ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಜಗದೊಳಗಣ ಆಟವ ನೋಡಿದರೆ, ಎನಗೆ ಹಗರಣವಾಗಿ ಕಾಣಿಸುತ್ತಿದೆ. ಅದೇನು ಕಾರಣವೆಂದರೆ, ಹಿಂದಣ ಮುಕ್ತಿಯನರಿಯರು, ಮುಂದಣ ಮುಕ್ತಿಯನರಿಯರು. ಬಂದ ಬಂಬ ಭವದಲ್ಲಿ ಮುಳುಗುತ್ತಲಿದ್ದಾರೆ. ನಾನಿದರಂದವನರಿದು, ದ್ವಂದ್ವವ ಹರಿದು, ಜಗದ ನಿಂದೆ ಸ್ತುತಿಯ ಸಮಗಂಡು, ಹಿಂದ ಹರಿದು ಮುಂದನರಿದು, ಸದಮಳಾನಂದದಲ್ಲಿ ನಿಂದು, ಸಚ್ಚಿದಾನಂದದಲ್ಲಿ ಐಕ್ಯವಾಗಿ, ಸತ್ಯಶರಣರ ಪಾದದಲ್ಲಿ ನಿರ್ಮುಕ್ತನಾದೆನಯ್ಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮೂರುಸ್ಥಲದಲ್ಲಿ ವೇಧಿಸಿ, ಆರುಸ್ಥಲದಲ್ಲಿ ಕೂಡಿ, ಇಪ್ಪತ್ತೈದುಸ್ಥಲವನವಗವಿಸಿ, ನೂರೊಂದರಲ್ಲಿ ವಿಭಾಗಿಸಿ, ನೂರ ಕಳೆದು, ಒಂದರಲ್ಲಿ ಐಕ್ಯವಾಗಿ ನಿಂದ ಮತ್ತೆ, ಉಭಯದ ಸುಳುಹು ಅಡಗಿತ್ತು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಾರಯ್ಯ
ಗುರು ಭಕ್ತನಂಗ, ಲಿಂಗ ಮಹೇಶ್ವರನಂಗ, ಜಂಗಮ ಪ್ರಸಾದಿಯಂಗ. ಇಂತೀ ತ್ರಿವಿಧಸ್ಥಲಂಗಳಲ್ಲಿ ತ್ರಿವಿಧವಡಗಿ, ತ್ರಿವಿಧ ಇದಿರಿಟ್ಟು, ತ್ರಿವಿಧ ಐಕ್ಯವಾಗಿ, ಬೆಳಗಿಂಗೆ ಕಳೆದೋರಿ, ಕಳೆಗೆ ಕಾಂತಿ ಪ್ರಜ್ವಲಿಸುವಂತೆ, ಅರ್ಕನ ಕಿರಣದಂತೆ, ಸಾಕಾರ ರೂಪಿಂಗೆ ಉಭಯಚಕ್ಷುವಾಗಿ, ಬೆಳಗಿನಿಂದ ಬೆಳಗ ಕಂಡಂತೆ, ಸ್ಥಲವ ನೆಮ್ಮಿ, ಸ್ಥಲದಲ್ಲಿ ಒಲವರವಿಲ್ಲದೆ ನೋಡಲಿಕ್ಕೆ, ಸ್ಥಲಭರಿತಮೆಲ್ಲಿಯೂ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನು ಗುರುವಿನಲ್ಲಿ ಸವೆದು, ಮನ ಲಿಂಗದಲ್ಲಿ ಸವೆದು, ಧನ ಜಂಗಮದಲ್ಲಿಸವೆದು, ತನುವೆ ಗುರುವಾಗಿ, ಮನವೆ ಲಿಂಗವಾಗಿ, ಧನವೆ ಜಂಗಮವಾಗಿ_ ಇಂತೀ ತ್ರಿವಿಧ ಐಕ್ಯವಾಗಿ ನಿಮ್ಮಲ್ಲಿ ನಿಂದನಾಗಿ; ಕಾಯವಿಡಿದು ಕರ್ಮವಿರಹಿತನಾದ, ಕೂಡಲಚೆನ್ನಸಂಗಮದೇವರಲ್ಲಿ ಸಂಗನಬಸವಣ್ಣನು ಉಪಮಾತೀತನಾಗಿರ್ದನು
--------------
ಚನ್ನಬಸವಣ್ಣ
ಹೊಲಬು ಹೊಲಬನೆ ಕಂಡು, ಶಿಲೆ ಕುಲದಲ್ಲಿ ಅಳಿದು, ಅನ್ನ ಅರ್ಪಿತದಲ್ಲಿ ಹಿಂಗಿ, ಉದಕ ಮಜ್ಜನದಲ್ಲಿ ನಿಂದು, ಪ್ರಸಾದ ಪ್ರಸನ್ನದಲ್ಲಿ ಐಕ್ಯವಾಗಿ, ಬಿಬ್ಬಿನ ಮನದಲ್ಲಿ ಒಬ್ಬುಳಿಯಾಯಿತ್ತು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
-->