ಷಡುವರ್ಣ ದಶವಾಯು ಚತುಷ್ಟಯಂಗಳು
ಪಂಚೇಂದ್ರಿಯ ಅಷ್ಟಮದಂಗಳೆಂದು, ಷೋಡಶಕಳೆಗಳೆಂದು,
ತ್ರಿವಿಧ ಶಕ್ತಿಯೆಂದು, ತ್ರಿವಿಧ ಆತ್ಮನೆಂದು,
ತ್ರಿವಿಧ, ಭೂತಿಕವೆಂದು,
ಪಂಚವಿಂಶತಿತತ್ವಂಗಳೆಂದು, ಪಿಂಡಪಿಂಡಭಾವವೆಂದು,
ಜ್ಞಾನಜ್ಞಾನ ಸಂಬಂಧವೆಂದು
ಇಂತೀ ಭೇದಂಗಳ ಸಂಕಲ್ಪಿಸಿ ನುಡಿವುದು ಅದೇನು ಹೇಳಾ.
ಅದು ಅರಿವಿನ ಮರವೆಯೋ ?
ಮರೆದು ಅರಿದ ಎಚ್ಚರಿಕೆಯೋ ?
ಇಂತೀ ಭೇದವ ತೆರೆದು ಕಂಡೆನೆಂಬ ಸೂತಕವ ಮರೆದಲ್ಲಿ,
ಆ ಗುಣ ಎಂತೆಯಿದ್ದಿತ್ತು ಅಂತೆ ವಸ್ತು,
ಕಾಮಧೂಮ ಧೂಳೇಶ್ವರನು.