ಮತ್ತಂ, ಅಲ್ಲಿಂದ ಲಿಂಗಮೂರ್ತಿಯ ಕರಸ್ಥಲಕ್ಕೆ ಬಿಜಯಂಗೈಸುವ ವಿವರ :
ಲಿಂಗಮಸ್ತಕದಲ್ಲಿ ಅಂಗುಷ*ವನ್ನಿಟ್ಟು,
ಆಧಾರದಲ್ಲಿ ಅನಾಮಿಕ ಮಧ್ಯಾಂಗುಲವ ಮಡುಗಿ,
ಕನಿಷ*ತರ್ಜನಿಗಳ ಎಡಬಲಕೆ ನಿಲ್ಲಿಸಿ,
ಲಿಂಗಮೂರ್ತಿಯ ಸಾವಧಾನಭಕ್ತಿಗಳಿಂದ
ವಾಮಕರಸ್ಥಲ ಪಾಣಿತಾಣಕ್ಕೆ ಬಿಜಯಂಗೈಸಿ,
ಆ ಲಿಂಗದೇವನ ಸಮರಸಾನಂದ ನಿಜಾನುಭಾವದಿಂದ
ಹನ್ನೆರಡುವೇಳೆ ಜಿಹ್ವೆಪ್ರಕ್ಷಾಲನಂಗೆಯ್ಸಿ,
ದ್ವಾದಶಾಂಗುಲ ಅಷ್ಟಾಂಗುಲ ಷಡಂಗುಲದೊಳಗೆ
ಮಧುರ ಒಗರು ಖಾರ ಆಮ್ಲ ಕಹಿ ಮೊದಲಾದ
ಕಾಷ*ದೊಳಗೆ ಅಯೋಗ್ಯವಾದ ಶುಷ್ಕಕಾಷ*ವಂ ಬಿಟ್ಟು,
ಯೋಗ್ಯವಾದಂಥಾದ್ದರೊಳಗೆ ದೊರೆದಂಥಾದ್ದೊಂದು ಕಾಷ*ವನು
ಆ ಪಾದೋದಕಸ್ಪರಿಶನದಿಂದೆ ಪವಿತ್ರವೆನಿಸಿ,
ಜಂಗಮಕ್ಕೆ ಕೊಟ್ಟು ತಾ ಕೊಂಡಂಥಾದ್ದೆ ಪ್ರಸಾದವೆನಿಸುವುದು.
ಆ ಪ್ರಸಾದವನ್ನು ಲಿಂಗಸ್ಪರಿಶನದಿಂದೆ ದಂತಪಂಕ್ತಿಗಳ ತೀಡಿ,
ಹಸ್ತಾಂಗುಲಿ ಪಾದಾಂಗುಲಿಗಳಂ ತೀಡಿದ ಮೇಲೆ
ಒಡೆದು ಎರಡು ಭಾಗವ ಮಾಡಿ ಜಿಹ್ವೆಯ ಪವಿತ್ರವಾಗಿ ಹೆರೆದು,
ಆ ನಿರ್ಮಾಲ್ಯವ ನಿಕ್ಷೇಪಸ್ಥಲದಲ್ಲಿ ಹಾಕಿ,
ಮುಖಮಜ್ಜನವ ಮಾಡಿ,
ಬಚ್ಚಬರಿಯಾನಂದಲೋಲಾಬ್ಧಿಯಲ್ಲಿರ್ಪುದೆ
ನಿರವಯಪ್ರಭು ಮಹಾಂತ ತಾನೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.