ಶಿವಂಗೆ ಬ್ರಹ್ಮವಿಷ್ಣುಗಳು ಸರಿಮಿಗಿಲೆನಲಾಗಿ,
ಸುರಿಯವೆ ಬಾಯಲ್ಲಿ ಬಾಲಹುಳುಗಳು ?
ಧರೆ ಚಂದ್ರ ರವಿವುಳ್ಳನ್ನ ಬರ,
ಇರದೆ ಉರಿಯುತ್ತಿಪ್ಪರಯ್ಯಾ, ನರಕದ ಕಿಚ್ಚಿನಲ್ಲಿ.
ರುದ್ರಸ್ಯ ಬ್ರಹ್ಮವಿಷ್ಣುಭ್ಯಾಂ ನಾಧಿಕಂ ಪ್ರವದಂತಿ ಯೇ |
ತೇಷಾಂ ಪಾಪಸ್ಯ ಸಾಂಕರ್ಯಮಸ್ತೀತಿ ಮಮ ನಿಶ್ಚಯಃ ||
ಇದು ಕಾರಣ, ಹರಿಬ್ರಹ್ಮಾದಿ ಸುರರೆಲ್ಲರೂ
ನಿಮ್ಮ ಡಿಂಗರಿಗರೆಂದರಿದವರಿಗೆ ಪರಮಪದವಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ.