ಒಟ್ಟು 8 ಕಡೆಗಳಲ್ಲಿ , 5 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಬಾರದವನುಂಡು ಬಂದವ ಹಸಿದಿದ್ದ.ಬೇಯದದು ಬೆಂದು, ಬೆಂದದು ಬೇಯದೆಉಭಯವ ಹಿಂಗಿದಂದು ಸಂದು,ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರವಾಯಿತ್ತು.
ಲೋಕದ ಹೊಲೆ ಉದಕದಿಂದ ಹೋಹುದೆಂಬಿರಿ,ಉದಕದ ಹೊಲೆ ಏತರಿಂದ ಹೋಹುದು?ವಾಕು ಪ್ರಮಾಣಿನಿಂದ ಅಗ್ಛಣಿಯೆನಿಸಿತ್ತು.ಸಾಹಿತ್ಯವರಿದು ಕೊ(ಡ)ಳಬಲ್ಲ ಚೆನ್ನನ ಪ್ರಸಾದಲಿಂಗಕ್ಕೆ ಓಗರವಾಯಿತ್ತುಕೂಡಲಚೆನ್ನಸಂಗಮದೇವಾ.
ಕಾಯ ವಿರೊಧಿ ಸ್ಪರ್ಶನ, ಭಾವ ವಿರೋಧಿ ದರ್ಶನ,ರುಚಿ ವಿರೋಧಿ ಪ್ರಸಾದಿ.ಕೂಡಲಚೆನ್ನಸಂಗಾನಿಮ್ಮ ಶರಣನ ಕಾಯ ಲಿಂಗಕ್ಕೆ ಓಗರವಾಯಿತ್ತು.
ಭಕ್ತ, ಪ್ರಸಾದವ ಕೊಂಡು ಪ್ರಸಾದವಾದಪ್ರಸಾದ, ಭಕ್ತನ ನುಂಗಿ ಭಕ್ತನಾಯಿತ್ತು.ಭಕ್ತನೂ ಪ್ರಸಾದವು ಏಕಾರ್ಥವಾಗಿ_ಲಿಂಗಸಂಗವ ಮರೆದು,ಭಕ್ತನೆ ಭವಿಯಾದ, ಪ್ರಸಾದವೆ ಓಗರವಾಯಿತ್ತು.ಮತ್ತೆ ಆ ಓಗರವೆ ಭವಿ, ಭವಿಯೆ ಓಗರವಾಯಿತ್ತು.ಓಗರ ಭವಿ ಎಂಬೆರಡೂ ಇಲ್ಲದೆಓಗರವೆ ಆಯಿತ್ತು ಗುಹೇಶ್ವರಾ.
ಬೆಟ್ಟಕ್ಕೆ ಬೆಳ್ಳಾರ ಸುತ್ತಿತಯ್ಯಾ,ಪಾಪದ ಬಲೆಯ ತಂದು ಮುಂದೆ ಒಡ್ಡಿದಿರಯ್ಯಾ,ಬೇಟೆಗಾರನು ಮೃಗವನಟ್ಟಿ ಬರಲು ಮೃಗವು ಗೋರಿಗೊಳಗಾಗದಯ್ಯಾ.ಹರನೊಡ್ಡಿದ ಬಲೆಯಲ್ಲಿ ಸಿಲುಕಿದ ಮೃಗವುಕೂಡಲಸಂಗಮದೇವಂಗೆ ಓಗರವಾಯಿತ್ತು.
ನಿಜಸುಖದ ಸಂಗದಿಂದ ನೆನಹಳಿದು,ಶಿವಾನುಭಾವದ ಸುಖದಲ್ಲಿ ಪ್ರಾಣವಡಗಿತೃಪ್ತಿಯಾಗಿ ನಿಂದ ನಿಲುವಿನ ನಿರ್ಣಯವೆಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ ಓಗರವಾಯಿತ್ತು.
ಜಂಗಮವಾರೋಗಿಸಿ ಮಿಕ್ಕುದು ಲಿಂಗಕ್ಕೋಗರ,ಲಿಂಗವಾರೋಗಿಸಿ ಮಿಕ್ಕುದು ಪ್ರಸಾದ-ನೀಡಬಹುದು.ಜಂಗಮಮುಖದಲ್ಲಿ ಓಗರವಾಯಿತ್ತು.ಲಿಂಗಮುಖದಲ್ಲಿ ಪ್ರಸಾದವಾಯಿತ್ತು.ಇದು ಕಾರಣ ಕೂಡಲಚೆನ್ನಸಂಗಯ್ಯಾನಿನಗೆ ಎನಗೆ ಜಂಗಮದ ಪ್ರಸಾದ.