ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಳ್ಳೆ ಹೇರಂಡ ಮಹಿಷಿ ಇವೆಲ್ಲವ ನಿಷೇಧವೆಂದು ಬಿಟ್ಟಲ್ಲಿ ಕೊಲ್ಲದ ಕೊಲೆಯ ಕೊಲಲೇತಕ್ಕೆ ? ವ್ರತಿಗಳಲ್ಲಿ ಗೆಲ್ಲ ಸೋಲಕ್ಕೆ ಹೋರಲೇತಕ್ಕೆ ? ಪ್ರಮಥರೆಲ್ಲರು ಅಲ್ಲಿ ಇಲ್ಲಿಯವರೆಂದು ಪ್ರಮಾಣಿಸಬಹುದೆ ? ಸರ್ಪನೆತ್ತ ಮುಟ್ಟಿದಲ್ಲಿಯೂ ಪ್ರಾಣಕ್ಕೆ ಹೆಚ್ಚು ಕುಂದಿಲ್ಲ. ಶರಣರತ್ತ ಇತ್ತಣವರೆಂದಡೆ ಭಕ್ತಿಗೆ ಹಾನಿ, ಸತ್ಯಕ್ಕೆ ದೂರ ; ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಮುನ್ನವೆ ದೂರ.
--------------
ಅಕ್ಕಮ್ಮ
-->