ತ ಪದದಿಂದ ಪ್ರಾರಂಭವಾಗುವ ವಚನಗಳು:
ತಿಲದೊಳಗಣ ತೈಲ, ಫಲದೊಳಗಣ ರಸ,ಹೇಮದೊಳಗಣ ಬಣ್ಣ, ಮಾಂಸದೊಳಗಣ ಕ್ಷೀರ,ಇಕ್ಷುದಂಡದ ಸಾರದ ಸವಿ,ಒಳಗು ಹೊರಗಾಗಿಯಲ್ಲದೆ ಕುಲದ ಸೂತಕ ಬಿಡದು.ಇಷ್ಟದಲ್ಲಿ ತೋರುವ ವಿಶ್ವಾಸ ದೃಷ್ಟವಾಗಿಯಲ್ಲದೆ,ಶಿಲೆಕುಲದ ಸೂತಕ ಬಿಡದು.ಬಿಡುವನ್ನಕ್ಕ ಜ್ಞಾನಶೂನ್ಯವಿಲ್ಲ, ಕಾಮಧೂಮ ಧೂಳೇಶ್ವರಾ.
ತನ್ನ ಗುಣವ ತಾನರಿತೆನೆಂಬಲ್ಲಿ, ಇದಿರಿನಲ್ಲಿ,ಬ್ಥಿನ್ನಗುಣವ ಸಂಪಾದಿಸಲುಂಟೆ ?ಕರಿ ಮುಕುರದ ಇರವು, ಆ ಗುಣವ ಪರಿಹರಿಸಿ ನಿಂದಲ್ಲಿ,ಉಭಯಭಾವಕ್ಕೆ ಹೊರಗು, ಕಾಮಧೂಮ ಧೂಳೇಶ್ವರಾ.
ತಾನೆಂಬುದ ಅರಿದೆನೆಂದರಿತಲ್ಲಿ,ಇಷ್ಟಲಿಂಗದ ಪೂಜೆಯ ಗೊತ್ತು.ಆ ಇಷ್ಟವ ನೆನೆವ ಚಿತ್ತ,ಕರ್ಪುರದ ಘಟ್ಟಿಯ ಉರಿ ಕೊಂಡಂತೆ.ತೊಳೆವ, ಹಿಳಿಕ ಸೂತಕ ನಿಂದಲ್ಲಿ,ಪ್ರಾಣಲಿಂಗಸಂಬಂಧವೆಂಬ ಸಮಯಸೂತಕ ನಿಂದಲ್ಲಿ,ಕಾಮಧೂಮ ಧೂಳೇಶ್ವರ ಏನೂ ಎನಲಿಲ್ಲ.