ಅಥವಾ

ಒಟ್ಟು 51 ಕಡೆಗಳಲ್ಲಿ , 14 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ವಿಭೂತಿ ಭಸಿತ ಭಸ್ಮಕ್ಷಾರ ರಕ್ಷೆ ಎಂಬ ಪಂಚ ವಿಭೂತಿ ಉತ್ಪತ್ಯವೆಂತೆಂದಡೆ : ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂಬ ಪಂಚಮುಖದಲ್ಲಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಉತ್ಪತ್ಯವಾಯಿತ್ತು. ಆ ಪೃಥ್ವಿಯಪ್ಪುತೇಜವಾಯುವಾಕಾಶದಿಂದಲ್ಲಿ ನಿವೃತ್ತಿ ಪ್ರತಿಷ್ಠೆ ವಿದ್ಯಾ ಶಾಂತಿ ಶಾಂತ್ಯಾತೀತಯೆಂಬ ಪಂಚಕಲೆಗಳುತ್ಪತ್ಯವಾಯಿತ್ತು. ಆ ಪಂಚಕಲೆಗಳಿಂದ ನಂದೆ ಭದ್ರೆ ಸುರಬ್ಥಿ ಸುಶೀಲೆ ಸುಮನೆಯೆಂಬ ಪಂಚಗೋವುಗಳುತ್ಪತ್ಯವಾಯಿತ್ತು. ಆ ಪಂಚಗೋವುಗಳ ಗೋಮಯದಲ್ಲಿ ವಿಭೂತಿ ಭಸಿತ ಭಸ್ಮಕ್ಷಾರ ರಕ್ಷೆಯೆಂಬ ಪಂಚವಿಭೂತಿ ಉತ್ಪತ್ಯವಾಯಿತ್ತು. ಇದಕ್ಕೆ ಜಾಬಾಲೋಪನಿಷತ್ : ``ಸದ್ಯೋಜಾತಾತ್ ಪೃಥಿವೀ ತಸ್ಯಾ ನಿವೃತ್ತಿಃ ತಸ್ಯಾಃ ಕಪಿಲವರ್ಣಾ ನಂದಾ ತಸ್ಯಾಃ ಗೋಮಯೇನ ವಿಭೂತಿರ್ಜಾತಾ || ವಾಮದೇವಾದುದಕಂ ತಸ್ಮಾತ್ ಪ್ರತಿಷ್ಠಾ ತಸ್ಯಾಃ ಕೃಷ್ಣವರ್ಣಾ ಭದ್ರಾ ತಸ್ಯಾಃ ಗೋಮಯೇನ ಭಸಿತಂ ಜಾತಂ || ಅಘೋರಾದ್ವಹ್ನಿಃ ತಸ್ಮಾತ್ ವಿದ್ಯಾ ತಸ್ಯಾಃ ರಕ್ತವರ್ಣಾ ಸುರಬ್ಥೀ ತಸ್ಯಾಃ ಗೋಮಯೇನ ಭಸ್ಮ ಜಾತಂ || ತತ್ಪುರುಷಾತ್ ವಾಯುಃ ತಸ್ಮಾತ್ ಶಾಂತಿ ಃ ತಸ್ಯಾಃ ಶ್ವೇತವರ್ಣಾ ಸುಶೀಲಾ ತಸ್ಯಾಃ ಗೋಮಯೇನ ಕ್ಷಾರಂ ಜಾತಂ || ಈಶಾನಾದಾಕಾಶಃ ತಸ್ಮಾತ್ ಶಾಂತ್ಯತೀತಾ ತಸ್ಯಾಃ ಚಿತ್ರವರ್ಣಾ ಸುಮನಾಃ ತಸ್ಯಾಃ ಗೋಮಯೇನ ರಕ್ಷಾ ಜಾತಾ ||'' ``ಐಶ್ವರ್ಯಕಾರಣಾತ್ ಭೂತಿಃ, ಭಾಸನಾತ್ ಭಸಿತಂ, ಸರ್ವಾಘಭಕ್ಷಣಾತ್ ಭಸ್ಮಂ, ಅಪದಾಂ ಕ್ಷರಣಾತ್ ಕ್ಷಾರಂ, ಭೂತಪ್ರೇತಪಿಶಾಚಬ್ರಹ್ಮರಾಕ್ಷಸಾಪಸ್ಮಾರ ಭವಬ್ಥೀತಿಭ್ಯೋsಬ್ಥಿರಕ್ಷಣಾತ್ ರಕ್ಷೇತಿ ||'' ಇಂತೆಂದುದು ಶ್ರುತಿ. ಇದಕ್ಕೆ ಕ್ರಿಯಾಸಾರೇ : ``ವಿಭೂತಿರ್ಭಸಿತಂ ಭಸ್ಮ ಕ್ಷಾರಂ ರಕ್ಷೇತಿ ಭಸ್ಮನಃ | ಭವಂತಿ ಪಂಚ ನಾಮಾನಿ ಹೇತು ರಕ್ಷಣಾದ್ರಕ್ಷೇತಿ ||'' ಇಂತೆಂದುದು ಶ್ರುತಿ. ``ಪಂಚಬ್ಥಿಃಬೃಷಂ ಐಶ್ವರ್ಯಕಾರಣಾದ್ಭೂತಿ, ಭಸ್ಮ ಸರ್ವಾಘಭಕ್ಷಣಾತ್, ಭಾಸನಾತ್ ಭಸಿತಂ, ತತ್ವಾ ಕ್ಷರಣಾತ್‍ಕ್ಷಾರಮಾಪದಂ, ಭೂತಪ್ರೇತಪಿಶಾಚೇಭ್ಯೋ ಸ್ವರ್ಗಹೇತುಭ್ಯೋಬ್ಥಿರಕ್ಷಣಾತ್ ರಕ್ಷಾ ಸ್ಯಾತ್ ಕ್ರೂರಸರ್ಪೇಭ್ಯೋ ವ್ಯಾಘ್ರಾದಿಭ್ಯಶ್ಚ ಸರ್ವದಾ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಾಷ್ಠವ ಸುವರ್ಣವ ಮಾಡಿದೆನೆಂಬ ಘಾತುಕತನವೆ ನಿಮ್ಮ ಭಕ್ತಿ ? ಸಕಲ ದೇಶ ಕೋಶ ವಾಸ ಭಂಡಾರ ಸವಾಲಕ್ಷ ಮುಂತಾದ ಸಂಬಂಧ, ಸ್ತ್ರೀಯರ ಬಿಟ್ಟು ಬಂದೆನೆಂಬ ಕೈಕೂಲಿಯೆ ನಿಮ್ಮ ಭಕ್ತಿ ? ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಂತಾದ ಏಳುನೂರೆಪ್ಪತ್ತು ಅಮರಗಣಂಗಳ ಭಾವವಿದ್ದಂತೆ ನಿಮ್ಮ ಅಗಡವೇಕಯ್ಯಾ ? ನಿಮ್ಮ ಅರಿವಿಂಗೆ ಇದಿರಿನಲ್ಲಿ ಕೂಡಿಹೆನೆಂಬ ಭಿನ್ನಭಾವವುಂಟೆ ಅಯ್ಯಾ ? ಕರ್ಪೂರದ ಅರಣ್ಯವ ಕಿಚ್ಚುಹತ್ತಿ ಬೆಂದಲ್ಲಿ ಭಸ್ಮ ಇದ್ದಿಲೆಂದು ಲಕ್ಷಿಸಲುಂಟೆ ? ನಿಮ್ಮ ಭಾವವ ನಿಮ್ಮಲ್ಲಿಗೆ ತಿಳಿದುಕೊಳ್ಳಿ. ನಿಮ್ಮ ಕೂಟಕ್ಕೆ ಎನ್ನ ನಾಚಿಕೆಯ ಬಿಡಿಸಿದ ತೆರನ ತಿಳಿದುಕೊಳ್ಳಿ. ಶಕ್ತಿಯ ಮಾತೆಂದು ಧಿಕ್ಕರಿಸಬೇಡಿ. ಹೊರಗೆ ಕೂಡಿಹೆನೆಂಬುದು ನಿಮ್ಮ ಅರಿವಿಂಗೆ ಹಾನಿ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ, ನಿಮ್ಮ ಶರಣರ ನೆಲೆಯ ನೀವೇ ನೋಡಿಕೊಳ್ಳಿ.
--------------
ಮೋಳಿಗೆ ಮಹಾದೇವಿ
ಜಯ ಜಯ ನಿರುಪಮ ನಿರವಯ ನಿಷ್ಕಲ ಜಯ ಜಯ ನಿಶ್ಚಲ ನಿರ್ಮಲ ನಿರ್ಗುಣ ಜಯ ಜಯ ಪರಮ ನಿರಂಜನ ಸದ್ಗುರು ಮಹಾಂತ ಶರಣಾರ್ಥಿ. | ಪಲ್ಲ | ಸುಳ್ಳೆ ನಿರ್ಬೈಲೆನಿಸಿ ಮೆರೆದಿ ಸುಳ್ಳೆ ಮಹಾಬೈಲಾಗಿ ತೋರಿದಿ ಸುಳ್ಳೆ ಚಿದ್ಬೈಲವಾಗಿ ಸಾರಿದಿ ಸುಳ್ಳೆ ಪರಬ್ರಹ್ಮಾ ಸುಳ್ಳೆ ಪರಶಿವ ಚಿತ್ತಬ್ಥಿತ್ತಿಯು ಸುಳ್ಳೆ ಇಚ್ಛೆಯ ನೆನವಕೊನರಿಸಿ ಸುಳ್ಳೆ ಮನಘನವೃಕ್ಷ ಮಾಡಿದಿ ಮಹಾಂತ ಶರಣಾರ್ಥಿ. | 1 | ಸುಳ್ಳೆ ನೆಲ ಜಲ ಅಗ್ನಿ ವಾಯು ಸುಳ್ಳೆ ಗಗನಾತ್ಮಾರ್ಕ ಚಂದ್ರಮ ಸುಳ್ಳೆ ತಾರಕ ಕಠೋರ ಮಹಾಮಹತ್ವಣುವಿಗಣು ಮಾಯೆ ಸುಳ್ಳೆ ಬೀಜದ ಸಸಿಯ ಫಲರಸ ಸುಳ್ಳೆ ಶೋಣಿತ ಶುಕ್ಲ ಶರೀರ ಸುಳ್ಳೆ ಹಮ್ಮು ಮತ್ತಾಶೆ ಮಾಡಿದೆ ಮಹಾಂತ ಶರಣಾರ್ಥಿ. | 2 | ಸುಳ್ಳೆ ತ್ರಿಜಗ ಸಚರಾಚರಗಳು ಸುಳ್ಳೆ ತನ್ನನು ತಾನೆ ಎಂಬುದು ಸುಳ್ಳೆ ಕುಲ ಛಲ ಸುಳ್ಳೆ ಮತಿ ತತಿ ಸುಳ್ಳೆ ವ್ರತಶೀಲಾ ಸುಳ್ಳೆ ತಾ ಸತ್ಕರ್ಮ ಸದ್ಗುಣ ಸುಳ್ಳೆ ತಾ ದುಷ್ಕರ್ಮ ದುರ್ಗುಣ ಸುಳ್ಳೆ ಸರ್ವವ್ಯಾಪಾರ ಮಾಡಿದೆ ಮಹಾಂತ ಶರಣಾರ್ಥಿ. | 3 | ಸುಳ್ಳೆ ಕಾಮ ಶೀಮ ನೇಮವು ಸುಳ್ಳೆ ಭೋಗ ತ್ಯಾಗ ಯೋಗವು ಸುಳ್ಳೆ ಜಪ ತಪ ಧ್ಯಾನ ಮೌನವು ಸುಳ್ಳೆ ಪದಫಲವು ಸುಳ್ಳೆ ಇಹಪರ ಪಾಪ ಪುಣ್ಯವು ಸುಳ್ಳೆ ಸ್ವರ್ಗ ನರಕ ಸುಖ ದುಃಖ ಸುಳ್ಳೆ ನೋವು ಸಾವು ಮಾಡಿದೆ ಮಹಾಂತ ಶರಣಾರ್ಥಿ. | 4 | ಸುಳ್ಳೆ ಭಾವದ ಭ್ರಮಿಗೆ ಭವಭವ ಸುಳ್ಳೆ ತಾ ತಿರುತಿರುಗಿ ಬಳಲುತೆ ಸುಳ್ಳೆ ಉತ್ಪತ್ತಿ ಸ್ಥಿತಿ ಲಯಂಗಳಾಗಿ ಮಣ್ಣಾಯಿತು ಸುಳ್ಳೆ ತಾ ಮಹಾಮೇರು ಮಹತ್ವವು ಸುಳ್ಳೆ ಈ ಮಾಯಾ ಗಮನವು ಸುಳ್ಳೆ ಶರಣರ ಐಕ್ಯ ಮಾಡಿದಿ ಮಹಾಂತ ಶರಣಾರ್ಥಿ | 5 | ಸುಳ್ಳೆ ಅಷ್ಟಾವರಣದರ್ಚನೆ ಸುಳ್ಳೆ ತಾ ಅಷ್ಟಾಂಗಯೋಗವು ಸುಳ್ಳೆ ಬೆಳಗಿನ ಬೆಳಗು ಅದ್ವೆ ೈತಾದಿ ನಿಜಮುಕ್ತಿ ಸುಳ್ಳೆ ಖರೇ ಮಾಡಿ ಸಲೆ ಕಾಡಿದಿ ಸುಳ್ಳೆ ಸುಳ್ಳೆನಿಸುತ್ತೆ ಹಬ್ಬಿದಿ ಸುಳ್ಳೆ ಆಟವನಾಡಿ ಮೆರೆಯುವ ಮಹಾಂತ ಶರಣಾರ್ಥಿ. | 6 | ಸುಳ್ಳೆ ತಾ ಶಿವ ಸುಳ್ಳೆ ನೀ ಗುರು ಸುಳ್ಳೆ ನಾ ಶಿಷ್ಯಾಗಿ ಈ ಭವಕರ ಸುಳ್ಳೆ ಲಿಂಗವ ಕಂಡು ಜಂಗಮತೀರ್ಥಪ್ರಸಾದ ಸುಳ್ಳೆ ಭಸ್ಮ ಶಿವೇಕ್ಷಮಣಿ ಮಂತ್ರ ಸುಳ್ಳೆ ಅನುಗೊಳಿಸ್ಯಾತ್ಮ ತತ್ವವ ಸುಳ್ಳೆ ಧ್ಯಾನವ ಹುಡುಕಿ ಮಾಡಿದಿ ಮಹಾಂತ ಶರಣಾರ್ಥಿ | 7 | ಸುಳ್ಳೆ ಹುಡುಕಿ ನಾ ನನ್ನ ಮರೆದೆ ಸುಳ್ಳೆ ಹುಡುಕಿ ನಾ ನಿನ್ನ ಅರಿದೆ ಸುಳ್ಳೆ ಹುಡುಕಿ ಮುಕ್ತಿ ಮೆರೆದೆನು ಸುಳ್ಳೆ ತಾನಾಯಿತು ಸುಳ್ಳೆ ಬಂದಿತು ಸುಳ್ಳೆ ನಿಂದಿತು ಸುಳ್ಳೆ ಹೊಂದಿತು ಸುಳ್ಳೆ ಹೋಯಿತು ಸುಳ್ಳೆ ಖರೆ ಮಾಡಿಸದೆ ಕಾಡಿದಿ ಮಹಾಂತ ಶರಣಾರ್ಥಿ | 8 | ಸುಳ್ಳೆ ಇಪ್ಪತ್ತೈದು ನಿಜಪದ ಸುಳ್ಳೆ ಹತ್ತೊಂಬತ್ತು ವಚನಗಳು ಸುಳ್ಳೆ ಈ ಪರಿವದ್ರ್ಥಿನೊಂಬತ್ತೆಂದೆನು ಹಾಡು ಸುಳ್ಳೆ ಹಾಡುವದಾಯ್ತು ಹಾಡು ಸುಳ್ಳೆ ಹದಿನೇಳ್ನೂರೈವತ್ತು ಸರ್ವಕೆ ಸುಳ್ಳೆ ತಿಳಿದರೆಡುಳ್ಳೆ ಮಾಡಿದಿ ಮಹಾಂತ ಶರಣಾರ್ಥಿ | 9 |
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಶಿವಶಿವಾ ದ್ವಿಜರೆಂಬ ಪಾತಕರು ನೀವು ಕೇಳಿ ಭೋ ! ನೀವು ಎಲ್ಲಾ ಜಾತಿಗೂ ನಾವೇ ಮಿಗಿಲೆಂದು, `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂದು, ಬಳ್ಳಿಟ್ಟು ಬಾಸ್ಕಳಗೆಡವುತಿಪ್ಪಿರಿ ನೋಡಾ. `ಆದಿ ಬಿಂದುದ್ಭವೇ ಬೀಜಂ' ಎಂಬ ಶ್ರುತಿಯಿಂ ತಿಳಿದು ನೋಡಲು ಆದಿಯಲ್ಲಿ ನಿಮ್ಮ ಮಾತಾಪಿತರ ಕೀವು ರಕ್ತದ ಮಿಶ್ರದಿಂದ ನಿಮ್ಮ ಪಿಂಡ ಉದಯಿಸಿತ್ತು. ಆ ಕೀವು ರಕ್ತಕ್ಕೆ ಆವ ಕುಲ ಹೇಳಿರೆ ? ಅದೂ ಅಲ್ಲದೆ ಪಿಂಡ ಒಂಬತ್ತು ತಿಂಗಳು ಒಡಲೊಳಗೆ ಕುರುಳು, ಮಲಮೂತ್ರ, ಕೀವು, ದುರ್ಗಂಧ, ರಕ್ತ ಖಂಡಕಾಳಿಜ ಜಂತುಗಳೊಳಗೆ, ಪಾತಾಳದೊಳಗಣ ಕ್ರಿಮಿಯಂತೆ ಹೊದಕುಳಿಗೊಂಬಂದು ನೀನಾವ ಕುಲ ಹೇಳಿರೆ ? ಅದುವಲ್ಲದೆ ಮೂತ್ರದ ಕುಳಿಯ ಹೊರವಡುವಾಗ, ಹೊಲೆ ಮುಂತಾಗಿ ಮುದುಡಿ ಬಿದಲ್ಲಿ, ಹೆತ್ತವಳು ಹೊಲತಿ, ಹುಟ್ಟಿದ ಮಗುವು ಹೊಲೆಯನೆಂದು ನಿಮ್ಮ ಕುಲಗೋತ್ರ ಮುಟ್ಟಲಮ್ಮದೆ, ಹನ್ನೆರಡು ದಿನದೊಂದು ಪ್ರಾಯಶ್ಚಿತ್ತವನಿಕ್ಕಿಸಿಕೊಂಡು ಬಂದು ನಿನ್ನಾವ ಕುಲ ಹೇಳಿರೆ ? ಮುಂಜಿಗಟ್ಟದ ಮುನ್ನ ಕೀಳುಜಾತಿ, ಮುಂಜಿಗಟ್ಟಿದ ಬಳಿಕ ಮೇಲುಜಾತಿಗಳು ಎಂಬ ಪಾತಕರು ನಿಮ್ಮ ನುಡಿ ಕೊರತೆಗೆ ನೀವು ನಾಚಬೇಡವೆ ? ನೀವು ನಾಚದಿರ್ದಡೆ ನಾ ನಿಮ್ಮ ಕುಲದ ಬೇರನೆತ್ತಿ , ತಲೆಕೆಳಗು ಮಾಡಿ ತೋರಿಹೆನು. ನಾನು ಉತ್ತಮದ ಬ್ರಾಹ್ಮಣರೆಂಬ ನಿಮ್ಮ ದೇಹ ಬ್ರಹ್ಮನೊ ? ನಿಮ್ಮ ಪ್ರಾಣ ಬ್ರಹ್ಮನೊ ? ಆವುದು ಬ್ರಾಹ್ಮಣ್ಯ ? ಬಲ್ಲಡೆ ಬಗುಳಿರಿ ! ಅರಿಯದಿರ್ದಡೆ ಕೇಳಿರಿ. ದೇಹ ಕುಲಜನೆಂದಡೆ ಚರ್ಮಕ್ಕೆ ಕುಲವಿಲ್ಲ, ಖಂಡಕ್ಕೆ ಕುಲವಿಲ್ಲ, ನರವಿಂಗೆ ಕುಲವಿಲ್ಲ, ರಕ್ತಕ್ಕೆ ಕುಲವಿಲ್ಲ, ಕೀವಿಂಗೆ ಕುಲವಿಲ್ಲ. ಕರುಳಿಂಗೆ ಕುಲವಿಲ್ಲ, ಮಲಮೂತ್ರಕ್ಕಂತೂ ಕುಲವಿಲ್ಲ, ಒಡಲೆಂಬುದು ಅಪವಿತ್ರವಾಯಿತ್ತು, ಕುಲವೆಲ್ಲಿಯದೊಡಲಿಂಗೆ ? ಅವಂತಿರಲಿ ; ಇನ್ನು ನಿಮ್ಮ ಪ್ರಾಣಕ್ಕೆ ಕುಲವುಂಟೆಂದಡೆ. ಪ್ರಾಣ ದಶವಾಯುವಾದ ಕಾರಣ, ಆ ವಾಯು ಹಾರುವನಲ್ಲ. ಅದುವಲ್ಲದೆ ನಿಮ್ಮ ಒಡಲನಲಗಾಗಿ ಇರಿವ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳು ಉತ್ತಮ ಕುಲವೆಂಬ ಅವು ಮುನ್ನವೆ ಪಾಪಕಾರಿಗಳಾದ ಕಾರಣ, ಅವಕ್ಕೆ ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮೊಳಗಣ ಸಪ್ತವ್ಯಸನಂಗಳು ಉತ್ತಮ ಕುಲವೆಂಬ ಅವು ಮುನ್ನವೆ ದುರ್ವ್ಯಸನಂಗಳಾದ ಕಾರಣ, ಅದಕೆಂದೂ ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮ ಅಷ್ಟಮದಂಗಳು ಉತ್ತಮ ಕುಲವೆಂಬ ಅವು ನಿನ್ನ ಸುರೆಯ ಸವಿದ ಕೋಡಗದ ಹಾಂಗೆ ನಿಮ್ಮ ಗಾಣಲೀಯವಾದ ಕಾರಣ, ಅವು ಕುಲವಿಲ್ಲ. ನಿಲ್ಲು ! ಬಗುಳದಿರು ! ಇನ್ನು ಒಡಲ ತಾಪತ್ರಯಂಗಳು ಉತ್ತಮ ಕುಲವೆಂಬ ಅವು ನಿಮ್ಮ ಇರಿದಿರಿದು ಸುಡುವ ಒಡಗಿಚ್ಚುಗಳು. ಅವು ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮೊಡಲ ಮುಚ್ಚಿದ ಮಲಮೂತ್ರಂಗಳ ಕುಲವುಂಟೆ ? ಅವು ಅರಿಕೆಯಲಿ ಮಲಮೂತ್ರಂಗಳಾದ ಕಾರಣ, ಅವಕ್ಕೆ ಕುಲವಿಲ್ಲ ನಿಲ್ಲು ! ಮಾಣು ! ಇನ್ನು ಉಳಿದ ಅಂತಃಕರಣಂಗಳಿಗೆ ಉತ್ತಮ ಕುಲವೆಂಬಿರಿ. ಅವ ನೀವು ಕಾಣಿರಿ, ನಿಮ್ಮನವು ಕಾಣವು. ಅದು ಕಾರಣ ಬಯಲಭ್ರಮೆಗೆ ಉತ್ತಮ ಕುಲವುಂಟೆ ? ಇಲ್ಲ ! ಇಲ್ಲ !! ನಿಲ್ಲು ! ಮಾಣು ! ಇಂತು ನಿಮ್ಮ ಪಂಚಭೂತ ಸಪ್ತಧಾತು