ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಶಿಕಾಂತದ ಶಿಲೆ ಒಸರುವಂತೆ, ಕುಸುಮ ಋತುಕಾಲಕ್ಕೆ ದೆಸೆಗೆ ಪಸರಿಸುವಂತೆ, ಅಂಗ ಸಂಬಂಧಕ್ಕೆ, ಆತ್ಮನ ಅರಿವಿಂಗೆ, ಮಾಡುವ ತತ್ಕಾಲಕ್ಕೆ, ಆ ಭಾವದಲ್ಲಿ ಭಾವಿಸಿ ನಾನೆಂಬುದನಳಿದು ನೀನೆಂಬುದಕೆಠಾವಿಲ್ಲದೆ, ಆ ಭಾವವೆ ಬೆಳಗುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಆತ್ಮಗುಣ ವಿವರದ ಪರಿಯೆಂತುಟೆಂದಡೆ: ತರುವಿನ ಪರಿಭೇದದಂತೆ, ಮರ ಬಲಿದು ಋತುಕಾಲಕ್ಕೆ ಪಲ್ಲವದ ಮಧ್ಯದಲ್ಲಿ, ಹೂ ಮಿಡಿ ಬಲಿದು ರಸನಿಂದು ಫಳವಾದಂತೆ ಆತ್ಮನ ವಿವೇಕ ಸ್ವಸ್ಥದಲ್ಲಿ ನಿಂದು ತನ್ನಿರವ ತಾ ವಿಚಾರಿಸಿ, ಮಹವನೊಡಗೂಡಿ, ಮಲತ್ರಯ ದೂರವಾಗಿ, ಚಿಚ್ಛಕ್ತಿಯ ಹೃದಯದಲ್ಲಿ ಚಿದ್ಘನ ಬಲಿದು ಸ್ವರೂಪವಾಗಿ ನಿಂದು, ಆತ್ಮನ ಅಳಿವನರಿದು ಅಧ್ಯಾತ್ಮಯೋಗಸಂಬಂಧ, ಸದಾಶಿವಮೂರ್ತಿಲಿಂಗವನರಿದುದು.
--------------
ಅರಿವಿನ ಮಾರಿತಂದೆ
-->