ಅಥವಾ

ಒಟ್ಟು 100 ಕಡೆಗಳಲ್ಲಿ , 29 ವಚನಕಾರರು , 75 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಳ್ಳಿಯ ಹೊಲೆಯನ ಕೈಯಲ್ಲಿ ಡಿಳ್ಳಿಯದ್ಥಿಪತಿ ಸತ್ತ. ಆಳುವ ಗಂಡ ಹೆಂಡತಿಗೆ ಕೀಳಾಳಾದ. ಒಡೆದು ಬಂಟನಿಗೆ ಬಡಿಹೋರಿಯಾದ. ಹೊಡೆಯ ಹುಲ್ಲು ಕರವಾಳ ಹಿಡಿಯ ಕೊಯ್ಯಿತ್ತು. ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ನೀರ ನೆಳಲನೆ ಕಡಿದು, ಮೇರುವೆಂಬುದ ನುಂಗಿ, ಶಾರದೆಯೆಂಬವಳ ಬಾಯ ಕಟ್ಟಿ, ಕಾರ ಮೇಘದ ಬೆಳಸ ನೀರ ಹರಿ ನುಂಗಲು ದಾರಿ ಮೃತ್ಯುವ ನುಂಗಿ ನಗುತ್ತಿದ್ದಿತು. ನಾರಿಯ ಬೆನ್ನ ಮೇಲೆ ಗಂಡ ಬಂದು ಕುಳ್ಳಿರಲು, ನೀರ ಹೊಳೆಯವರೆಲ್ಲರ ಕೊಡನೊಡೆದವು. ಕಾರೆಯ ಮುಳ್ಳೆರ್ದು ಕಲಿಗಳನಟ್ಟಿ ಸದೆವಾಗ, ಸೋರುಮುಡಿಯಾಕೆ ಗೊರವನ ನೆರೆದಳು. ಬಳ್ಳು ಆನೆಯ ನುಂಗಿ, ಹೊಳೆ (ಒಳ್ಳೆ ?) ಸಮುದ್ರವ ಕುಡಿದು, ಕುಳ್ಳಿರ್ದ ಶಿಶು ಹಲಬರನೆಯ್ದೆ ನುಂಗಿ, ಅತ್ತೆ ಅಳಿಯನ ಕೂಡಿ ಕೋಡಗವ ಹಡೆದಲ್ಲಿ, ಹತ್ತಿರಿರ್ದ ಹಾವಾಡಿಗನನು ಅದು ನುಂಗಿತ್ತು! ಕಪ್ಪೆ ಸರ್ಪನ ಹಿಡಿದು ಒತ್ತಿ ನುಂಗುವಾಗ, ಕಪ್ಪೆಯ ಕೊರಳಲ್ಲಿ ಬಿಳಿದು ಕೆಂಪಡರಲು, ನಿಶ್ಚಿಂತವಾಯಿತ್ತು ಗುಹೇಶ್ವರನ ಶರಣಂಗೆ, ಕಟ್ಟಿದಿರ ಕರ್ಪುರದ ಜ್ಯೋತಿಯಂತೆ!
--------------
ಅಲ್ಲಮಪ್ರಭುದೇವರು
ಇಬ್ಬರಿಗೊಂದಂಬ ತೊಡುವೆ ಗಡ ಕಾಮಾ. ಅರಿದರಿದು, ಬಿಲುಗಾರನಹೆಯೊ ! ಎಸೆದಿಬ್ಬರು ಒಂ[ದಾ]ಹರು ಗಡ. ಇದು ಹೊಸತು, ಚೋದ್ಯವೀ ಸರಳ ಪರಿ ನೋಡಾ ! ಎನಗೆಯೂ ಉರಿಲಿಂಗದೇವಗೆಯೂ ತೊಟ್ಟೆಸು. ನಾವಿಬ್ಬರೊಂದಾಗೆ ಬಿಲ್ಲಾಳಹೆ, ಎಸೆಯೆಲೋ ಕಾಮಾ.