ಪಂಚೇಂದ್ರಿಯಂಗಳು ಉತ್ತಮ ಕುಲವೆಂಬ ಅವು ಎಲ್ಲಾ ಜೀವರಾಶಿಗೂ ನಿಮಗೂ ಒಂದೇ ಸಮಾನ. ಅದೆಂತೆಂದಡೆ : ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ || ಎಂದುದಾಗಿ, ನಿಮ್ಮ ದೇಹಕ್ಕೆ ಕುಲವಾವುದು ಹೇಳಿರೆ ! ಇದಲ್ಲದೆ ಆತ್ಮನು ದೇಹವ ಬಿಟ್ಟು, ಒಂದು ಘಳಿಗೆ ತೊಲಗಿರಲು ಆ ದೇಹ ಹಡಿಕೆಯಾಗಿ ಹುಳಿತು, ನಾಯಿ ನರಿ ತಿಂಬ ಕಾರಣ ನಿಮ್ಮ ದೇಹ ಅಪವಿತ್ರ ಕಾಣಿರೆ ! ಇಂತಪ್ಪ ಅಪವಿತ್ರ ಕಾರ್ಯಕ್ಕೆ ಕುಲವಿಲ್ಲ. ಆ ಕಾರ್ಯಕ್ಕೆ ಕುಲವುಂಟೆಂದಡೆ ಮೇಲುಜಾತಿಯ ದೇಹದೊಳಗೆ ಹಾಲುವುಳ್ಳಡೆ ಕೀಳುಜಾತಿಯ ದೇಹದೊಳಗೆ ರಕ್ತವುಳ್ಳಡೆ ಅದು ಕುಲವಹುದು ! ಅಂಥಾ ಗುಣ ನಿಮಗಿಲ್ಲವಾಗಿ, ಎಲ್ಲಾ ಜೀವರಾಶಿಯ ದೇಹವು, ನಿಮ್ಮ ದೇಹವು ಒಂದೇ ಸಮಾನವಾದ ಕಾರಣ ನಿಮಗೆ ಕುಲವಿಲ್ಲ ! ನಿಲ್ಲು ! ಮಾಣು ! ಒಡಲು ಕರಣಾದಿಗಳು ಕುಲವಿಲ್ಲದೆ ಹೋದಡೂ ಎಲ್ಲವೂ ಅರಿವ ಚೈತನ್ಯಾತ್ಮಕನೆ, ಸತ್ಕುಲಜನೆ ಆತ್ಮನು, ಆವ ಕುಲದೊಳಗೂ ಅಲ್ಲ. ಶರೀರ ಬೇರೆ, ಆತ್ಮ ಬೇರೆ. ಅದೆಂತೆಂದಡೆ : ಭೂದೇವಮೃದ್ಭಾಂಡಮನೇಕ ರೂಪಂ ಸುವರ್ಣಮೇಕಂ ಬಹುಭೂಷಣಾನಾಂ | ಗೋಕ್ಷೀರಮೇಕಂ ಬಹುವರ್ಣಧೇನುಃ | ಶರೀರಭೇದಸ್ತೆ ್ವೀಕಃ ಪರಮಾತ್ಮಾ || ಎಂದುದಾಗಿ, ಶರೀರಂಗಳು ಅನಂತ, ಆತ್ಮನೊಬ್ಬನೆ. ಅದು ಕಾರಣ, ಆ ಆತ್ಮನು ಆವ ಕುಲದಲ್ಲೂ ಅಲ್ಲ. ಇನ್ನು ಆವ ಠಾವಿನಲ್ಲಿ ನಿಮ್ಮ ಕುಲದ ಪ್ರತಿಷ್ಠೆಯ ಮಾಡಿ ತೋರಿವಿರೊ ? ದೇಹದ ಮೃತ್ತಿಕೆ ಆತ್ಮ ನಿರಾಕಾರನೆನುತ್ತಿರಲು, ಇನ್ನಾವ ಪರಿಯಲ್ಲಿ ನಾ ಉತ್ತಮ ಕುಲಜರೆಂಬಿರೊ ? ಜೀವಶ್ಶಿವೋ ಶಿವೋ ಜೀವಸ್ಸಜೀವಃ ಕೇವಲಃ ಶಿವಃ | ಪಾಶಬದ್ಧಸ್ಥಿತೋ ಜೀವಃ ಪಾಶಮುಕ್ತಃ ಸದಾಶಿವಃ || ಎಂಬ ಶ್ರುತಿಯಂ ತಿಳಿದು ನೋಡಲು, ನೀವೆಲ್ಲಾ ಪಾಶಬದ್ಧ ಜೀವಿಗಳಾಗುತ್ತ ಇರಲು, ನಿಮಗೆಲ್ಲಿಯ ಉತ್ತಮ ಕುಲ ? ಪಾಶಮುಕ್ತರಾದ ಎಮ್ಮ ಶಿವಭಕ್ತರೆ ಕುಲಜರಲ್ಲದೆ ನಿಮಗೆ ಉತ್ತಮ ಕುಲ ಉಂಟಾದಡೆ, ನಿಮ್ಮ ದೇಹದೊಳಗೆ ಹೊರಗೆ ಇಂಥಾ ಠಾವೆಂದು ಬೆರಳುಮಾಡಿ ತೋರಿ ! ಅದೂ ಅಲ್ಲದೆ ಒಂದು ಪಕ್ಷಿಯ ತತ್ತಿಯೊಳಗೆ ಹಲವು ಮರಿ ಹುಟ್ಟಿದಡೆ ಒಂದರ ಮರಿಯೋ, ಹಲವು ಪಕ್ಷಿಯ ಮರಿಯೋ ? ತಿಳಿದು ನೋಡಿದಡೆ ಅದಕ್ಕೆ ಬೇರೆ ಬೇರೆ ಪಕ್ಷಿಗಳೆಂಬ ಕುಲವಿಲ್ಲ. ಅಹಂಗೆ ಒಬ್ಬ ಬ್ರಹ್ಮನ ಅಂಡವೆಂಬ ತತ್ತಿಯೊಳಗೆ ಸಕಲ ಜೀವರಾಶಿ ಎಲ್ಲಾ ಉದಯಿಸಿದವು. ಅದೆಂತೆಂದಡೆ : ಪೃಥಿವ್ಯಾಕಾಶಯೋರ್ಭಾಂಡಂ ತಸ್ಯಾಂಡಂ ಜಾಯತೇ ಕುಲಂ | ಅಂತ್ಯಜಾತಿದ್ರ್ವಿಜಾತಿರ್ಯಾ ಏಕಯೋನಿಸಹೋದರಾ || ಎಂದುದಾಗಿ, ಇರುಹೆ ಮೊದಲು, ಆನೆ ಕಡೆಯಾದ ಸಚರಾಚರವೆಲ್ಲವು ಒಬ್ಬ ಬ್ರಹ್ಮನ ಅಂಡದೊಳಗೆ ಹುಟ್ಟಿ, ಏಕಯೋನಿ ಸಹೋದರರೆಂದು ಪ್ರತಿಷ್ಠಿಸುತ್ತಿರಲು, ನಿಮಗೆಲ್ಲಿಯ ಕುಲವೊ ? ಶಿವಭಕ್ತರೆ ಉತ್ತಮ ಕುಲಜರೆಂದು, ಮಿಕ್ಕಿನವರೆಲ್ಲಾ ಕೀಳುಜಾತಿ ಎಂಬುದನು ಓದಿ ಬರಿದೊರೆಯಾದಡು ನಾನು ನಿಮಗೆ ಹೇಳಿಹೆನು ಕೇಳಿ ಶ್ವಪಚೋಪಿ ಮುನಿಶ್ರೇಷ್ಠಶ್ಶಿವ ಸಂಸ್ಕಾರಸಂಯುತಃ | ಶಿವಸಂಸ್ಕಾರಹೀನಶ್ಚ ಬ್ರಾಹ್ಮಣಃ ಶ್ವಪಚಾಧಮಃ || ಎಂಬ ಶ್ರುತಿಗೆ ಇದಿರುತ್ತರವ ಕೊಟ್ಟಡೆ, ಬಾಯಲ್ಲಿ ಕಾಷ್ಟವ ಮೂಡುವುದಾಗಿ ನೀವೇ ಕೀಳುಜಾತಿಗಳು, ಅರಿದ ಶಿವಭಕ್ತರು ಸತ್ಕುಲಜರೆಂದು ಸುಮ್ಮನಿರಿರೋ. ಅಲ್ಲದ ಅಜ್ಞಾನರಾದುದೆಲ್ಲಾ ಒಂದು ಕುಲ. ಸುಜ್ಞಾನರಾದುದೆಲ್ಲಾ ಒಂದು ಕುಲವೆಂದು ಶಾಸ್ತ್ರಗಳು ಹೇಳುತ್ತಿದಾವೆ. ಅದೆಂತೆಂದಡೆ : ಆಹಾರನಿದ್ರಾಭಯಮೈಥುನಂ ಚ ಸಾಮಾನ್ಯಮೇತತ್ಪಶುಬ್ಥಿರ್ನರಾಣಾಂ | ಜ್ಞಾನಂ ಹಿ ತೇಷಾಂ ಅದ್ಥಿಕೋ ವಿಶೇಷಃ ಜ್ಞಾನೇನ ಹೀನಾಃ ಪಶುಬ್ಥಿಃ ಸಮಾನಾಃ || ಎಂದುದಾಗಿ, ಅಜ್ಞಾನತಂತುಗಳು ನೀವೆಲ್ಲರೂ ಕರ್ಮಪಾಶಬದ್ಧರು. ನಿಮಗೆಲ್ಲಿಯದೊ ಸತ್ಕುಲ ? ಇದು ಅಲ್ಲದೆ ನಿಮ್ಮ ನುಡಿಯೊಡನೆ ನಿಮಗೆ ಹಗೆಮಾಡಿ ತೋರಿಹೆನು. ಕೇಳೆಲವೊ ನಿಮಗೆ ಕುಲವು ವಶಿಷ್ಟ, ವಿಶ್ವಾಮಿತ್ರ, ಭಾರದ್ವಾಜ, ಕೌಂಡಿಲ್ಯ, ಕಾಶ್ಯಪನೆಂಬ ಋಷಿಗಳಿಂದ ಬಂದಿತ್ತೆಂಬಿರಿ. ಅವರ ಪೂರ್ವವನೆತ್ತಿ ನುಡಿದಡೆ ಹುರುಳಿಲ್ಲ. ಅವರೆಲ್ಲಾ ಕೀಳುಜಾತಿಗಳಾದ ಕಾರಣ, ನೀವೇ ಋಷಿಮೂಲವನು, ನದಿಮೂಲವನೆತ್ತಲಾಗದೆಂಬಿರಿ. ಇನ್ನು ನಿಮ್ಮ ನುಡಿ ನಿಮಗೆ ಹಗೆಯಾಯಿತ್ತೆಂದೆ ಕೇಳಿರೊ. ಆ ಋಷಿಗಳ ಸಂತಾನವಾಗಿ ನಿಮ್ಮ ಮೂಲವನೆತ್ತಿದಡೂ ಹುರುಳಿಲ್ಲ. ಅದಂತಿರಲಿ. ನಿಮ್ಮ ಕುಲಕೆ ಗುರುವೆನಿಸುವ ಋಷಿಗಳೆಲ್ಲರೂ ಲಿಂಗವಲ್ಲದೆ ಪೂಜಿಸರು, ವಿಭೂತಿ ರುದ್ರಾಕ್ಷಿಯನಲ್ಲದೆ ಧರಿಸರು, ಪಂಚಾಕ್ಷರಿಯನಲ್ಲದೆ ಜಪಿಸರು, ಜಡೆಯನ್ನಲ್ಲದೆ ಕಟ್ಟರು. ಹಾಗೆ ನೀವು ಲಿಂಗವ ಪೂಜಿಸಿ, ವಿಭೂತಿ ರುದ್ರಾಕ್ಷಿಯ ಧರಿಸಿ, ಪಂಚಾಕ್ಷರಿಯ ಜಪಿಸಿ, ಜಡೆಯ ಕಟ್ಟಿ, ಈಶ್ವರನ ಲಾಂಛನವ ಧರಿಸಿದಡೆ ನೀವು ಋಷಿಮೂಲದವರಹುದು. ಹೇಗಾದಡೂ ಅನುಸರಿಸಿಕೊಳಬಹುದು. ಅದು ನಿಮಗಲ್ಲದ ಮಟ್ಟಿಯನ್ನಿಟ್ಟು ವಿಷ್ಣುವಂ ಪೂಜಿಸಿ ಮುಡುಹಂ ಸುಡಿಸಿಕೊಂಡು, ಸಾಲಿಗ್ರಾಮ, ಶಕ್ತಿ, ಲಕ್ಷ್ಮಿ, ದುರ್ಗಿ ಎಂಬ ಕಿರುಕುಳದೈವವಂ ಪೂಜಿಸಿ, ನರಕಕ್ಕಿಳಿದು ಹೋಹರಾದ ಕಾರಣ, ನೀವೇ ಹೀನಜಾತಿಗಳು. ನಿಮ್ಮ ಋಷಿಮಾರ್ಗವ ವಿಚಾರಿಸಿ ನಡೆಯಿರಾಗಿ ನೀವೇ ಲಿಂಗದ್ರೋಹಿಗಳು. ಲಿಂಗವೆ ದೈವವೆಂದು ಏಕನಿಷ್ಠೆಯಿಂದಲಿರಿರಾಗಿ ನೀವೇ ಲಿಂಗದ್ರೋಹಿಗಳು. ಪಂಚಾಕ್ಷರಿಯ ನೆನೆಯಿರಾಗಿ ಮಂತ್ರದ್ರೋಹಿಗಳು. ರುದ್ರಾಕ್ಷಿಯ ಧರಿಸರಾದ ಕಾರಣ ನೀವು ಶಿವಲಾಂಛನ ದ್ರೋಹಿಗಳು. ಶಿವಭಕ್ತರಿಗೆರಗದ ಕಾರಣ ನೀವು ಶಿವಭಕ್ತರಿಗೆ ದ್ರೋಹಿಗಳು. ನಿಮ್ಮ ಮುಖವ ನೋಡಲಾಗದು. ಬರಿದೆ ಬ್ರಹ್ಮವನಾಚರಿಸಿ ನಾವು ಬ್ರಹ್ಮರೆಂದೆಂಬಿರಿ. ಬ್ರಹ್ಮವೆಂತಿಪ್ಪುದೆಂದರಿಯಿರಿ. ಬ್ರಹ್ಮಕ್ಕೂ ನಿಮಗೂ ಸಂಬಂಧವೇನೊ ? ಸತ್ಯಂ ಬ್ರಹ್ಮ ಶುಚಿಬ್ರ್ರಹ್ಮ ಇಂದ್ರಿಯನಿಗ್ರಹಃ | ಸರ್ವಜೀವದಯಾಬ್ರಹ್ಮ ಇತೈ ್ಯೀದ್ಬ್ರಹ್ಮ ಲಕ್ಷಣಂ | ಸತ್ಯಂ ನಾಸ್ತಿ ಶುಚಿರ್ನಾಸ್ತಿ ನಾಸ್ತಿ ಚೇಂದ್ರಿಯ ನಿಗ್ರಹಃ | ಸರ್ವಜೀವ ದಯಾ ನಾಸ್ತಿ ಏತಚ್ಚಾಂಡಾಲ ಲಕ್ಷಣಂ || ಬ್ರಹ್ಮಕ್ಕೂ ನಿಮಗೂ ಸಂಬಂಧವೇನೊ ? ಬ್ರಹ್ಮವೆ ನಿಃಕರ್ಮ, ನೀವೇ ಕರ್ಮಿಗಳು. ಮತ್ತೆಂತೊ `ಬ್ರಹ್ಮಂ ಚರೇತಿ ಬ್ರಹ್ಮಣಾಂ' ಎಂದು ಗಳವುತ್ತಿಹಿರಿ. ಗಾಯತ್ರಿಯ ಜಪಿಸಿ ನಾವು ಕುಲಜರೆಂಬಿರಿ. ಆ ಗಾಯತ್ರಿ ಕರ್ಮವಲ್ಲದೆ ಮುಕ್ತಿಗೆ ಕಾರಣವಿಲ್ಲ. ಅಂತು ಗಾಯತ್ರಿಯಿಂದ ನೀವು ಕುಲಜರಲ್ಲ. ವೇದವನೋದಿ ನಾವೇ ಬ್ರಹ್ಮರಾದೆವೆಂಬಿರಿ. ವೇದ ಹೇಳಿದ ಹಾಂಗೇ ನಡೆಯಿರಿ. ಅದೆಂತೆಂದಡೆ : ``ದ್ಯಾವಾಭೂವಿೂ ಜನಯನ್ ದೇವ ಏಕಃ'' ಎಂದೋದಿ ಮರದು, ವಿಷ್ಣು ವನೆ ಭಜಿಸುವಿರಿ. ನೀವೇ ವೇದವಿರುದ್ಧಿಗಳು. ``ವಿಶ್ವತೋ ಮುಖ ವಿಶ್ವತೋ ಚಕ್ಷು ವಿಶ್ವತೋ ಬಾಹು'' ಎಂದೋದಿ ಮತ್ತೆ , ``ಏಕೋ ರುದ್ರೋ ನ ದ್ವಿತೀಯಾಯ ತಸ್ಥೇ'' ಎಂದು ಮರದು, ಬೇರೊಬ್ಬ ದೈವ ಉಂಟೆಂದು ಗಳಹುತ್ತಿದಿರಿ. ನೀವೇ ವೇದದ್ರೋಹಿಗಳು. ``ಏಕಮೇವಾದ್ವಿತಿಯಂ ಬ್ರಹ್ಮ''ವೆಂದೋದಿ, ಕರ್ಮದಲ್ಲಿ ಸಿಕ್ಕಿದೀರಿ. ನೀವೇ ದುಃಕರ್ಮಿಗಳು. ``ಅಯಂ ಮೇ ಹಸ್ತೋ ಭಗವಾನ್, ಅಯಂ ಮೇ ಭಗವತ್ತರಃ |'' ಎಂದೋದಿ, ಅನ್ಯಪೂಜೆಯ ಮಾಡುತಿದೀರಿ. ನೀವೇ ಪತಿತರು. ``ಶಿವೋ ಮೇ ಪಿತಾ'' ಎಂದೋದಿ, ಸನ್ಯಾಸಿಗಳಿಗೆ ಮಕ್ಕಳೆಂದಿರಿ. ನೀವೇ ಶಾಸ್ತ್ರವಿರುದ್ಧಿಗಳು. ಸದ್ಯೋಜಾತದ್ಭವೇದ್ಭೂಮಿರ್ವಾಮದೇವಾದ್ಭವೇಜ್ಜಲಂ | ಅಘೋರಾದ್ವನ್ಹಿರಿತ್ಯುಕ್ತಸ್ತತ್ಪುರುಷಾದ್ವಾಯುರುಚ್ಯತೇ || ಈಶಾನ್ಯಾದ್ಗಗನಾಕಾರಂ ಪಂಚಬ್ರಹ್ಮಮಯಂ ಜಗತ್ | ಎಂದೋದಿ, ಸರ್ವವಿಷ್ಣುಮಯ ಎನ್ನುತ್ತಿಪ್ಪಿರಿ. ನಿಮ್ಮಿಂದ ಬಿಟ್ಟು ಶಿವದ್ರೋಹಿಗಳಾರೊ ? ``ಭಸ್ಮ ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ |'' ಎಂದೋದಿ, ಮರದು ವಿಭೂತಿಯ ನೀಡಲೊಲ್ಲದೆ ಮಟ್ಟಿಯಂ ನೀಡುವಿರಿ. ನಿಮ್ಮಿಂದ ಪತಿತರಿನ್ನಾರೊ ? ``ರುದ್ರಾಕ್ಷಧಾರಣಾತ್ ರುದ್ರಃ'' ಎಂಬುದನೋದಿ ರುದ್ರಾಕ್ಷಿಯಂ ಧರಿಸಲೊಲ್ಲದೆ, ಪದ್ಮಾಕ್ಷಿ ತೊಳಸಿಯ ಮಣಿಯಂ ಕಟ್ಟಿಕೊಂಬಿರಿ. ನಿಮ್ಮಿಂದ ಪಾಪಿಗಳಿನ್ನಾರೊ ? ``ಪಂಚಾಕ್ಷರಸಮಂ ಮಂತ್ರಂ ನಾಸ್ತೀ ತತ್ವಂ ಮಹಾಮುನೇ '' ಎಂಬುದನೋದಿ, ಪಂಚಾಕ್ಷರಿಯ ಜಪಿಸಲೊಲ್ಲದೆ, ಗೋಪಳಾ ಮಂತ್ರವ ನೆನವಿರಿ ಎಂತೊ ? ನಿಮ್ಮ ನುಡಿ ನಿಮಗೆ ವಿರುದ್ಧವಾಗಿರಲು, ನಿಮ್ಮ ಓದು ವೇದ ನಿಮಗೆ ವಿರುದ್ಧವಾಗಿರಲು, ನಿಮ್ಮ ಉತ್ತಮ ಕುಲಜರೆಂದು ವಂದಿಸಿದವರಿಗೆ ಶೂಕರ ಜನ್ಮದಲ್ಲಿ ಬಪ್ಪುದು ತಪ್ಪದು ನೋಡಿರೆ ! ವಿಪ್ರಾಣಾಂ ದರಿಶನೇ ಕಾಲೇ ಪಾಪಂ ಭುಂಜಂತಿ ಪೂಜಕಾಃ | ವಿಪ್ರಾಣಾಂ ವದನೇನೈವ ಕೋಟಿಜನ್ಮನಿ ಶೂಕರಃ || ಇಂತೆಂದುದಾಗಿ, ನಿಮ್ಮೊಡನೆ ಮಾತನಾಡಿದಡೆ ಪಂಚಮಹಾಪಾತಕಃ ನಿಮ್ಮ ಮುಖವ ನೋಡಿದಡೆ ಅಘೋರನರಕ. ಅದೆಂತೆಂದಡೆ : ಒಬ್ಬ ಹಾರುವನ ದಾರಿಯಲ್ಲಿ ಕಂಡದಿರೆ ಇರಿದು ಕೆಡಹಿದಲ್ಲದೆ ಹೋಗಬಾರದೆಂದು ನಿಮ್ಮ ವಾಕ್ಯವೆಂಬ ನೇಣಿಂದ ಹೆಡಗುಡಿಯ ಕಟ್ಟಿಸಿಕೊಳುತಿಪ್ಪಿರಿ. ಮತ್ತು ನಿಮ್ಮ ದುಶ್ಯರೀರತ್ರಯವನೆಣಿಸುವಡೆ ``ಅಣೋರಣೀಯಾನ್ ಮಹತೋ ಮಹೀಯಾನ್'' ಎಂಬುದ ನೀವೇ ಓದಿ, ಪ್ರಾಣಿಯಂ ಕೊಂದು ಯಾಗವನ್ನಿಕ್ಕಿ, ದೇವರ್ಕಳುಗಳಿಗೆ ಹೋಮದ ಹೊಗೆಯಂ ತೋರಿ, ಕೊಬ್ಬು ಬೆಳೆದ ಸವಿಯುಳ್ಳ ಖಂಡವನೆ ತಿಂದು, ಸೋಮಪಾನವೆಂಬ ಸುರೆಯನೆ ಕುಡಿದು, ನೊಸಲಕಣ್ಣ ತೋರುವಂತಹ ಶಿವಭಕ್ತನಾದಡೂ ನಿಂದಿಸಿ ನುಡಿವುತಿಪ್ಪಿರಿ. ನಿಮ್ಮೊಡನೆ ನುಡಿವಡೆ ಗುರುಲಿಂಗವಿಲ್ಲದವರು ನುಡಿವರಲ್ಲದೆ, ಗುರುಲಿಂಗವುಳ್ಳವರು ನುಡಿವರೆ ? ಇದು ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಲು, ನೀವೇ ಪಂಚಮಹಾಪಾತಕರು. ಶಿವಭಕ್ತಿಯರಿಯದ ನರರು ಪೀನಕುರಿಗಳು. ನಿಮ್ಮಿಂದ ಏಳುಬೆಲೆ ಹೊರಗಾದ ಹೊಲೆಯನೆ ಉತ್ತಮ ಕುಲಜನೆಂದು ಮುಂಡಿಗೆಯ ಹಾಕಿದೆನು, ಎತ್ತಿರೊ ಸತ್ಯವುಳ್ಳಡೆ ! ಅಲ್ಲದಡೆ ನಿಮ್ಮ ಬಾಯಬಾಲವ ಮುಚ್ಚಿಕೊಳ್ಳಿರೆ. ಎಮ್ಮ ಶಿವಭಕ್ತರೇ ಅದ್ಥಿಕರು, ಎಮ್ಮ ಶಿವಭಕ್ತರೇ ಕುಲಜರು, ಎಮ್ಮ ಶಿವಭಕ್ತರೇ ಸದಾಚಾರಿಗಳು, ಎಮ್ಮ ಶಿವಭಕ್ತರೇ ಪಾಪರಹಿತರು, ಎಮ್ಮ ಶಿವಭಕ್ತರೇ ಸರ್ವಜೀವ ದಯಾಪಾರಿಗಳು, ಎಮ್ಮ ಶಿವಭಕ್ತರೇ ಸದ್ಯೋನ್ಮುಕ್ತರಯ್ಯಾ, ಘನಗುರು ಶಿವಲಿಂಗ ರಾಮನಾಥ.
