ಎನ್ನ ಮನದ ಮರವೆ ಭಿನ್ನವಾಗದು.
ಮರೆದು ಅರಿದೆಹೆನೆಂದಡೆ
ಅರಿವಿನ ಮರವೆಯ ಮಧ್ಯದಲ್ಲಿ ಎಡೆದೆರಪಿಲ್ಲ.
ಕೋಲಿನಲ್ಲಿ ನೀರ ಹೊಯ್ದಡೆ, ಸೀಳಿ ಹೋಳಾದುದುಂಟೆ ?
ಅರಿವುದೊಂದು ಘಟ, ಮರೆವುದೊಂದು ಘಟ,
ಒಡಗೂಡುವ ಠಾವಿನ್ನೆಂತೊ ?
ಹುತ್ತದ ಬಾಯಿ ಹಲವಾದಡೆ,
ಸರ್ಪನೆಯಿದುವಲ್ಲಿ ಒಡಲೊಂದೆ ತಪ್ಪದು.
ತನ್ನ ಚಿತ್ತದ ಭೇದವಲ್ಲದೆ ವಸ್ತುವಿಗೆ ಭೇದವುಂಟೆ ?
ವಿಷ ವಿಷವ ವೇಧಿಸುವಲ್ಲಿ ಬೇರೊಂದು ಅಸುವಿನ ಕಲೆವುಂಟೆ ?
ಅಸಿಯ ಮಡುವಿನಲ್ಲಿ ಲತೆಯ ಹಾಸಿಕೆಯುಂಟೆ ?
ಇಂತೀ ಹುಸಿಗಂಜಿ, ಗೂಡಿನಲ್ಲಿ ಅಡಗಿದೆ,
ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗವೆ.