ತನುಗುಣವುಳ್ಳನ್ನಕ, ಗುರುವಿನಲ್ಲಿ
ಪರತತ್ತ್ವಭೋಧವುಂಟೆಂದು ಬೆಸಗೊಳ್ಳಲಿಲ್ಲ.
ಮನವುಳ್ಳನ್ನಕ್ಕ, ಲಿಂಗದಲ್ಲಿ ಏಕನಿಷೆ*
ನಿಚ್ಚಟವೆಂಟೆಂದು ಕಂಡೆಹೆನೆಂಬ ಭ್ರಮೆಯಿಲ್ಲ.
ಆತ್ಮ ಮಥನವುಳ್ಳನ್ನಕ್ಕ, ಕರಣ ಮಠಕ್ಕೆ
ಬರುವ ಹೋಗುವ ಬೃಹದ್ ನಿಲುಗಡೆ.
ಈ ತೆರನ ಬಲ್ಲಡೆ ಮರದು ಹಿಡಿಯಲಿಲ್ಲ ;
ಅರಿದು ಕೂಡಲಿಲ್ಲ.
ಕುರುಹಿನ ಸಾಕಾರವಿಡಿದಾಡುವ ಕುತ್ತದ ಕೂಳು
ಮೂರಲೊಂದು ಕೊರೆಗೊಂಡಿತ್ತು.
ಈ ಮೂರಲೊಂದು ನಿನ್ನ ಗೋಣಿಯ ಮೂಲೆಯಲ್ಲಿ
ತೋರದಿರಾ ಕೇಟೆಶ್ವರಲಿಂಗವೆ.