--------------
ವೀರಶಂಕರದಾಸಯ್ಯ
`ಅಣೋರಣೀಯಾನ್ ಮಹತೋ ಮಹೀಯಾನ್` ಎಂದು ಶ್ರುತಿವಿಡಿದು ಅಣು ರೇಣು ತೃಣಕಾಷ್ಠದೊಳಗೆ ಶಿವನು ಕೂಡೆ ಜಗಭರಿತನೆಂಬ ಪಾತಕರ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ: ಜನ್ನಕ್ಕೆ ತಂದ ಕನ್ನೆಯಾಡು ಶ್ರುತಿಯಿಂದ ಹೊರಗು. ಸರ್ವವೂ ಶಿವಮಯವೆಂಬ ಪಾತಕರ ನುಡಿಗಿನ್ನೆಂತೊ ? ಅಂತ್ಯಜ-ಅಗ್ರಜ, ಮೂರ್ಖ-ಪಂಡಿತರೆಂಬ ಭೇದಕ್ಕಿನ್ನೆಂತೊ ? ಜಗದೊಳಗೆ ಶಿವ ಶಿವನೊಳಗೆ ಜಗವೆಂಬ ಭ್ರಮಿತರ ನುಡಿಗಿನ್ನೆಂತೋ `ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ ಅಗ್ನಿರಿತಿ ಭಸ್ಮ ವಾಯುರಿತಿ ಭಸ್ಮ ವ್ಯೋಮೇತಿ ಭಸ್ಮ, ಭಸ್ಮೇತಿ ಭಸ್ಮ ಸರ್ವಗ್‍ಂ ಹವಾ ಇದಂ ಭಸ್ಮ ಎಂದುದಾಗಿ ಜಗದೊ?ಗೆ ಶಿವನಿಲ್ಲ, ಶಿವನೊಳಗೆ ಜಗವಿಲ್ಲ, ಶಿವ ಜಗವಾದ ಪರಿ ಇನ್ನೆಂತೊ ? ಅದೆಂತೆಂದಡೆ : ಯಂತ್ರಧಾರೀ ಮಹಾದೇವೋ ಯಂತ್ರಪಾಣಸ್ಸ ಏವ ಹೀ ಯಂತ್ರಕರ್ಮ ಚ ಕರ್ತಾ ಯಂತ್ರವಾಹಾಯ ವೈ ನಮಃ ಎಂದುದಾಗಿ; ಸಕಲಬ್ರಹ್ಮಾಂಡಗಳೆಂಬ ಯಂತ್ರಗಳ ವಾಹಕ ನಮ್ಮ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಕೆಂಡ ಕೆಟ್ಟು ಕೆಂಡವಾಗಬಲ್ಲುದಲ್ಲದೆ, ಬೂದಿಯಾಗಿ ಬೂದಿ ಹೊತ್ತಬಲ್ಲುದೆ ? ಸೂತಕ ಸೂತಕಕ್ಕೊಳಗಪ್ಪುದಲ್ಲದೆ, ಭಸ್ಮ ಮೇಲೆ, ಕೆಂಡ ಒಳಗಡಗಿದುದುಂಟೆ ? ಅರಿದ ಅರಿವು ಮರವಿಂಗಪ್ಪುದೆ ? ಅರಿವೆ ಶೂನ್ಯವಾಗಿ ಸುಖದುಃಖಕ್ಕೆ ಹೊರಗಾಗಬೇಕು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಅಯ್ದುದೇ ಬ್ರಹ್ಮನ ಕಪಾಲ ಕರದಲ್ಲಿ, ಅಯ್ದುದೇ ವಿಷ್ಣುವಿನ ನಯನ ಪಾದದಲ್ಲಿ, ಅಯ್ದುದೇ ಕಾಮನ ಸುಟ್ಟ ಭಸ್ಮ ಮೈಯ ಮೇಲೆ, ಮುಖ ಮೂದಲೆಯೇಕಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಕರಿಭೂಮಿಯ ಬಿದಿರ ಬೊಂಬವ ಕಡಿದು ಬಿಳಿಭೂಮಿಯ ಬಿದಿರ ಅಗ್ನಿಯಿಂದ ದಹಿಸಿ ಭಸ್ಮ ಮಾಡಿ ಧರಿಸಿ ಕಾಯಕದಲ್ಲಿರ್ದು ಕಾಯಕಕ್ಕೆ ಸಿಕ್ಕದೆ ಮೇದಾರ ಕೇತಯ್ಯನೊಳಗಾದರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಉದಕದಿಂದ ಅಭಿಷೇಕಂಗೈವಡೆ, ಒದವಿದವು ನೋಡಾ ನಿನ್ನುತ್ತಮಾಂಗದಲ್ಲಿ ಅರುವತ್ತೆಂಟುಕೋಟಿ ನದಿಗಳು. ಪುಷ್ಪವ ಧರಿಸುವಡೆ, ಚಂದ್ರಕಲಾ ಪ್ರಕಾಶವುಂಟು ನೋಡಾ ಜಟಾಗ್ರದಲ್ಲಿ. ನೀರಾಜನವೆತ್ತುವಡೆ ಸೂರ್ಯಚಂದ್ರಾಗ್ನಿನೇತ್ರ ನೋಡಾ. ಸ್ತೋತ್ರವ ಮಾಡುವಡೆ, ವೇದಂಗಳು ಹೊಗಳಿ ಹೊಗಳಿ ಮೂಗುವಟ್ಟವು ನೋಡಾ. ನಿನ್ನ ಮುಂಭಾಗದಲ್ಲಿ ನಾಟ್ಯವನಾಡುವಡೆ, ಅದುರಿದವು ನೋಡಾ ಅಜಾಂಡಂಗಳು ನಿನ್ನ ಪಾದಸ್ಪರ್ಶನಂದ. ಚಾಮರವ ಬೀಸುವಡೆ, ನೋಡಾ ಹನ್ನೊಂದು ಕೋಟಿ ರುದ್ರಕನ್ನಿಕೆಯರ ಕೈತಾಳಧ್ವನಿಯು. ಚಂದನವ ಧರಿಸುವಡೆ, ನೋಡಾ ಮಲಯಾಚಲನಿವಾಸಿ. ವಸ್ತ್ರವ ಧರಿಸುವಡೆ, ನೋಡಾ ವ್ಯಾಘ್ರಾಸುರ ಗಜಾಸುರ ಚರ್ಮವಾಸಿ. ಭಸ್ಮವ ಧರಿಸುವಡೆ, ನೋಡಾ ಕಾಮನಸುಟ್ಟ ಭಸ್ಮ ಅಂಗದಲ್ಲಿ. ಅಕ್ಷತೆಯ ಧರಿಸುವಡೆ, ನೋಡಾ ಅಜಾಂಡಂಗಳ ದಾಟಿದ ಮಸ್ತಕ. ಅಂತಪ್ಪ ವಿಗ್ರಹವ ಪೂಜಿಸುವಡೆನ್ನಳವೆ? ಶರಣನ ಮುಖದಿಂದ ಬಂದ ಪದಾರ್ಥವ ಕೈಕೊಂಡು ಪೂಜಾ ಪ್ರೀತನಾಗಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಕಾರದಾದಿಯನರಿ, ಕ್ಷಕಾರದಂತ್ಯವ ತಿಳಿ. ಅಕಾರ ಉಕಾರ ಮಕಾರದೊಳಗಣ ಓಂಕಾಪ್ರಭೆಯ ತಿಳಿ. ವೇದಾದಿ ಪಂಚಕದಾದಿಯನರಿ. ಐಶ್ವರ್ಯ ಮೊದಲಾದೈದು ನಾಮವನುಳ್ಳ ವಿಭೂತಿ ಭಸಿತ ಭಸ್ಮ ಕ್ಷಾರ ರಕ್ಷೆ ಎಂಬೈದು ನಿನ್ನಭಿಮುಖದಿಂದ ಜನನವೆ ಹೇಳು ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಶ್ರುತಿವಿಧಿಸಿದ ಶ್ರೀವಿಭೂತಿಯ ಪರಂಜ್ಯೋತಿಯೆಂದರಿದು ಭವಭೀತಿ ಮೃತ್ಯುಭಯಕ್ಕಂಜಿ ಜಮದಗ್ನಿ ಅಗಸ್ತ್ಯ ಕಸ್ಯಪ ಮೊದಲಾದ ಎಲ್ಲಾ ಋಷಿಗಳು ಧರಿಸಿ ಕೊರಜರಾದರು ನೋಡಾ. ಶ್ರೀವಿಭೂತಿಯ ಪರಂಜ್ಯೋತಿಯೆಂದರಿದು ಎಲ್ಲಾ ದೇವರ್ಕಳು ಎಲ್ಲಾ ಶ್ರುತಿ ಸ್ಮøತಿಗಳು ಧರಿಸಿದವು ನೋಡಾ. ಶ್ರೀವಿಭೂತಿಯೆ ಪರಂಜ್ಯೋತಿಯೆಂದರಿದು ಗಾಯತ್ರಿ ಬ್ರಹ್ಮ ವಿಷ್ಣು ಇಂದ್ರಾದಿ ದೇವರ್ಕಳು ಧರಿಸಿದರು ನೋಡಾ. ಶ್ರೀವಿಭೂತಿಯ ಪರಂಜ್ಯೋತಿ ನಿರುತವಿದು ನಂಬಿ ಧರಿಸಿ ಬದುಕು ಮನುಜಾ. ಶ್ರೀವಿಭೂತಿಯೆ ಪರಂಜ್ಯೋತಿಯೆಂಬುದು. ಇದಕ್ಕೆ ಜಾಬಾಲೋಪನಿಷತ್ : ``ಓಂ ಸ ಏಷ ಭಸ್ಮ ಜ್ಯೋತಿ ಸ್ಸಏಷ ಭಸ್ಮ ಜ್ಯೋತಿರಿತ'' ಇಂತೆಂದುದು ಶ್ರುತಿ. ಇದಕ್ಕೆ ಮಾನವಪುರಾಣೇ : ``ಭಸ್ಮ ಜ್ಯೋತಿರ್ಭವತ್ಯೇವ ಶಿವಾಖ್ಯಂ ನ ಹಿ ಸಂಶಯಃ | ಜಾಬಾಲೋಪನಿಷತ್ಸರ್ವಂ ಪ್ರಾಹೇದಂ ಪರಯಾ ಮುದಾ ||'' ಇಂತೆಂದುದಾಗಿ, ಇನ್ನು ವಿಭೂತಿ ಅಭಿಮಂತ್ರ ವಿಭೂತಿಧಾರಾ ಎಂಬುದಕ್ಕೆ ಕಾತ್ಯಾಯನ ಗೃಹ್ಯೇ, ಕಾತ್ಯಾಯನ ಸ್ಮೃತಿ, ಬೋಧಾಯನ ಸ್ಮೃತಿ, ಅಭಿಮಂತ್ರ ಶ್ರುತಿ : ``ಮಾನಸ್ತೋಕೇ ತನಯೇ ಮಾನ ಆಯುಷಿ ಮಾನೋ ಗೋಷು ಮಾನೋ ಅಶ್ವೇಷು ರೀರಿಷಃ | ವೀರಾನ್ಮಾನೋ ರುದ್ರ ಭಾಮಿತೋ ವಧೀರ್ಹವಿಷ್ಮಂತೋ ಶಮಿತ್ವಾ ಹವಾಮಹೇ ||'' ಇಂತೆಂದುದು ಶ್ರುತಿ. ಇನ್ನು ವಿಭೂತಿಧಾರಾ ಎಂಬುದಕ್ಕೆ ಶ್ರುತಿ: ``ಓಂ, ಕುಕ್ಷರುಷಿ ರುದ್ರೋ ದೇವತಾ ಜಗತೀ ಛಂದಃ | ಓಂ, ತ್ರಿಯಾಯುಷಂ ಜಮದಗ್ನೇಃ ಕಶ್ಯಪಸ್ಯ ತ್ರಿಯಾಯುಷಂ | ಅಗಸ್ತ್ಯಸ್ಯ ತ್ರಿಯಾಯುಷಂ ತನ್ಮೇ ಅಸ್ತು ತ್ರಿಯಾಯುಷಂ | ಯದ್ದೇವಾನಾಂ ತ್ರಿಯಾಯುಷಂ ಶತಾಯುಷಂ ಕುರು ತ್ವಾನಿ || ಲಲಾಟ ಭುಜದ್ವಯಂ ನಾಭೇರುತ್ವಾರುಷಿ | ಬ್ರಹ್ಮಣ ರುಷಿ ವೈದಿಕಂ ಸದಾ || '' ಇಂತೆಂದುದು ಶ್ರುತಿ. ಇದಕ್ಕೆ ಬೋಧಾಯನ ಶ್ರುತಿ : ``ಮಾನಸ್ತೋಕೇತ್ಯಾದಿ ಮಂತ್ರೇಣ ಮಂತ್ರಿತಂ ಭಸ್ಮ ಧಾರಯೇತ್ | ಊಧ್ರ್ವಪುಂಡ್ರಂ ಭವೇತ್ ಸಾಮ ಮಧ್ಯಪುಂಡ್ರಂ ಯಜೂಂಷಿ ಚ | ಅಧಃ ಪುಂಡ್ರಮೃಚಃ ಸಾಕ್ಷಾತ್ ತಸ್ಮಾತ್ ಪುಂಡ್ರಂ ತ್ರಿಯಾಯುಷಂ ||'' ಇದಕ್ಕೆ ಲೈಂಗ್ಯ ಪುರಾಣೇ : ``ಅಕಾರೋನಾಮಿಕಂ ಪ್ರೋಕ್ತಂ ಉಕಾರೋ ಮಧ್ಯಮಾಂಗುಲಿಃ | ಮಕಾರೋ ತಜ್ರ್ಜನಿಸ್ಥಾನಂ ತ್ರಿಭಿಃ ಕುರ್ಯಾತ್ ತ್ರಿಪುಂಡ್ರಕಂ ||'' ಇಂತೆಂದುದಾಗಿ. ಇದಕ್ಕೆ ಕಾಲಾಗ್ನಿರುದ್ರೋಪನಿಷತ್ : ``ಹರಃ ಓಂ, ಅಥ ಕಾಲಾಗ್ನಿರುದ್ರಂ ಭಗವಂತಂ ಸನತ್ಕುಮಾರಃ ಅಪಪ್ರಚ್ಛಧೀಹಿ ಭಗವನ್ ತ್ರಿಪುಂಡ್ರವಿಧಿಂ ಸತತ್ವಂ ಕಿಂ ದ್ರವ್ಯಂ ಕ್ರಿಯತ್ ಸ್ಥಾನಂ ಕತಿ ಪ್ರಮಾಣಂ ಕಾ ರೇಖಾ ಕೇ ಮಂತ್ರಾಃ ಕಾ ಶಕ್ತಿಃ ಕಿಂ ದೈವತಂ ಕಃ ಕರ್ತಾ ಕಿಂ ಫಲಮಿತಿ ಚ || ತಂ ಹ್ಯೋವಾಚ ಭಗವಾನ್ ಕಾಲಾಗ್ನಿ ರುದ್ರಃ ಯದ್ದ್ರವ್ಯಂ ತದಾಗ್ನೇಯಂ ಭಸ್ಮ, ಸದ್ಯೋಜಾತಾದಿ ಪಂಚಬ್ರಹ್ಮ ಮಂತ್ರೈಃ ಪರಿಗೃಹ್ಯ ಅಗ್ನಿರಿತಿ ಭಸ್ಮೇತ್ಯನೇನ ಚಾಭಿಮಂತ್ರ್ಯ ಮಾನಸ್ತೋಕ ಇತಿ ಸಮುದ್ದøತ್ಯ, ಮಾನೊ ಮಹಾಂತಮಿತಿ ಜಲೇನ ಸಂಸೃಜ್ಯ, ತ್ರಿಯಾಯುಷಮಿತಿ ಶಿರೋ ಲಲಾಟವಕ್ಷ ಸ್ಕಂಧೇಷು ತ್ರಿಯಾಯುಷೈಸ್ತ್ರ್ಯಂಬಕೈಸ್ತ್ರಿಶಕ್ತಿಭಿಸ್ತಿರ್ಯಕ್ ತಿಸ್ರೋ ರೇಖಾಃ ಪ್ರಕುರ್ವೀತ ವ್ರತಮೇತಚ್ಛಾಂಭವಂ ಸರ್ವೇಷು ದೇವೇಷು ವೇದವೇದಾದಿಭಿರುಕ್ತಂ ಭವತಿ ತಸ್ಮಾತ್ತತ್ಸಮಾಚರೇನ್ಮುಮುಕ್ಷುರ್ನಪುನರ್ಭವಾಯ || ಅಥ ಸನತ್ಕುಮಾರಃ ಪಪ್ರಚ್ಛ ಪ್ರಮಾಣಮಸ್ಯ ತ್ರಿಪುಂಡ್ರಧಾರಣಸ್ಯ ತ್ರಿಧಾರೇಖಾಭವತ್ಯಾಲಲಾಟಾದಾಚಕ್ಷುಷೋರಾಮೂಧ್ರ್ನೋರಾಭ್ರುವೋರ್ಮ- ಧ್ಯತಶ್ಚ ಪ್ರಥಮಾ ರೇಖಾ ಸಾ ಗಾರ್ಹಪತ್ಯಶ್ಚಾಕಾರೋ ರಜೋ ಭೂರ್ಲೋಕಃ ಸ್ವಾತ್ಮಾ ಕ್ರಿಯಾಶಕ್ತಿಃ ಋಗ್ವೇದಃ ಪ್ರಾತಃ ಸವನಂ ಮಹೇಶ್ವರೋ ದೇವತೇತಿ || ಯಾsಸ್ಯ ದ್ವಿತೀಯಾ ರೇಖಾ ಸಾ ದಕ್ಷಿಣಾಗ್ನಿರುಕಾರಃ ಸ್ವತ್ವ ಮಂತ್ರರಿಕ್ಷಮಂತರಾತ್ಮಾ ಚೇಚ್ಛಾಶಕ್ತಿಃ ಯಜುರ್ವೇದೋ ಮಾಧ್ಯಂ ದಿನಂ ಸವನಂ ಸದಾಶಿವೋ ದೇವತೇತಿ || ಯಾsಸ್ಯ ತೃತೀಯಾ ರೇಖಾ ಸಾsಹವನೀಯೋ ಮಕಾರಸ್ತಮೋ - ದ್ಯೌರ್ಲೋಕಃ ಪರಮಾತ್ಮಾ ಜ್ಞಾನಶಕ್ತಿಃ ಸಾಮವೇದಸ್ತøತೀಯಂ ಸವನಂ ಮಹಾದೇವೋ ದೇವತೇತಿ || ಏವಂ ತ್ರಿಪುಂಡ್ರವಿಧಿಂ ಭಸ್ಮನಾ ಕರೋತಿ ಯೋ ವಿದ್ವಾನ್ ಬ್ರಹ್ಮಚಾರೀ ಗೃಹೀ ವಾನಪ್ರಸ್ಥೋ ಯತಿರ್ವಾ ಸಃ ಸಮಸ್ತ ಮಹಾಪಾತಕೋ - ಪಪಾತಕೇಭ್ಯಃ ಪೂತೋ ಭವತಿ, ಸ ಸರ್ವೇಷು ತೀರ್ಥೇಷು ಸ್ನಾತೋ ಭವತಿ, ಸ ಸರ್ವಾನ್ ಜ್ಞಾತೋ ಭವತಿ, ಸ ಸರ್ವಾನ್ ವೇದಾನಧೀತೋ ಭವತಿ, ಸ ಸತತಂ ಸಕಲರುದ್ರಮಂತ್ರಜಾಪೀ ಭವತಿ, ಸ ಸಕಲಭೋಗಾನ್‍ಭುಂಕ್ತೆ ದೇಹಂತ್ಯಕ್ತ್ವ ಶಿವಸಾಯುಜ್ಯಮೇತಿ ನ ಸ ಪುನರಾವರ್ತತೇನ ಸ ಪುನರಾವರ್ತತ ಇತ್ಯಾಹ ಭಗವಾನ್ ಕಾಲಾಗ್ನಿರುದ್ರಃ ||'' ಇಂತೆಂದುದಾಗಿ, ಇದಕ್ಕೆ ಭೀಮತಂತ್ರಾಗಮೇ : ``ಸರ್ವತೀರ್ಥೇಷು ಯತ್‍ಪುಣ್ಯಂ ಸರ್ವಯಜ್ಞೇಷು ಯತ್‍ಫಲಂ| ತತ್‍ಫಲಂ ಕೋಟಿಗುಣಿತಂ ಭಸ್ಮಸ್ನಾನಾನ್ನಸಂಶಯಃ||'' ಇಂತೆಂದುದಾಗಿ, ಇದಕ್ಕೆ ಭವಿಷ್ಯೋತ್ತರಪುರಾಣೇ : ``ಶಿವಾಗ್ನಿಕಾರ್ಯಂ ಯಃ ಕೃತ್ವಾ ಕುರ್ಯಾತ್ರಿಯಾಯುಷಂ | ಆತ್ಮವಿತ್ ವಿಶುದ್ಧ ಃ ಸರ್ವಪಾಪೈಶ್ಚ ಸಿತೇನ ಭಸ್ಮನಾ || '' ಇಂತೆಂದುದಾಗಿ, ಇದಕ್ಕೆ ಪರಾಶರಪುರಾಣೇ : ``ಕ್ರಿಯಾಯುಷ್ಯಾಣಿ ಕುರುತೇ ಲಲಾಟೇಚ ಭುಜದ್ವಯೇ | ನಾಶಿಕಾಂತೇ ಚ ಧೃತ್ವಾರ್ಷೇ | '' (?) ಇದಕ್ಕೆ ಬ್ರಹ್ಮಪುರಾಣೇ : ``ಶ್ರಾದ್ಧೇ ಯಜ್ಞೇ ಜಪೇ ಹೋಮೇ ವೈಶ್ವದೇವೇ ಸುರಾರ್ಚನೇ | ಧೃತತ್ರಿಪುಂಡ್ರಪೂತಾತ್ಮಾ ಮೃತ್ಯುಂ ಜಯತಿ ಮಾನವ ಃ || '' ಇಂತೆಂದುದಾಗಿ, ಇದಕ್ಕೆ ಆದಿತ್ಯಪುರಾಣೇ : ``ಸರ್ವಾಶ್ರಮಾಣಾಂ ವರ್ಣಾನಾಂ ಭಸ್ಮ ರುದ್ರಾಕ್ಷ ಧಾರಣಂ | ಕರ್ತವ್ಯಂ ಮಂತ್ರತಶ್ಚೋಕ್ತಂ ದ್ವಿಜಾನಾಂ ನಾತ್ರ ಸಂಶಯಃ || '' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ ಃ ``ವಿಪ್ರಾದೀನಾಂಚ ಸರ್ವೇಷಾಂ ಲಲಾಟಂ ಭಸ್ಮಶೂನ್ಯಕಂ | ಭಿಕ್ಷಾ ಚ ಜಪಹೋಮಂ ಚಾರ್ಪಣಂ ನಿಷ್ಫಲಂ ಭವೇತ್ || '' ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ಸಿತೇನ ಭಸ್ಮನಾ ಕಾರ್ಯಂ ತ್ರಿಸಂಧ್ಯಾಂ ತ್ರಿಪುಂಡ್ರಕಂ | ಸರ್ವಪಾಪವಿನಿರ್ಮುಕ ್ತಃ ಶಿವಸಾಯುಜ್ಯಮಾಪ್ನುಯಾತ್ || '' ಇಂತೆಂದುದಾಗಿ, ಇದಕ್ಕೆ ಲೋಕಾಕ್ಷಿ ಸ್ಮೃತಿ : ``ಮಧ್ಯಮಾನಾಮಿಕಾಂಗುಷೆ*ೀ ತ್ರಿಪುಂಡ್ರಂ ಭಸ್ಮನಾ ಧೃತಂ | ತತ್ತ್ರಿಪುಂಡ್ರಂ ಭವೇತ್ಪುಣ್ಯಂ ಮಹಾಪಾತಕನಾಶಕಂ ''|| ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ನೃಪಾಣಾವಿೂೀಶ್ವರಾಣಾಂ ಚ ಭಸ್ಮೀ ತ್ರೇಣ ಚ ಚಂದನಂ | ತ್ರಿಪುಂಡ್ರಂ ವಿಧಿವತ್ಕುರ್ಯಾತ್ ಸುಗಂಧೇನಾಪಿ ವಾಗುಹಾಂ || ಭಸ್ಮನಾಯೈ ತ್ರಿಸಂಧ್ಯಾಂ ಚ ಗೃಹಸ್ಥೋ ಜಲಸಂಯುತಂ | ಸರ್ವಕಾಲೇ ಭವೇತ್ ಸ್ತ್ರೀಣಾಂ ಯತಿನಾಂ ಜಲವರ್ಜಿತಂ || ವಾನಪ್ರಸ್ಥೇಷು ಕಾಂಸ್ಯಾನಾಂ ದೀಕ್ಷಾಹೀನಂ ಮೃಣಂ ತಥಾ | ಮಧ್ಯಾಹ್ನೇ ಪ್ರಾಕ್‍ಜಲಯುಕ್ತಂ ಪರಾಕ್ ಜಲವಿವರ್ಜಿತಂ ||'' ಇಂತೆಂದುದಾಗಿ, ಇದಕ್ಕೆ ಕ್ರಿಯಾಸಾರೇ : ``ಶುದ್ಧ ತಾ ಜಲೇನೈೀವ ಭಸ್ಮಸ್ಯಾತ್ ತ್ರಿಪುಂಡ್ರಕಂ | ಯೋ ಧಾರಯೇತ್ ಪರಬ್ರಹ್ಮ ಸಂಪ್ರಾಪ್ನೋತಿ ನ ಸಂಶಯಃ|| ಮಧ್ಯಮಾನಾಮಿಕಾಂಗುಷೆ* ೈರನುಲೋಮವಿಲೋಮತಃ ||'' ಧಾರಯದ್ಯಗ್ನಿ ತ್ರಿಪುಂಡ್ರಾಂತಂ ಸ ರುದ್ರೋ ನಾತ್ರ ಸಂಶಯಃ ||'' ಇಂತೆಂದುಗಾಗಿ, ಇದಕ್ಕೆ ಕ್ರಿಯಾಸಾರೇ : ``ಮಧ್ಯಾಂಗುಲಿ ತ್ರಯೇಣೈವ ಸ್ವದಕ್ಷಿಣ ಕರಸ್ಯ ತು | ಷಡಂಗುಲಾಯತಂ ಮಾನಮಪಿವಾsಲಿಕಮಾನನಂ || ಷಡಂಗುಲಪ್ರಮಾಣೇನ ಬ್ರಾಹ್ಮಣಾನಾಂ ತ್ರಿಪುಂಡ್ರಕಂ | ನೃಪಾನಾಂ ಚತುರಂಗುಲ್ಯಂ ವೈಶ್ಯಾನಾಂ ಚ ದ್ವಿರಂಗುಲಂ | ಶೂದ್ರಾಣಾಂ ಚ ಸರ್ವೇಷಾಂ ಏಕಾಂಗುಲಾ ತ್ರಿಪುಂಡ್ರಕಂ ||'' ಇಂತೆಂದುಗಾಗಿ, ಇದಕ್ಕೆ ಭೀಮಸಂಹಿತಾಯಾಂ : ``ಮೂಧ್ರ್ನಾ ಲಲಾಟಕಂ ದ್ಯೌಶ್ಚ ಶ್ರೋತ್ರೇ ಬಾಹೂ ತಥೈೀವ ಚ | ಹೃದಯಂ ನಾಭಿಪೃಷೌ* ಚ ಹಸ್ತೋ ವೈ ಸಂಧಯಃ ಕ್ರಮಾತ್ || ಮೂಧ್ರ್ನಿಃ ಸ್ಯಾತ್ ಬ್ರಹ್ಮಣ ಪ್ರೀತಿಃ ಲಲಾಟೇ ಚ ಸರಸ್ವತೀ | ಕಂಠೋ ಲಕ್ಷ್ಮ್ಯಾ ಭವೇತ್ ಪ್ರೀತಿಃ ಸ್ಕಂದೇ ಪೀಣಾತಿ ಪಾರ್ವತಿ || ಇಂದ್ರ ಪ್ರೀತಿ ಕರಂ ಬಾಹೋ ಹೃದಯಂ ಚ ಶರಪ್ರಿಯಂ | ಅನೇನ ವಿಧಿನಾ ಚೈವ ವಿಭೂತಿಂ ಧಾರಯೇತ್ ಸುಧೀಃ ||'' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ತ್ರಿಪುಂಡ್ರಂ ಬ್ರಹ್ಮಣೋ ವಿದ್ವಾನ್ ಮನಸಾsಪಿ ನ ಲಂಘಯೇತ್ | ಶ್ರುತ್ವಾ ವಿಧೀಯತೇ ಯಸ್ಮಾತ್ ತತ್ಯಾನಿ ಪತಿತೋ ಭವೇತ್ ||'' ಇಂತೆಂದುದಾಗಿ, ಇದಕ್ಕೆ ಮತ್ಸ್ಯಪುರಾಣೇ : ``ನ ಚ ಶೌಚಂ ತಪೋ ಯಜ್ಞಂ ತೀರ್ಥಂ ದೇವಾಗ್ನಿಪೂಜನಂ | ಅಶ್ವಮೇಧಮಿದಂ ವ್ಯರ್ಥಂ ತ್ರಿಪುಂಡ್ರೋ ಯೋ ನ ಧಾರಯೇತ್ ||'' ಇಂತೆಂದುದಾಗಿ, ಇದಕ್ಕೆ ಬ್ರಹ್ಮಾಂಡಪುರಾಣೇ : ``ವಿಪ್ರಾಣಾಂ ವೇದವಿದುಷಾಂ ವೇದಾಂತಜ್ಞೇನ ವೇದಿನಾಂ | ಸಿತೇನ ಭಸ್ಮನಾ ಕಾರ್ಯಂ ತ್ರಿಪುಂಡ್ರಮಿತಿ ಪದ್ಮಭೂಃ ||'' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಸರ್ವೇ ತಪಸ್ವಿನಃ ಪ್ರೋಕ್ತಾಃ ಸರ್ವೇ ಯಜ್ಞೇಷು ಭಾಗಿನಃ | ರುದ್ರಭಕ್ತಾ ಸ್ಮøತಾಸ್ಸರ್ವೇ ತ್ರಿಪುಂಡ್ರಾಂಕಿತಮಸ್ತಕಾಃ ||'' ಇಂತೆಂದುದಾಗಿ, ಇದಕ್ಕೆ ಕ್ರಿಯಾಸಾರೇ : ``ಶಿರೋ ಲಲಾಟೇ ಶ್ರವಣೋದ್ವಯಾಗ್ನಿರ್ವಾಭುಜದ್ವಯಂ | ವಕ್ಷೋ ನಾಭಿಃ ಪೃಷ*ಭಾಗೇ | ಕಕುದಿತ್ಯೇಕದೋದಶ || '' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಮೂಧ್ನೇ ಲಾಲಟೇ ಕರ್ಣೇ ಚ ಚಕ್ಷುಷೇ ಮಸ್ತಕಸ್ತಥಾ | ಅನ್ಯ ಬಾಹು ಭುಜದ್ವಂದ್ವಂ ಸ್ಥಾನಾವಪ್ಯುದರಂ ತಥಾ || ಮಣಿಬಂಧೇಷು ಧೃತ್ವಾ ಪಾಶ್ರ್ವೇ ನಾಭಿಮೇಢ್ರಂ ಚ ಪೃಷ್ಟಕಂ | ಊರೂ ಚ ಚಾಮಕಾಶ್ಚ ೈವ ಸಂಷ್ಟಪಿ ಯಥಾಕ್ರಮಂ || ವಿಧಿವತ್‍ಭಸ್ಮಸ್ನಾನಂ ಧಾರಣಂ ಮೋಕ್ಷಕಾರಣಂ || '' ಇಂತೆಂದುದಾಗಿ, ಇದಕ್ಕೆ ಮಹಾಲಿಂಗಪುರಾಣೇ : ``ಶಿರೋ ಫಾಲಃ ಕರ್ಣಕಂ ತೌಚ ಬಾಹೂ ಚ ಮಣಿಬಂಧಕೇ | ಹೃದಯಂ ಚ ಪರಂ ಚೈವ ನಾಭಿ ಭುಜದ್ವಯಂ ತಥಾ || ಓಷಾ*ವಪಿ ಚ ವಿಜ್ಞೇಯೋ ಷೋಡಶಃ ಸಂಧಯಃ ಸ್ಮøತಾಃ || '' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಲಲಾಟಾಂಘ್ರಿವಾಂ ಭುಜಾತ್ ಹೃದಯಂ ನಾಭಿರೇವ ಚ | ಅಪರೇ ಸಂಧಯೋ ಜ್ಞೇಯಾ ಅಷ್ಟಸ್ಥಾನಂ ಚ ಭೂಷಣಂ || ಭಸ್ಮಸ್ನಾನಂ ನರೋ ತೀರ್ಥಂ ಗಂಗಾಸ್ನಾನಂ ದಿನೇ ದಿನೇ | ಭಸ್ಮರೂಪಂ ಶಿವಂ ಸಾಕ್ಷಾದ್ಭಸ್ಮ ತ್ರೈಲೋಕ್ಯಸಾಧನಂ || '' ಇಂತೆಂದುದಾಗಿ, ಇದಕ್ಕೆ ಯಜುರ್ವೇದ : ``ಓಂ ಭಾಗದ್ವಯೇವಾಯೇವಂ ಪ್ರಣಯೇತಿ ಬ್ರಾಹ್ಮಣಃ | ಆ ಋಷಯಃ ಉದ್ಧರೇವ ಬ್ರಾಹ್ಮಣೋ ವೈ ಸರ್ವದೇವತಾಃ | ಸರ್ವಾದಿ ದೇವೈಃ ಆನಂದೇವತಾಭಿರುದ್ಧತಿ || '' ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ : ``ಜಲಸ್ನಾನಂ ತಪಃ ಪುಣ್ಯಂ ಮಂತ್ರಸ್ನಾನಂ ಕುಲಕ್ಷಯಃ| ವಿಭೂತಿರೇಣುಮಾತ್ರೇಣ ತತ್ಫಲಂ ಶ್ರುಣು ಪಾರ್ವತಿ || '' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಶ್ರೀಮತ್ ತ್ರಿಪುಂಡ್ರಮಹಾತ್ಮ್ಯಂ ಯಃ ಪಠೇತ್ ಸತತಂ ನರಃ | ಈಹೇಷ್ಟಾನ್ ಸಕಲಾನ್ ಪ್ರಾಪ್ಯ ಗಚ್ಛಂತಿ ಪರಮಂ ಪದಂ ||'' ಇಂತೆಂದುದಾಗಿ, ಇದನರಿದು ಶ್ರೀ ವಿಭೂತಿಯ ಧರಿಸದ ಕರ್ಮಿಯ ಎನಗೊಮ್ಮೆ ತೋರದಿರಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಸಿತವಿದು ಶಿವರೂಪೆಂದು ನೊಸಲೊಳು ಧರಿಸಿದಡವ ನಿತ್ಯ. ಪದ : ಭವಬಂಧನಕೆ ಅರಿಯು ಭಕಾರವು ಶಿವಪದದ ಬಯಕೆಯನೀವ ಸಿಕಾರವು ಕವಿವ ತಾಮಸಗುಣಹಾರ ತಕಾರವೆಂದು ವಿವರಿಸಿ ಶ್ರೀ ಭಸಿತವನೆನ್ನ ಭಾಳೊಳು ತವೆ ಪೂಸಕಲಿಸಿದ ಗುರುವ ನೆನೆದು ನಾ ಜವನ ಪಾಶವನು ಸುಟ್ಟು ನಿಟ್ಟೊರೆಸಿದೆನು. | 1 | ಈ ಜನ್ಮದ ಹೊಲೆಗಳೆವ `ವಿ'ಕಾರವು ಸಾಜ ಭೂತಭಯ ಭೀತಿಗೆ `ಭೂ'ಕಾರವು ರಾಜಿಪ ತಿಮಿರಕೆ ಜ್ಯೋತಿ `ತಿ'ಕಾರವೆಂದು ಮೂಜಗಪಾಲಗೆ ಸಿತಗೊರಳನಾಮವು ಸೂಚಿಸುತಿಹ [ವಿ]ಭೂತಿಯ ಧರಿಸಿಯೆ ನೀ ಜೀವಿಸು ಮಗನೆಂದು ಅರುಹಿದ ಗುರುವೆ. | 2 | ಪ್ರಥಮಪುಂಡ್ರ ಬ್ರಹ್ಮತ್ಯಕರ ದ್ವಿತೀಯಪುಂಡ್ರ ವಿಷ್ಣುವಿನ ಸ್ಥಿತಿಗತಿಕ್ಷಯಂ ತೃತೀಯ ಪುಂಡ್ರ ರುದ್ರನ ಲಯಗೆಡವುದೆಂದು ಪ್ರತಿಯಿಲ್ಲ ತ್ರಿಪುಂಡ್ರವ ಭಾಳೊಳು ಸದವಕಾಲ ಧರಿಸಿದಡವ ನಿತ್ಯನೆಂದುನ್ನತಿ ಪೊಗಳೆ ವೇದ ಅಷ್ಟ ಪೌರಾಣದಲ್ಲಿ. | 3 | ಪಂಚಗವ್ಯ ಗೋಮಯದಿ ಜನಿಸಿಯೆ ಪಂಚಮುಖಗೆ ಆಭರಣವೆನಿಸಿ ತನು ಪಂಚಭೂತಂಗಳನಳಿದು ಪಣೆಯೊಳಿರುವ ಸಂಚಿತ ಪ್ರಾರಬ್ಧಾಗಾಮಿ ತ್ರೈಗಳ ಹಂಚುಹರಿಯ ಮಾಡುರುಹುವ ಭಸ್ಮ ಪ್ರ ಪಂಚಿಲ್ಲದೆ ಧರಿಸಿದಡವ ಮುಕ್ತ . | 4 | ಚಿದಂಗ ವೃಷಭಾಕಾರ ವಿಭೂತಿಯ ಅದ ಸರ್ವಾಂಗಕುದ್ಧೂಳನ ಮಾಡಿಪ ಸದ್ಭಕ್ತನೆ ಶಿವ ತಾನೆಂದು ಮುದದಿ ಪೊಗಳುತಿಹ ವೇದಾಗಮಗಳು ಮಿದ ನೀ ಧರಿಸೆಂದೆನಗರುಹಿದ ಗುರು ಮದಹರ ಪಡುವಿಡಿ ಸಿದ್ಧಮಲ್ಲೇಶಾ. | 5 |
