ಮೂರ್ತಿಬ್ರಹ್ಮ, ಪಿಂಡಬ್ರಹ್ಮ, ಕಲಾಬ್ರಹ್ಮ, ಆನಂದಬ್ರಹ್ಮ,
ವಿಜ್ಞಾನಬ್ರಹ್ಮ, ಪರಬ್ರಹ್ಮಸ್ವರೂಪವಾದ ಷಟ್ಪ್ರಣಮವನು
ಅಂಗ, ಆತ್ಮ, ಪ್ರಾಣ, ಕರಣ, ವಿಷಯತೃಪ್ತಿಸಂಬಂಧವೆಂದು
ಎನ್ನ ಮನದ ಕೊನೆಯಲ್ಲಿ ಮಡುಗಿ,
ಮರೆಯದವಧರಿಸೆಂದುಪದೇಶವನಿತ್ತ
ಮಹಾಘನ ಗಂಬ್ಥೀರ ಸದ್ಗುರುನಾಥನ ಪ್ರಸಾದವನು
ಹೆರೆಹಿಂಗದವಿರಳಕ್ರಿಯೆಯಿಂದೆ ಅವಧರಿಸಿ
ಮುಖದಿಂ ಸೇವಿಸಿ, ಬಾಹ್ಯಾಂತಸುಖಿಯಾಗಿರ್ದೆನು
ನಿರಂಜನ ಚನ್ನಬಸವಲಿಂಗ ಸನ್ನಿಹಿತನಾಗಿ.