಾಂಗುಲಿ ತ್ರಯೇಣೈವ ಸ್ವದಕ್ಷಿಣ ಕರಸ್ಯ ತು | ಷಡಂಗುಲಾಯತಂ ಮಾನಮಪಿವಾsಲಿಕಮಾನನಂ || ಷಡಂಗುಲಪ್ರಮಾಣೇನ ಬ್ರಾಹ್ಮಣಾನಾಂ ತ್ರಿಪುಂಡ್ರಕಂ | ನೃಪಾನಾಂ ಚತುರಂಗುಲ್ಯಂ ವೈಶ್ಯಾನಾಂ ಚ ದ್ವಿರಂಗುಲಂ | ಶೂದ್ರಾಣಾಂ ಚ ಸರ್ವೇಷಾಂ ಏಕಾಂಗುಲಾ ತ್ರಿಪುಂಡ್ರಕಂ ||'' ಇಂತೆಂದುಗಾಗಿ, ಇದಕ್ಕೆ ಭೀಮಸಂಹಿತಾಯಾಂ : ``ಮೂಧ್ರ್ನಾ ಲಲಾಟಕಂ ದ್ಯೌಶ್ಚ ಶ್ರೋತ್ರೇ ಬಾಹೂ ತಥೈೀವ ಚ | ಹೃದಯಂ ನಾಭಿಪೃಷೌ* ಚ ಹಸ್ತೋ ವೈ ಸಂಧಯಃ ಕ್ರಮಾತ್ || ಮೂಧ್ರ್ನಿಃ ಸ್ಯಾತ್ ಬ್ರಹ್ಮಣ ಪ್ರೀತಿಃ ಲಲಾಟೇ ಚ ಸರಸ್ವತೀ | ಕಂಠೋ ಲಕ್ಷ್ಮ್ಯಾ ಭವೇತ್ ಪ್ರೀತಿಃ ಸ್ಕಂದೇ ಪೀಣಾತಿ ಪಾರ್ವತಿ || ಇಂದ್ರ ಪ್ರೀತಿ ಕರಂ ಬಾಹೋ ಹೃದಯಂ ಚ ಶರಪ್ರಿಯಂ | ಅನೇನ ವಿಧಿನಾ ಚೈವ ವಿಭೂತಿಂ ಧಾರಯೇತ್ ಸುಧೀಃ ||'' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ತ್ರಿಪುಂಡ್ರಂ ಬ್ರಹ್ಮಣೋ ವಿದ್ವಾನ್ ಮನಸಾsಪಿ ನ ಲಂಘಯೇತ್ | ಶ್ರುತ್ವಾ ವಿಧೀಯತೇ ಯಸ್ಮಾತ್ ತತ್ಯಾನಿ ಪತಿತೋ ಭವೇತ್ ||'' ಇಂತೆಂದುದಾಗಿ, ಇದಕ್ಕೆ ಮತ್ಸ್ಯಪುರಾಣೇ : ``ನ ಚ ಶೌಚಂ ತಪೋ ಯಜ್ಞಂ ತೀರ್ಥಂ ದೇವಾಗ್ನಿಪೂಜನಂ | ಅಶ್ವಮೇಧಮಿದಂ ವ್ಯರ್ಥಂ ತ್ರಿಪುಂಡ್ರೋ ಯೋ ನ ಧಾರಯೇತ್ ||'' ಇಂತೆಂದುದಾಗಿ, ಇದಕ್ಕೆ ಬ್ರಹ್ಮಾಂಡಪುರಾಣೇ : ``ವಿಪ್ರಾಣಾಂ ವೇದವಿದುಷಾಂ ವೇದಾಂತಜ್ಞೇನ ವೇದಿನಾಂ | ಸಿತೇನ ಭಸ್ಮನಾ ಕಾರ್ಯಂ ತ್ರಿಪುಂಡ್ರಮಿತಿ ಪದ್ಮಭೂಃ ||'' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಸರ್ವೇ ತಪಸ್ವಿನಃ ಪ್ರೋಕ್ತಾಃ ಸರ್ವೇ ಯಜ್ಞೇಷು ಭಾಗಿನಃ | ರುದ್ರಭಕ್ತಾ ಸ್ಮøತಾಸ್ಸರ್ವೇ ತ್ರಿಪುಂಡ್ರಾಂಕಿತಮಸ್ತಕಾಃ ||'' ಇಂತೆಂದುದಾಗಿ, ಇದಕ್ಕೆ ಕ್ರಿಯಾಸಾರೇ : ``ಶಿರೋ ಲಲಾಟೇ ಶ್ರವಣೋದ್ವಯಾಗ್ನಿರ್ವಾಭುಜದ್ವಯಂ | ವಕ್ಷೋ ನಾಭಿಃ ಪೃಷ*ಭಾಗೇ | ಕಕುದಿತ್ಯೇಕದೋದಶ || '' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಮೂಧ್ನೇ ಲಾಲಟೇ ಕರ್ಣೇ ಚ ಚಕ್ಷುಷೇ ಮಸ್ತಕಸ್ತಥಾ | ಅನ್ಯ ಬಾಹು ಭುಜದ್ವಂದ್ವಂ ಸ್ಥಾನಾವಪ್ಯುದರಂ ತಥಾ || ಮಣಿಬಂಧೇಷು ಧೃತ್ವಾ ಪಾಶ್ರ್ವೇ ನಾಭಿಮೇಢ್ರಂ ಚ ಪೃಷ್ಟಕಂ | ಊರೂ ಚ ಚಾಮಕಾಶ್ಚ ೈವ ಸಂಷ್ಟಪಿ ಯಥಾಕ್ರಮಂ || ವಿಧಿವತ್‍ಭಸ್ಮಸ್ನಾನಂ ಧಾರಣಂ ಮೋಕ್ಷಕಾರಣಂ || '' ಇಂತೆಂದುದಾಗಿ, ಇದಕ್ಕೆ ಮಹಾಲಿಂಗಪುರಾಣೇ : ``ಶಿರೋ ಫಾಲಃ ಕರ್ಣಕಂ ತೌಚ ಬಾಹೂ ಚ ಮಣಿಬಂಧಕೇ | ಹೃದಯಂ ಚ ಪರಂ ಚೈವ ನಾಭಿ ಭುಜದ್ವಯಂ ತಥಾ || ಓಷಾ*ವಪಿ ಚ ವಿಜ್ಞೇಯೋ ಷೋಡಶಃ ಸಂಧಯಃ ಸ್ಮøತಾಃ || '' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಲಲಾಟಾಂಘ್ರಿವಾಂ ಭುಜಾತ್ ಹೃದಯಂ ನಾಭಿರೇವ ಚ | ಅಪರೇ ಸಂಧಯೋ ಜ್ಞೇಯಾ ಅಷ್ಟಸ್ಥಾನಂ ಚ ಭೂಷಣಂ || ಭಸ್ಮಸ್ನಾನಂ ನರೋ ತೀರ್ಥಂ ಗಂಗಾಸ್ನಾನಂ ದಿನೇ ದಿನೇ | ಭಸ್ಮರೂಪಂ ಶಿವಂ ಸಾಕ್ಷಾದ್ಭಸ್ಮ ತ್ರೈಲೋಕ್ಯಸಾಧನಂ || '' ಇಂತೆಂದುದಾಗಿ, ಇದಕ್ಕೆ ಯಜುರ್ವೇದ : ``ಓಂ ಭಾಗದ್ವಯೇವಾಯೇವಂ ಪ್ರಣಯೇತಿ ಬ್ರಾಹ್ಮಣಃ | ಆ ಋಷಯಃ ಉದ್ಧರೇವ ಬ್ರಾಹ್ಮಣೋ ವೈ ಸರ್ವದೇವತಾಃ | ಸರ್ವಾದಿ ದೇವೈಃ ಆನಂದೇವತಾಭಿರುದ್ಧತಿ || '' ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ : ``ಜಲಸ್ನಾನಂ ತಪಃ ಪುಣ್ಯಂ ಮಂತ್ರಸ್ನಾನಂ ಕುಲಕ್ಷಯಃ| ವಿಭೂತಿರೇಣುಮಾತ್ರೇಣ ತತ್ಫಲಂ ಶ್ರುಣು ಪಾರ್ವತಿ || '' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಶ್ರೀಮತ್ ತ್ರಿಪುಂಡ್ರಮಹಾತ್ಮ್ಯಂ ಯಃ ಪಠೇತ್ ಸತತಂ ನರಃ | ಈಹೇಷ್ಟಾನ್ ಸಕಲಾನ್ ಪ್ರಾಪ್ಯ ಗಚ್ಛಂತಿ ಪರಮಂ ಪದಂ ||'' ಇಂತೆಂದುದಾಗಿ, ಇದನರಿದು ಶ್ರೀ ವಿಭೂತಿಯ ಧರಿಸದ ಕರ್ಮಿಯ ಎನಗೊಮ್ಮೆ ತೋರದಿರಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->