ಅಥವಾ

ಒಟ್ಟು 11 ಕಡೆಗಳಲ್ಲಿ , 6 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಣಗಿದ ಮರವದು ಭೂಮಿಯಲ್ಲೇ ಲೀನ ನೋಡಾ, ಒಣಗದ ಮರವದು ಭೂಮಿಯಲ್ಲೇ ಲೀನ ನೋಡಾ, ತಿಳಿದ ಯೋಗಿಯ ಲಯವಿಲ್ಲೆ! ಸ್ವರ್ಗಕ್ಕೆ ಹೋದೆಹೆನೆಂಬುದು ಗೊಡ್ಡು-ಹುಸಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಓಂಕಾರ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿಯಃ ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ ನಮಂತಿ ಋಷಯೋ ದೇವಾ ನಮಂತ್ಯಪ್ಸರಸಾಂಗಣಾಃ ನಮಂತಿ ದೇವಾ ದೇವೇಶಂ `ನ' ಕಾರಾಯ ನಮೋ ನಮಃ ಮಹಾದೇವಂ ಮಹಾತ್ಮಾನಂ ಮಹಾಜ್ಞಾನಪರಾಯಣಂ ಮಹಾಪಾಪ ಹರಂ ನಿತ್ಯಂ `ಮ' ಕಾರಾಯ ನಮೋ ನಮಃ ಶಿವಂ ಶಾಂತಧರಂ ದೇವಂ ಲೋಕಾನುಗ್ರಹ ಕಾರಣಂ ಶಿವಮೇಕಂ ಪರಬ್ರಹ್ಮ `ಶಿ'ಕಾರಾಯ ನಮೋ ನಮಃ ವಾಹನಂ ವೈಷಭೋ ಯಸ್ಯ ವಾಸುಕಿಃ ಕಂಠಭೂಷಣಂ ವಾಮಶಕ್ತಿಧರಂ ದೇವಂ `ವ'ಕಾರಾಯ ನಮೋ ನಮಃ ಯತ್ರ ಯತ್ರ ಸ್ಥಿತೋ ದೇವಃ ಸರ್ವವ್ಯಾಪಿ ಮಹೇಶ್ವರಃ ಯೋ ಗುರುಃ ಸರ್ವದೇವಾನಾಂ `ಯ'ಕಾರಾಯ ನಮೋ ನಮಃ ವೇದ: ನಕಾರಾಯ ಮಕಾರಾಯ ಶಿಕಾರಾಯ ತಥೈವ ಚ ವಕಾರಾಯ ಯಕಾರಾಯ ಓಂಕಾರಾಯ ನಮೋ ನಮಃ ವೇದಮಾತಾ ಚ ಗಾಯಿತ್ರೀ ಮಂತ್ರಮಾತಾ ಷಡಕ್ಷರೀ ಸರ್ವದೇವಪಿತಾ ಶಂಭುಃ ಭರ್ಗೋ ದೇವಸ್ಯ ದ್ಥೀಮಹಿ ಷಡಕ್ಷರಮಿದಂ ಪುಣ್ಯಂ ಯಃ ಪಠೀತ್ ಶಿವಸನ್ನಿಧೌ ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೆ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎನ್ನದಿರ್ದಡೆ ಭವಬಂಧನ ಇಹಪರ ಸಂಸಾರಾದಿ ಪ್ರಪಂಚಬಂಧನ ಬಿಡದು. ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದಡೆ ಮೋಕ್ಷಸಿದ್ಧಿ. ಸಾಕ್ಷಿ: ಷಡಕ್ಷರಜಪಾನ್ನಾಸ್ತಿ ಸರ್ವೇಷಾಂ ಬಂಧನಂ ತಥಾ ತನ್ಮಂತ್ರಂ ಚ ಜಪನ್ ಭಕ್ತ್ಯಾ ಸದ್ಯೋ ಮುಕ್ತೋ ನ ಸಂಶಯಃ ಎಂಬುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯ ಬಂದು ಮೋಕ್ಷ ತಾನೇ ಓಂ ನಮಃ ಶಿವಾಯ.
--------------
ಉರಿಲಿಂಗಪೆದ್ದಿ
ವೇದ ಶಾಸ್ತ್ರ ಆಗಮ ವಿಜ್ಞಾನ ತರ್ಕ ವ್ಯಾಕರಣಾದಿಗಳ ಕಲಿತು ಬಲ್ಲವರೆನಿಸಿಕೊಂಡರೇನು? ಪ್ರಾಣಲಿಂಗದ ನೆಲೆಯನರಿದ ಯೋಗಿಯ ಮುಂದೆ ಇವರೆಲ್ಲ ಮೂಢರಲ್ಲದೆ ಬಲ್ಲವರಲ್ಲ. ಅದೇನು ಕಾರಣವೆಂದಡೆ: ಅವರು ಸ್ವಾನುಭಾವಜ್ಞಾನಾನುಭಾವಿಗಳಲ್ಲವಾದ ಕಾರಣ. ಇಂತಿವರು ಒಂದು ಕೋಟಿ ಶಾಸ್ತ್ರಜ್ಞರಾದರೂ ಸಮ್ಯಜ್ಞಾನಿಯಾದ ಒಬ್ಬ ಶರಣಂಗೆ ಸರಿಯಲ್ಲ. ಇದು ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನೇ ಶಿವನೆನಬೇಕು.
--------------
ಸ್ವತಂತ್ರ ಸಿದ್ಧಲಿಂಗ
ಯೋಗಿಯ ಹೊಲಬು ಯೋಗಿಯಾದವಂಗಲ್ಲದೆ, ಇತರ ನರರಿಂಗೆ ಸಾದ್ಥಿಸಬಾರದು ಕೇಳಯ್ಯಾ. ಧಾತುವಾದವದು ರಸವಾದಿಯಾದವಂಗಲ್ಲದೆ, ಇತರ ನರಂಗದು ಸಾದ್ಥಿಸಬಾರದು ಕೇಳಯ್ಯಾ. ನೋಡಿ ಮಾಡುವುದಾದಡೆ ಭವವೆಲ್ಲಿಹುದು, ದರಿದ್ರವೆಲ್ಲಿಹುದು ಹೇಳಯ್ಯಾ, ಕಪಿಲಸಿದ್ಧಯ್ಯಾ.
--------------
ಸಿದ್ಧರಾಮೇಶ್ವರ
ಅಂಗ ಲಿಂಗ ಸಂಗವರಿದ ಲಿಂಗದೇಹಿ, ತನ್ನಿಂದ ಹಿರಿದೊಂದೂ ಇಲ್ಲವೆಂದು ತಿಳಿದು ಆ ತಿಳಿವಿನೊಳಗಣ ತಿಳಿವು ತಾನೆ ವಿಶ್ವಾತ್ಮಪತಿಯಾದ ಶಿವನಜ್ಞಾನವೆಂದರಿದು ಆ ಸರ್ವಜ್ಞನಾದ ಶಿವನು ನಿರ್ಮಲದರ್ಪಣದೊಳಗಣ ಪ್ರತಿಬಿಂಬದಂತೆ ಯೋಗಿಯ ಮನವೆಂಬ ದರ್ಪಣದಲ್ಲಿ ತೋರುವ ಚಿದಾಕಾಶರೂಪ ಶಿವನ ಶರಣಜ್ಞಾನಲೋಚನದಿಂದ ಕಂಡು ಕೂಡಿ ಎರಡಳಿದು ನಿಂದನು ನಮ್ಮ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಕಲ್ಲಿನ ಹುಳ್ಳಿಯ ನೀರಲ್ಲಿ ಹುಟ್ಟಿದ ಕಿಚ್ಚು ತ್ರಿವಿಧಕ್ಕೂ ಅಲ್ಲಲ್ಲಿಯ ಗುಣವಲ್ಲಿಯದೆ, ಬೇರೊಂದಕ್ಕೆಲ್ಲಿಯೂ ತೆರಪಿಲ್ಲ. ಕಾಯಗುಣದಿಂದ ಕಲ್ಪಿತಕ್ಕೊಳಗಾಗಿ ಜೀವಗುಣದಿಂದ ಭವಕ್ಕೆ ಬೀಜವಾಗಿ ಅರಿದಿಹೆ ಗುಣದಿಂದ ಮರವೆಗೆ ಒಳಾಗಾಗಿ. ಅರಿದಿಹೆನೆಂಬ ಅರಿವು ಕುರುಹುಗೊಳ್ಳದೆ ನಿಂದುದು ನಿಜಗುಣ ಯೋಗಿಯ ಯೋಗಕ್ಕೆ ಭಾವವಿಲ್ಲದ ಸೂತ್ರದ ಬಿಂಬ.
