ಅಥವಾ
(1) (0) (0) (0) (0) (1) (0) (0) (0) (0) (0) (0) (0) (0) ಅಂ (0) ಅಃ (0) (3) (0) (1) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (1) (0) (0) (0) (0) (0) (0) (0) (0) (0) (0) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕುರುವಿಟ್ಟರೆ ತಾ ದಿಟವಲ್ಲ. ತನ್ನೊಳ್ಪುದಿದಿರೆ ಅದು ನಿಜವಲ್ಲ. ಪುನರಪಿಯೊಳ್ನಿಂತಿರೆ ಅದು ಸಹಜವಲ್ಲ. ಇಂತೀ ತ್ರಿವಿಧವಲ್ಲದೆ ಅಳಿವ ಉಳಿಮೆ ತಿಳಿದು, ವೀರಶೂರ ರಾಮೇಶ್ವರಲಿಂಗವ ಕೂಡಬೇಕು.
--------------
ಬಾಲಬೊಮ್ಮಣ್ಣ
ಕಂಡುದೆಲ್ಲವೂ ಜಗದ ಸೊಮ್ಮು. ಕಾಣುದದೆಲ್ಲವೂ ಮಾಯೆಯ ಸೊಮ್ಮು. ಕಂಡುದ, ಕಾಣದುದ ತಾ ನಿಧಾನಿಸಿಕೊಂಡು ತನಗಿಲ್ಲದುದ ತಾನರಿದು, ನಷ್ಟವಪ್ಪುದ ಜಗಕ್ಕೆ ಕೊಟ್ಟು ಬಟ್ಟಬಯಲ ತುಟ್ಟತುದಿಯ ದೃಷ್ಟವ ಕಾಬುದಕ್ಕೆ ಮುನ್ನವೆ ದೃಕ್ಕು ದೃಶ್ಯಕ್ಕೆ ಹೊರಗಾಗಬೇಕು, ವೀರಶೂರ ರಾಮೇಶ್ವರಲಿಂಗವ ಕೂಡಬಲ್ಲಡೆ
--------------
ಬಾಲಬೊಮ್ಮಣ್ಣ
ಕನ್ನಗತ್ತಿ ಮಣ್ಣ ಕೆಡಹಿದ ಬಳಿಕ ಮಣ್ಣ ತೆಗೆಯಬಲ್ಲುದೆ ? ಇಂತೀ ಉಭಯಾನುಭಾವಬೇಕು. ಕನ್ನವ ಸವೆದ ಕತ್ತಿ ಕಳಬಲ್ಲುದೆ ? ಇಂತೀ ಬಿನ್ನಾಣದ ದೃಷ್ಟವ ತಿಳಿದು ಅರಿವುದ ಅರುಹಿಸಿಕೊಂಬುದೆ ? ಅರಿದ ಅರಿವ ಅರಿವನ್ನಕ್ಕ ವೀರಶೂರ ರಾಮೇಶ್ವರಲಿಂಗವ ಅರ್ಚಿಸುತ್ತ, ಪೂಜಿಸುತ್ತ ಚಿತ್ತಶುದ್ಧನಾಗಿರಬೇಕು.
--------------
ಬಾಲಬೊಮ್ಮಣ್ಣ