--------------
ಹೇಮಗಲ್ಲ ಹಂಪ
ಧರಿಸಿರಣ್ಣ ಶ್ರೀ ವಿಭೂತಿಯ, ಧರಿಸಿರಣ್ಣ ಶ್ರೀ ರುದ್ರಾಕ್ಷಿಯ, ಸ್ಮರಿಸಿರಣ್ಣ ಶ್ರೀ ಪಂಚಾಕ್ಷರಿಯ. ಶ್ರೀ ವಿಭೂತಿಯ ಹೂಸದೆ, ಶ್ರೀ ರುದ್ರಾಕ್ಷಿಯ ಧರಿಸದೆ, ಶ್ರೀ ಪಂಚಾಕ್ಷರಿಯ ನೆನೆಯದೆ ಶಿವಪದವ ಸಾಧಿಸಿದೆನೆಂದರೆ ಸಾಧ್ಯವಾಗದು ಕಾಣಿರಣ್ಣಾ ! ಕಣ್ಣು ಕಾಲು ಕಿವಿಯಿಲ್ಲದಿರೆ ಶರೀರಕೆ ಒಪ್ಪವಹುದೆ ? ಮುಕ್ಕಣ್ಣನ ಆಭರಣವೆನಿಸುವ ಭಸ್ಮ ರುದ್ರಾಕ್ಷಿ ಷಡಕ್ಷರಿಯಿಂದಲೆನ್ನ ಭವದಗ್ಧವಾಗಿ ನಿತ್ಯ ಮುಕ್ತನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇನ್ನು ಗುರುಕರುಣಸ್ಥಲವದೆಂತೆಂದಡೆ : ನಾನಾ ಭವದಲ್ಲಿ ಬಂದ ಭವಿಯಂ ಕಳದು ಭಕ್ತನ ಮಾಡಿದ ಕ್ರಮವೆಂತೆಂದಡೆ ; `ಅಗ್ನಿರಿತಿ ಭಸ್ಮ ವಾಯುರಿತಿ ಭಸ್ಮ'ವೆಂಬ ವಿಭೂತಿಯಿಲ್ಲದಂದು. `ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ'ವೆಂಬ ವಿಭೂತಿಯಿಲ್ಲದಂದು. `ವ್ಯೋಮೇತಿ ಭಸ್ಮ ಸೋಮೇತಿ ಭಸ್ಮ'ವೆಂಬ ವಿಭೂತಿಯಿಲ್ಲದಂದು. `ಸೂರ್ಯೇತಿ ಭಸ್ಮ ಆತ್ಮೇತಿ ಭಸ್ಮ'ವೆಂಬ ವಿಭೂತಿಯಿಲ್ಲದಂದು. `ಅನಾದಿಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ ಚಿದಂಗಂ ವೃಷಭಾಕಾರಂ' ಆಗಿಹ ಚಿದ್ಭಸ್ಮವ ತಂದು ವಿಭೂತಿಯ ಪಟ್ಟವಂ ಕಟ್ಟಿದರೆ ಭಾವಭ್ರಮೆಯಳಿದು ಭಾವ ಗುರುವಾಯಿತ್ತು. ಕಾಯಗುಣವಳಿದು ಕಾಯ ಲಿಂಗವಾಯಿತ್ತು. ಪ್ರಾಣಗುಣವಳಿದು ಪ್ರಾಣ ಲಿಂಗವಾಯಿತ್ತು. ಮನವಿಕಾರವಳಿದು ಮನ ಲಿಂಗವಾಯಿತ್ತು. ಘ್ರಾಣಕ್ಕೆ ಸುವಾಸನೆಯನರಿವ ಆಚಾರಲಿಂಗವಾಯಿತ್ತು. ಜಿಹ್ವೆಗೆ ಪ್ರಸಾದಭೋಗವನರಿವ ಗುರುಲಿಂಗವಾಯಿತ್ತು. ಶ್ರೋತ್ರಕ್ಕೆ ಷಡಾಕ್ಷರಮಂತ್ರವನರಿವ ಪ್ರಸಾದಲಿಂಗವಾಯಿತ್ತು. ನೋಟಕ್ಕೆ ಘನಚೈತನ್ಯವಾದ ಶಿವಲಿಂಗವಾಯಿತ್ತು. ಶಬ್ದಕ್ಕೆ ಸರ್ವಲಿಂಗಾನುಭಾವಿಯಾಯಿತ್ತು. ಇಂತು ಪೂರ್ವಗುಣವಳಿದು ಪುನರ್ಜಾತನಾದ ಮಹಾಶರಣನು ಸರ್ವಾಂಗಲಿಂಗಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಂಕಲ್ಪ ವಿಕಲ್ಪವೆಂಬ ಉದಯಾಸ್ತಮಾನಗಳಿಗೆ ದೂರವಾದ ಶಿವಶರಣರ ಅಕುಲಜರೆಂದು ಗಳಹುತಿಪ್ಪರು ನೋಡಾ ಈ ಮರುಳ ವಿಪ್ರರು ತಾವು ಮಾತಂಗಿಯ ಗರ್ಭಸಂಭವ ಜೇಷ*ಪುತ್ರರೆಂಬುದನರಿಯದೆ. ನಮ್ಮ ಶಿವಭಕ್ತರು ಅಂತಹ ಕುಲ ಇಂತಹ ಕುಲದವರೆಂದು ನಿಂದಿಸಿ ನುಡಿವ ವಿಪ್ರಹೊಲೆಯರು ನೀವು ಕೇಳಿ ಭೋ ಅದೆಂತೆಂದಡೆ_ ಸ್ತ್ರೀವಾದಪುರುಷಃ ಷಂಡಶ್ಚಂಡಾಲೋ ದ್ವಿಜವಂಶಜಃ ನಜಾತಿಭೇದೋ ಲಿಂಗಾರ್ಚೇ ರುದ್ರಗಣಾಃ ಸ್ಮೃತಾಃ ಇಂತೆಂಬ ಪುರಾಣವಾಕ್ಯವನರಿದು ನಮ್ಮ ಶಿವಭಕ್ತನು ಹೊಲೆಯ ಮಾದಿಗ ಕಬ್ಬಿಲ ಕಮ್ಮಾರ ಕಂಚುಗಾರ ಅಕ್ಕಸಾಲೆ ಕುಂಬಾರ ಅಗಸ ನಾವಿಂದ ಜೇಡ ಬೇಡನೆಂದು ನುಡಿಯುತಿಪ್ಪರು. ನಿಮ್ಮ ಉತ್ತಮ ಸತ್ಕುಲಂಗಳ ನಾವು ಎತ್ತಿ ನುಡಿಯಬಹುದೇ ಮಾರ್ಕಂಡೇಯ ಮಾದಿಗನೆಂದು ಸಾಂಖ್ಯ ಶ್ವಪಚನೆಂದು ಕಾಶ್ಯಪ ಕಮ್ಮಾರನೆಂದು ರೋಮಜ ಕಂಚುಗಾರನೆಂದು ಅಗಸ್ತ್ಯ ಕಬ್ಬಿಲನೆಂದು ನಾರದ ಅಗಸನೆಂದು ವ್ಯಾಸ ಬೇಡನೆಂದು ವಶಿಷ* ಡೊಂಬನೆಂದು ದುರ್ವಾಸ ಮಚ್ಚಿಗನೆಂದು ಕೌಂಡಿಲ್ಯ ನಾವಿಂದನೆಂದು ಅದೆಂತೆಂದಡೆ ವಾಸಿಷ*ದಲ್ಲಿ_ ವಾಲ್ಮಿಕೀ ಚ ವಶಿಷ*ಶ್ಚ ಗಾಗ್ರ್ಯಮಾಂಡವ್ಯಗೌತಮಾಃ ಪೂರ್ವಾಶ್ರಯೇ ಕನಿಷಾ*ಸ್ಯುರ್ದೀಕ್ಷಯಾ ಸ್ವರ್ಗಗಾಮಿನಃ ಎಂದುದಾಗಿ ಇದನರಿದು ಮರೆದಿರಿ ನಿಮ್ಮ ಕುಲವನು ಇನ್ನು ನಿಮ್ಮ ಕುಲದಲ್ಲಿ ಹಿರಿಯರುಳ್ಳರೆ ನೀವು ಹೇಳಿ ಭೋ ನಿಮ್ಮ ಗೋತ್ರವ ನೋಡಿ ನಿಮ್ಮ ಹಮ್ಮು ಬಿಡಿ ಭೋ ಎಮ್ಮ ಸದ್ಭಕ್ತರೇ ಕುಲಜರು. ಇದ ನಂಬಿದಿರ್ದಡೆ ಓದಿ ನೋಡಿರಣ್ಣಾ ನಿಮ್ಮ ವೇದವರ್ಗಂಗಳೊಳಗೆ ಅದೆಂತೆಂದಡೆ ಅಥರ್ವವೇದದಲ್ಲಿ_ ಮಾತಂಗೀ ರೇಣುಕಾ ಗರ್ಭಸಂಭವಾತ್ ಇತಿ ಕಾರುಣ್ಯಂ ಮೇಧಾವೀ ರುದ್ರಾಕ್ಷಿಣಾ ಲಿಂಗಧಾರಣಸ್ಯ ಪ್ರಸಾದಂ ಸ್ವೀಕುರ್ವನ್ ಋಷೀಣಾಂ ವರ್ಣಶ್ರೇಷೊ*ೀs ಘೋರ ಋಷಿಃ ಸಂಕರ್ಷಣಾತ್ ಇತ್ಯಾದಿ ವೇದ ವಚನ ಶ್ರುತಿಮಾರ್ಗೇಷು ಎಂದುದಾಗಿ ಮತ್ತಂ ವಾಯವೀಯಸಂಹಿತಾಯಾವಮ್_ ಬಾಹ್ಮಣೋ ವಾಪಿ ಚಾಂಡಾಲೋ ದುರ್ಗುಣಃ ಸುಗುಣೋsಪಿ ವಾ ಭಸ್ಮ ರುದ್ರಾಕ್ಷಕಕಂಠೂೀ ವಾ ದೇಹಾಂತೇ ಸ ಶಿವಂ ವ್ರಜೇತ್ ಎಂದುದಾಗಿ ಮತ್ತಂ ಶಿವರಹಸ್ಯದಲ್ಲಿ_ ಗ್ರಾಮೇಣ ಮಲಿನಂ ತೋಯಂ ಯಥಾ ಸಾಗರಸಂಗತವರಿï ಶಿವಸಂಸ್ಕಾರಸಂಪನ್ನೆ ಜಾತಿಭೇದಂ ನ ಕಾರಯೇತ್ ಎಂದುದಾಗಿ ಇವರೆಲ್ಲರ ವರ್ಣಂಗಳು ಲಿಂಗಧಾರಣೆಯಿಂದ ಮರೆಸಿಹೋದವು ಕೇಳಿರಣ್ಣಾ. ಇಂತಪ್ಪ ಋಷಿ ಜನಂಗಳೆಲ್ಲ ಶ್ರೀಗುರುವಿನ ಕಾರುಣ್ಯವಂ ಪಡೆದು ವಿಭೂತಿ ರುದ್ರಾಕ್ಷಿಯಂ ಧರಿಸಿ ಶಿವಲಿಂಗಾರ್ಚನೆಯಂ ಮಾಡಿ ಪಾದತೀರ್ಥ ಪ್ರಸಾದವಂ ಕೊಂಡು ಉತ್ತಮ ವರ್ಣಶ್ರೇಷ*ರಾದರು ಕಾಣಿರೇ ಇದು ಕಾರಣ ನಮ್ಮ ಕೂಡಲಚೆನ್ನಸಂಗಯ್ಯನ ಅರಿದು ಪೂಜಿಸುವಾತನೇ ಉತ್ತಮ ಸದ್ಭಕ್ತ ಬ್ರಾಹ್ಮಣನು. ಅರಿಯದವನೀಗಲೇ ಕೆಟ್ಟ ಹೊಲೆಯ ಕಾಣಿರಣ್ಣಾ.
--------------
ಚನ್ನಬಸವಣ್ಣ
ಇನ್ನಷ್ಟು ... -->