ತಾತಂದ ತನುವೆಲ್ಲವು ದೋಷ,
ಆ ತನುವಿನಲ್ಲಿ ಬಂದ ಮನವೆಲ್ಲವು ಪ್ರಕೃತಿ.
ಅದಕ್ಕೆ ಇದಿರಿಟ್ಟು ತೋರಿದ ತ್ರಿವಿಧ ಮೂರ್ತಿಯ
ಪರುಷ ಪಾಷಾಣವನಿದಿರಿಟ್ಟಂತೆ
ತಮ ಜ್ಯೋತಿಯನಿದಿರಿಟ್ಟಂತೆ
ಅರಿವು ಮರವೆಯನರಿವುದಕ್ಕೆ ಇದಿರಿಟ್ಟುಕುರುಹ ಕೊಂಡು ಬಂದೆ.
ಮರೆಯದಿರಕ್ಕನೆ, ಮರವೆಯಲ್ಲಿ ಡಕ್ಕೆ ಧಿಕ್ಕರಿಸುತ್ತದೆ.
ಕಾಲಾಂತಕ ಭೀಮೇಶ್ವರಲಿಂಗವನರಿಯಹೇಳಿ.