--------------
ಉರಿಲಿಂಗದೇವ
ಭಕ್ತನಾದಡೆ ಆರೂ ಅರಿಯದಂತೆ ಊರೆಲ್ಲರರಿಕೆಯಾಗಿ, ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ, ಮಾಟವನರಿತು ಮಾಡುವ ಸತಿಯರ ಗಂಡ ನಾನು. ರಕ್ಕಸನೊಡೆಯ ಕೊಟ್ಟುದ ಬೇಡ
--------------
ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ
ಆಯತವಾದ ಆರು ಗ್ರಾಮಕ್ಕೆ ಅರುವರು ತಳವಾರನಿಕ್ಕಿದ ನಮ್ಮರಸು. ಆ ಅರಸಿಂಗೆ ಕಟ್ಟಿತ್ತು ತೊಟ್ಟಿಯ ಮುಖಸಾಲೆಯ ಮಂಟಪ. ಆ ತಳವಾರರಿಗೆ ಕಟ್ಟಿತ್ತು ಕೈಸಾಲೆಯ ಮಂಟಪ. ಆ ಒಬ್ಬೊಬ್ಬ ತಳವಾರಂಗೆ ಆರಾರು ಗೆಣೆಯರ ಕೂಡಿಸಿ ಕೊಡಲು, ಆ ಗೆಣೆಯರು ತಮಗೊಬ್ಬೊಬ್ಬರಿಗೆ ಆರಾರು ಸಖರ ಕೂಡಿಕೊಂಡ ಪರಿಯ ನೋಡಾ. ಆ ಸಖರು ಆ ಗೆಣೆಯರೊಳಡಗಿ, ಆ ಗೆಣೆಯರು ಆ ತಳವಾರರೊಳಡಗಿ, ಆ ತಳವಾರರ ಕಂಡು ಅರಸು ತನ್ನ ಹೆಂಡತಿಯ ತಬ್ಬಿಕೊಂಡು ಉರಿಯ ಪೊಗಲಾಗಿ, ಎನ್ನ ಗಂಡ ಕಪಿಲಸಿದ್ಧಮಲ್ಲಿಕಾರ್ಜುನನ ನಾ ಕೇಳಲು ಬಯಲ ಬಿತ್ತಿ ಎಂದನು
--------------
ಸಿದ್ಧರಾಮೇಶ್ವರ
ಪಿಂಡಬ್ರಹ್ಮಾಂಡದೊಳಗೆ ತಂಡ ತಂಡದ ಲೋಕ. ಗಂಡ ಗಂಡರನಿರಿಸಿ, ಬಡವರೊಡೆಯರ ನುಂಗಿ, ನಾಡೊಳಗೆ ನಿಡು ನಡೆದು, ಮಡುವನೆಲ್ಲವ ತೊಡೆದು ನಡುರಂಗದಲ್ಲಿ ಕೊಡನೊಡೆಯಲೀಯದೆ; ಮಡದಿಯೊಡಗೂಡಿ, ಗಗನವನಡಿಗೆಯ ಮಾಡಿ ಉಂಡು ಸುಖಿಯಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಭಕ್ತ ಮಾಹೇಶ್ವರ ಪ್ರಸಾದಿ ಈ ತ್ರಿವಿಧವು ಒಂದೇ ಕೋಡಿನಲ್ಲಿ ಅಡಗಿತ್ತು. ಪ್ರಾಣಲಿಂಗ ಶರಣ ಐಕ್ಯ ಈ ತ್ರಿವಿಧವು ಒಂದೇ ಕೋಡಿನಲ್ಲಿ ಅಡಗಿತ್ತು. ಇಂತೀ ಉಭಯದ ಕೋಡ ಹಿಡಿದು ಪಶ್ಚಿಮ ದ್ವಾರವ ಮುಚ್ಚಿ ನಿಂದು ಉತ್ತರ ದ್ವಾರದಲ್ಲಿ ಎಡತಾಕುವ ನಿಶ್ಚಿಂತರ ಮುಚ್ಚಿಸಿ ಸಚ್ಚಿದಾನಂದದಿ ನಲಿದೊಲಿದು ಕಲೆ ವಿದ್ಯವನೊಪ್ಪಿಸ ಬಂದೆ. ಉಲುಹಿನ ಗಿಲಿಕೆಯ ಕೊಂಬಿನಲ್ಲಿ ಸುಳುಹಿನ ಸೂಕ್ಷ್ಮದ ಕಳೆಯ ಬೆಳಗಿನಲ್ಲಿ ಅಕ್ಕನ ಗಂಡ ಭಾವಂದಿರ ಧಿಕ್ಕರಿಸ ಬಂದೆ. ಮೇಖಲೇಶ್ವರಲಿಂಗವನರಿಯ ಹೇಳಿ.
