ಅಥವಾ

ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯನೆಂಬ ಡಕ್ಕೆ, ಕ್ರೀ ಭಾವವೆಂಬ ಹೊದಕೆ. ಅರಿವೆಂಬ ನೇಣಿನಲ್ಲಿ ಸ್ಥೂಲಸೂಕ್ಷ ್ಮವೆಂಬ ಹೊಡೆಚೆಂಡು ಕಟ್ಟಿ ಹೊಯ್ವುತ್ತಿದೆ ಡಕ್ಕೆ, ಕಾಲಾಂತಕಬ್ಥೀಮೇಶ್ವರಲಿಂಗವಲ್ಲದಿಲ್ಲಾಎಂದು.
--------------
ಡಕ್ಕೆಯ ಬೊಮ್ಮಣ್ಣ
ತಾತಂದ ತನುವೆಲ್ಲವು ದೋಷ, ಆ ತನುವಿನಲ್ಲಿ ಬಂದ ಮನವೆಲ್ಲವು ಪ್ರಕೃತಿ. ಅದಕ್ಕೆ ಇದಿರಿಟ್ಟು ತೋರಿದ ತ್ರಿವಿಧ ಮೂರ್ತಿಯ ಪರುಷ ಪಾಷಾಣವನಿದಿರಿಟ್ಟಂತೆ ತಮ ಜ್ಯೋತಿಯನಿದಿರಿಟ್ಟಂತೆ ಅರಿವು ಮರವೆಯನರಿವುದಕ್ಕೆ ಇದಿರಿಟ್ಟುಕುರುಹ ಕೊಂಡು ಬಂದೆ. ಮರೆಯದಿರಕ್ಕನೆ, ಮರವೆಯಲ್ಲಿ ಡಕ್ಕೆ ಧಿಕ್ಕರಿಸುತ್ತದೆ. ಕಾಲಾಂತಕ ಭೀಮೇಶ್ವರಲಿಂಗವನರಿಯಹೇಳಿ.
--------------
ಡಕ್ಕೆಯ ಬೊಮ್ಮಣ್ಣ
-->