ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ತೊಳಸಿಯ ಗಿಡುವ ಮೆಲಲಾರದೆ ಕಿವಿಯೊಳಗಿಕ್ಕಿದೆ.ಕಲಸಿದ ನಾಮಕ್ಕೆ ಹಣೆಯ ಕಾಣದೆ ಎದೆಯೊಳಗಿಕ್ಕಿದೆ.ತಾವರೆಯ ಮಣಿಯ ತಾವಡಿಸೂದಕ್ಕೆಠಾವ ಕಾಣದೆ ಡಾವರಿಸುತ್ತಿದ್ದೆ,ಇದಕಿನ್ನಾವುದು ಹದನಯ್ಯಾ.ಎನ್ನ ನಿಮ್ಮ ದಾಸೋಹದ ದಾಸನ ಮಾಡಿಸಯ್ಯಾನಾರಾಯಣಪ್ರಿಯ ರಾಮನಾಥಾ.