ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅನ್ನವನಿಕ್ಕಿ ನನ್ನಿಯ ನುಡಿದುಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದಡೆಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆಶಿವನ ನಿಜವು ಸಾಧ್ಯವಾಗದು.ಗುಹೇಶ್ವರನನರಿದ ಶರಣಂಗೆ ಆವ ಫಲವೂ ಇಲ್ಲ
ಮೂರು ವೃಕ್ಷವು ಶುದ್ಧ, ಆರು ಫಲವೂ ಸಿದ್ಧ,ಆರಾರು ಕೋಟಿಯದು ಪ್ರಸಿದ್ಧದಾ ತೆನೆಗಡದ ಸೀಮೆಯ,ತನುವಿನ ಮಂಟಪದ ಘನ ಮಸ್ತಕದಲಿಪ್ಪಹೊಂಗಳಸದಾ ಮೂರು ಮತ್ತೊಂದಾಗಿಆರರಾಹುತಿಯಿಂದ ಆರಾರು ಕೋಟಿಯಿಂದತ್ತಲಾಗಿಮೀರಿನಿಂದಾ ತ್ವಮಸಿಕಪಿಲಸಿದ್ಧಮಲ್ಲಿನಾಥನ ಸಾರಹೃದಯನ ಭಕ್ತಿ ಫಲವಿಂತುಟು.
ಮುನ್ನಾಥ ಫಲವನೂ ಇನ್ನುಸೀಮೆಕ್ಷೇತ್ರದ ಭಕ್ತಿ ಮುನ್ನಿನಂತೆಫಲವಾಯಿತೊ ಅಯ್ಯ,ಅಂದಾಯಲ್ಲಿ ಬಸವಣ್ಣ ತಂದಾನುಹಿಂದು ಮುಂದುಗೆಟ್ಟ ಫಲವಾ ಫಲವೂಆ ಫಲವಾದರೆ ಸಫಲವಾಯಿತು ಸದ್ಭಕ್ತಿಒಲವಿಂಗೆ ನೀ ಕಪಿಲಸಿದ್ಧಮಲ್ಲಿಕಾರ್ಜುನ.