ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೂರ್ವಿವಾದಿಯಾಗಿ ಮಂಡಲತ್ರಯದೊಳ್ಮೊದಲಗ್ನಿ ಮಂಡಲದೀಶಾನಂ ತೊಡಗಿ ಸ ಷ ಶ ವ ಲ ರ ಯ ಮ ಗಳೆಂಬ ವ್ಯಾಪಕಾಕ್ಷರಂಗಳೆಂಟೆ ಸಳಳೊಳಿರ್ಪವಾ ಹಕಾರವೆ ಶಿವಬೀಜವಾದಕಾರಣವಾ ಚಕ್ರದ ಕರ್ಣಿಕಾಕ್ಷಾರವೆನಿಸಿತ್ತು. ಳಕಾರಮೆ `ಲಳಯೋರ್ಭೇದಃ' ಎಂದು ಲಳಂಗಳ್ಗೆ ಭೇದಮಿಲ್ಲಮದರಿಂ ಳಕಾರಂ ಲಕಾರದೊಳಂತರ್ಭಾವಮಾದುದುಮಲ್ಲದೆಯು ಮಾತ್ಮಬೀಜವಾದ ಳಕಾರಂ ಕರ್ಣಿಕಾದಳಂ ನ್ಯಸ್ತಾತ್ಮಬೀಜವಾದ ಕಾರಣದೊಳ್ಪುದಿದಿರ್ಪುದಿಂತು ಕರ್ಣಿಕಾಗ್ನಿಮಂಡಲನ್ಯಸ್ತ ದಶವ್ಯಾಪಕಾಕ್ಷರಂಗಳಂ ಪೇಳ್ದೆಯಯ್ಯಾ, ಪರಮ ಶಿವಲಿಂಗೇಶ್ವರ ಪಟುವೇದಾಂತ ಭಾಸ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
-->