--------------
ನಿಜಗುಣಯೋಗಿ
ಬಿಸಿಲ ಮುಂದಣ ಮಂಜಿನಂತಾಯಿತ್ತು. ದಿಟದ ಮುಂದಣ ಸಟೆಯಂತಾಯಿತ್ತು. ಪುಣ್ಯದ ಮುಂದಣ ಪಾಪದಂತಾಯಿತ್ತು. ಯೋಗಿಯ ಮುಂದಣ ಸಂಸಾರದಂತಾಯಿತ್ತು. ಧೀರನ ಮುಂದಣ ಹೇಡಿಯಂತಾಯಿತ್ತು. ಉರಗನ ಮುಂದಣ ಭೇಕನಂತಾಯಿತ್ತು. ಹರಿಯ ಮುಂದಣ ಕರಿಯಂತಾಯಿತ್ತು. ವಿವೇಕದ ಮುಂದಣ ದುಃಖದಂತಾಯಿತ್ತು. ಪುಣ್ಯಾರಣ್ಯದಹನ ಭೀಮೇಶ್ವರನೆಂಬ ಸದ್ಗುರು ಕಾರುಣ್ಯವಾಗಲೊಡನೆ ಎನ್ನ ಸುತ್ತಿಹ ಪ್ರಪಂಚು ಸರ್ವವೂ ಓಡಿದವಯ್ಯಾ!
--------------
ಕೋಲ ಶಾಂತಯ್ಯ
ಮರ ಮೊದಲಿಗೆ ಬೀಳಲು ಕೊನೆ ಎಲೆ ಹೂವು ಕಾಯಿಗಳನಿರಿಸಿ ತಾ ಬೀಳದು ನೋಡಾ. ಯೋಗಿಯ ಮನವಳಿಯಲು ಮನವಿಡಿದಿಹ ಇಂದ್ರಿಯ ವಿಷಯ ಪ್ರಾಣಂಗಳು ಮನದೊಡನೆ ಅಳಿವವಲ್ಲದೆ ಉಳಿಯವು ನೋಡಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡುವರೆ ಮನವಳಿದು ಕೂಡುವುದು ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ನಿಂದಿಸುವನೊಬ್ಬ, ಸ್ತುತಿಸುವನೊಬ್ಬ. ಇವರಿಬ್ಬರು ಪರಮಬಂಧುಗಳು. ಆ ಯೋಗಿಯ ಪುಣ್ಯವನೊಬ್ಬ ಕೊಂಬ, ಪಾಪವನೊಬ್ಬ ಕೊಂಬ. ಇದು ಕಾರಣ, ಗುರುಪ್ರಿಯ ಚೆನ್ನಬಂಕೇಶ್ವರನಲ್ಲಿ, ಸತ್ಯಶರಣರು ನಿತ್ತಮುಕ್ತರು.
--------------
ಸುಂಕದ ಬಂಕಣ್ಣ
ಊಧ್ರ್ವಮುಖಮೂಲ ಅಧೋಶಾಖೆಯಾದ ವೃಕ್ಷದ ಮೂಲದಲ್ಲಿ ಒಬ್ಬ ಯೋಗಿಯಿದಾನೆ. ಆ ಯೋಗಿಯ ಕೈಯಲ್ಲೊಂದು ಅಮೃತವ ಫಲವ ನೋಡಾ. ಆ ಫಲವ ಮೆದ್ದವರೆಲ್ಲ ಅಮರರಾದುದ ಕಂಡು ನಾನು ಬೆರಗಾದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಯೋಗಿಯ ಶರೀರ ವೃಥಾಯ ಹೋಗಲಾಗದಯ್ಯಾ. ಪುಣ್ಯವ ಪುಣ್ಯವ ಮಾಡುವುದು ಲೋಕಕ್ಕೆ. ಆಯ ಹಾಯ ಹತ್ತುವುದಯ್ಯಾ. ಆ ಲೋಕಕ್ಕೆ ಸೋಪಾನವ ಕೊಡುವ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನು.
--------------
ಸಿದ್ಧರಾಮೇಶ್ವರ
-->