ದಶಕರ ಶೂನ್ಯ ಪಂಚಕರ ಭಿಕ್ಷವ ಬೇಡಿ,
ಆನಂದದಲಾಡಿ, ಪಾಪಾಂಧಕ್ಷಯಮಂ ಮಾಡಿ,
ಅನುಶ್ರುತವೇರಿ, ಷಡುರುತಂ ಪೆರ್ಚಿ,
ಮಲಕುವಿಡಿದು, ವೀಥಿವೀಥಿಗೊಂಡು
ಪೋಗಿ ತೋರುವವರ ವಂಕಮಂ ಪೊಕ್ಕು,
ಆ ಉಭಯವತಿಯೆಂಬ ಶಂಕರಾನಂದರಸ ಉಕ್ಕುತ್ತಿದ್ದು ,
ಎಸಗೆ ಸಮನಿಸುಗೆ ನಯಸರವ ಕಿವಿಯಲಾಂತು,
ನಂದಿನಂದಿಯೆಂದಾನಂದದಿಂದುಂಡು, ಕೈಯ ಮಂಡೆಗೆ ಹತ್ತಿಸಿ,
ಮುಳ್ಳಕಲ್ಲು ಮುಂಜಾರಿನಲ್ಲಿರಿಸಿ, ಕರ ಹೇಸಿ,
ಏಳೂರವರು ಲಾಲಿಸಿ, ಕೇಳಲಮ್ಮದೆ ಬೆಚ್ಚುತ್ತ ಬೆದರುತ್ತ ಬಿದ್ದರು.
ಮುಚ್ಚುಮರೆಯ ಅಚ್ಚುಗವಿಕ್ಕು ಪ್ರ......
......ಯಲಳಿದ ಗುರು ಗೌರವಂ ತಂದಾರಾಧಿಸಿ,
ವಿರಾಜಿಸಿದ ಶಂಕರಾ
ಜಂಗಮ ಶಂಕರಾನಂದರಸನಯ್ಯಾ, ತ್ರಿಲೋಚನಶಂಕರಾ.