ಕ ಪದದಿಂದ ಪ್ರಾರಂಭವಾಗುವ ವಚನಗಳು:
ಕುರುವಿಟ್ಟರೆ ತಾ ದಿಟವಲ್ಲ.ತನ್ನೊಳ್ಪುದಿದಿರೆ ಅದು ನಿಜವಲ್ಲ.ಪುನರಪಿಯೊಳ್ನಿಂತಿರೆ ಅದು ಸಹಜವಲ್ಲ.ಇಂತೀ ತ್ರಿವಿಧವಲ್ಲದೆ ಅಳಿವ ಉಳಿಮೆ ತಿಳಿದು,ವೀರಶೂರ ರಾಮೇಶ್ವರಲಿಂಗವ ಕೂಡಬೇಕು.
ಕಂಡುದೆಲ್ಲವೂ ಜಗದ ಸೊಮ್ಮು.ಕಾಣುದದೆಲ್ಲವೂ ಮಾಯೆಯ ಸೊಮ್ಮು.ಕಂಡುದ, ಕಾಣದುದ ತಾ ನಿಧಾನಿಸಿಕೊಂಡುತನಗಿಲ್ಲದುದ ತಾನರಿದು, ನಷ್ಟವಪ್ಪುದ ಜಗಕ್ಕೆ ಕೊಟ್ಟುಬಟ್ಟಬಯಲ ತುಟ್ಟತುದಿಯ ದೃಷ್ಟವ ಕಾಬುದಕ್ಕೆ ಮುನ್ನವೆದೃಕ್ಕು ದೃಶ್ಯಕ್ಕೆ ಹೊರಗಾಗಬೇಕು,ವೀರಶೂರ ರಾಮೇಶ್ವರಲಿಂಗವ ಕೂಡಬಲ್ಲಡೆ
ಕನ್ನಗತ್ತಿ ಮಣ್ಣ ಕೆಡಹಿದ ಬಳಿಕಮಣ್ಣ ತೆಗೆಯಬಲ್ಲುದೆ ?ಇಂತೀ ಉಭಯಾನುಭಾವಬೇಕು.ಕನ್ನವ ಸವೆದ ಕತ್ತಿ ಕಳಬಲ್ಲುದೆ ?ಇಂತೀ ಬಿನ್ನಾಣದ ದೃಷ್ಟವ ತಿಳಿದುಅರಿವುದ ಅರುಹಿಸಿಕೊಂಬುದೆ ?ಅರಿದ ಅರಿವ ಅರಿವನ್ನಕ್ಕವೀರಶೂರ ರಾಮೇಶ್ವರಲಿಂಗವಅರ್ಚಿಸುತ್ತ, ಪೂಜಿಸುತ್ತ ಚಿತ್ತಶುದ್ಧನಾಗಿರಬೇಕು.