ವ್ರತಸ್ಥನಾದಲ್ಲಿ,
ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಂಗಳಲ್ಲಿ ತಲೆದೋರದೆ,
ತನ್ನ ಆತ್ಮ ಸತಿ, ಲಿಂಗ ಪುರುಷನಾಗಿ,
ತನ್ನ ಸುಕಾಯಕದಿಂದಾದ ದ್ರವ್ಯಂಗಳ
ಗುರುಲಿಂಗಜಂಗಮದ ಮುಂದಿಟ್ಟು ಅರ್ಪಿತವಹನ್ನಕ್ಕ,
ದೃಕ್ಕು ತುಂಬಿ ನೋಡಿ, ಮನದಣಿವನ್ನಕ್ಕ ಹರುಷಿತನಾಗಿ,
ಮಿಕ್ಕ ಶೇಷವ, ಇಷ್ಟಪ್ರಾಣಲಿಂಗಕ್ಕೆ ತೃಪ್ತಿಯ ಮಾಡಿಪ್ಪ ಮಹಾಭಕ್ತಂಗೆ,
ಸಂಸಾರವೆಂಬ ತೊಟ್ಟು ಹರಿಯಿತ್ತು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು
ವ್ರತವೆಂಬ ನಾಮಕ್ಕೆ ಒಳಗಾಯಿತ್ತು.