ಶಿಖಿರಶಿವಾಲಯವ ಕಂಡು
ಕೈಮುಗಿದಲ್ಲಿ ದೈವ ಒಪ್ಪುಗೊಂಡಿತ್ತು,
ಅದು ತಾನಿ[ತ್ತ] ಆಲಯವಾದ ಕಾರಣ.
ಸಮಯದರ್ಶನಕ್ಕೆ ಇಕ್ಕಿ ಎರೆದಲ್ಲಿ,
ಧರ್ಮವೆಂದು ಕೊಟ್ಟುಕೊಂಡಲ್ಲಿ,
ಶಿವನೊಪ್ಪುಗೊಂಬುದೆ ವಿಧ.
ದಿಟವಿರ್ದು ವಿಶ್ವಾಸದಿಂದ ಮಾಡುವ ಭಕ್ತಿ,
ಚತುರ್ವಿಧ ಫಲಪದಂಗಳ ಗೊತ್ತಿನ ಮುಕ್ತಿ.
ಇದು ಸತ್ಯಕ್ರೀವಂತನ ಚಿತ್ತ,
ಗಾರುಡೇಶ್ವರಲಿಂಗದಲ್ಲಿ ಭಕ್ತಿ[ಯ] ಕ್ರೀ.