--------------
ಕಲಕೇತಯ್ಯ
ಬಾರ[ದೆ] ಗಂಡ, ಬಡವಾ[ದೆ] ಉಣ್ಣ್ಲದ್ವೆ ಗಂಡ, ಉಪವಾಸವಿ[ದ್ದೆ] ನನ್ನ ಕಣ್ಣ ನೀರು ನಿನ್ನ ಕಣ್ಣ ತಾಗಲೊ ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ಲೋಕದ ಗಂಡರ ಮಹಾತ್ಮೆಯ ಹೆಂಡರರಿವರೆ? ಹಾ ಹಾ! ಅಯ್ಯಾ! ಶರೀರದೊಳಗೆ ಸಂದು ನಿಮ್ಮನಂತುಗಾಣಲಾರದಾದನು ಬೇಟಗೊಂಡು ನಿಮ್ಮನೆ ಬೇಡುವೆನಯ್ಯ. ಅಯ್ಯಾ ಎನ್ನನೆನಿಸು ಭವ ಬರಿಸಿದಡೆ ನೀನೆ ಗಂಡ ನಾನೆ ಹೆಂಡತಿ, ಕಪಿಲಸಿದ್ಧಮಲ್ಲೇಶ್ವರ, ದೇವರ ದೇವಯ್ಯ.
--------------
ಸಿದ್ಧರಾಮೇಶ್ವರ
ಆರಾಧ್ಯರಿಲ್ಲದಂದು ಹುಟ್ಟಿದ ಗಂಡನೆನ್ನ ಗಂಡ; ಹಿರಿಯರಿಲ್ಲದಂದು ಹುಟ್ಟಿದ ಗಂಡನಾತ ನಮ್ಮಯ್ಯ. ಮಾನುಷರಿಲ್ಲದುದನರಿದು ಆ ಮಾನುಷರ ಇರವೆ ಪ್ರಸಾದವಾಯಿತ್ತು. ಆ ಪ್ರಸಾದವ ತಿಳಿಯದ ಮುನ್ನ, ಹೆಣ್ಣುತನದ ರೂಪಳಿಯಿತ್ತೆನಗೆ. ಆ ಹೆಣ್ಣುತನದ ರೂಪನಳಿದು ನಿರೂಪಿಯಾದೆನಯ್ಯ ಸಂಗಯ್ಯ
--------------
ನೀಲಮ್ಮ
ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ; ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು, ನಿಂದ ಬೊಂಬೆ ಮಹಾರುದ್ರ; ರುದ್ರನ ಬೆಂಬಳಿಯವೆರಡು ಸೂತ್ರಕರ್ಣ. ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ, ಸುತ್ತಿತ್ತು ನೂಲು ಕದಿರು ತುಂಬಿತ್ತು. ರಾಟೆಯ ತಿರುಹಲಾರೆ ಎನ್ನ ಗಂಡ ಕುಟ್ಟಿಹ; ಇನ್ನೇವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ ?
--------------
ಕದಿರರೆಮ್ಮವ್ವೆ
ಅಮ್ಮನ ಮೊಮ್ಮಗಳ ಗಂಡ ಪುಟ್ಟಿದಲ್ಲಿ ಹೊಂದದೆ, ಹೊಂದಿದವರ ಹಿಂಗದೆ, ಅಂಗಜನರಮನೆಯ ನಂದಾದೀವಿಗೆಯ ಬೆಳಗು ಕುಂದದೆ ತಂದೆ - ತಾಯಿಯ ಕೊಂದು ಕಮಲದಲ್ಲಿ ಸತ್ತು ಎತ್ತ ಹೋದನೆಂದರಿಯೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಕಾರವಿಲ್ಲದ ನಿರಾಕಾರದ ಮಂಟಪಕ್ಕೆ ನಿರಾಳವೆಂಬ ಗಂಡ ಬಂದು ಕುಳ್ಳಿರಲು, ಮೂವರು ಹೆಮ್ಮಕ್ಕಳು ಸೇವೆಯ ಮಾಡುವರು. ಇಬ್ಬರು ಸಂಗವ ಮಾಡುತ್ತಿಪ್ಪರು. ಒಬ್ಬಾಕೆ ಪುರುಷನ ನುಂಗಿಕೊಂಡಿಪ್ಪಳು. ಇವರರುವರ ಕೂಡೆ ಹೊಯಿಕೈಯಾಗಿಪ್ಪವನ ಕಂಡು, ಅನು ಪ್ರಭುದೇವರೆಂದರಿದು, ಆತನ ನಿಜಪಾದಕ್ಕೆರಗಿ, ಎನ್ನ ಭವವ ಹರಿದೆನು. ಮಹಾದಾನಿ ಸೊಡ್ಡಳನ ಕಂಡ ಕಡುಸುಖವನುಪಮಿಸಬಾರದು.
--------------
ಸೊಡ್ಡಳ ಬಾಚರಸ
ಗಂಡ ಬಾರನು ಎನ್ನ ತವರೂರಿಗೆ ಹೋಗುವೆವೆನಲು, ನೋಡೆ, ನೋಡೆಲಗವ್ವಾ ಬೇಟೆಯನಾಡುವ ನಾಯತಲೆಯ ಕೊಯ್ದಿಟ್ಟು, ತಾ ಬೇರೆ ಬೇಟಕಾರನಾದ. ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನ ನೆಲೆಯಲ್ಲಿ ನಿಲವ ಕೊಂಡನು; ಹುಚ್ಚನ ಸಂಗ ನಿಶ್ಚಯವಾಯಿತು.
--------------
ಸಿದ್ಧರಾಮೇಶ್ವರ
ಅಭ್ಯಂತರದಲಿಪ್ಪ ಗಂಡ ಗುರುವಿನ ಅನುಮತದಿಂದ ಸರ್ವಾಂಗಕ್ಕೆ ಬಂದಾನು. ಮನೆಯನಿಂಬುಮಾಡು ಮದವಳಿಗೆ, ಮನವ ಶುದ್ಧವ ಮಾಡು ಮದವಳಿಗೆ, ಮನೆಯದ್ದೆರಡನೂ ಎಬ್ಬಟ್ಟವ್ವಾ. ಸಿದ್ಧ ಶುದ್ಧ ಪ್ರಸಿದ್ಧದಿಂದ, ದೀಕ್ಷೆ ಶಿಕ್ಷೆ ಸ್ವಾನುಭಾವದಿಂದ ಎಬ್ಬಟ್ಟಿ ಮನೆಯ ಮಂಗಳವ ಮಾಡವ್ವಾ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ಗಂಡ ಮನೆಯೊಳಕೆ ಬಂದು ಮತ್ತೊಬ್ಬರಿದ್ದಡೆ ಸೈರಿಸ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->