ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರುಲೋಕದ ದೈತೆ ಊರೆಲ್ಲರ ಕೊಂದು ತಿಂದು, ಬೇರೊಂದು ಠಾವಿನಲ್ಲಿ ಆಯಿದಾಳೆ. ಠಾವನರಿತು ದೈತೆಯ ದಾತ ಮುರಿದು, ಅನಿಹಿತವ ನೇತಿಗಳೆದು, ನಿಹಿತವು ತಾನಾದಡೆ, ಅರ್ಕೇಶ್ವರಲಿಂಗವ ಕೂಡಿದ ಕೂಟ.
--------------
ಮಧುವಯ್ಯ
ಕಾಯವಿಡಿದು ಸೋಂಕಿದುದೆಲ್ಲ, ಪ್ರಕೃತಿಗೆ ಒಳಗು. ಜೀವವಿಡಿದು ಸೋಂಕಿದುದೆಲ್ಲ, ಭವಕ್ಕೊಳಗು. ಕಾಯದ ಅಳಿವನರಿತು, ಜೀವದ ಉಳಿವನರಿತು, ಉಭಯದ ಠಾವನರಿತು, ಕಾಯದ ಜೀವದ ಭಿನ್ನದ ಬೆಸುಗೆಯ ಠಾವನರಿತು, ಕೂಡಬಲ್ಲಡೆ ಯೋಗ. ಅದು ಲಿಂಗದ ಭಾವಸಂಗ, ಇದನರಿ. ಗುಡಿಯೊಡೆಯ ಗುಮ್ಮಟನಾಥನಲ್ಲಿ ಅಗಮ್ಯೇಶ್ವರಲಿಂಗವ ಹೆರೆಹಿಂಗದಿರು.
--------------
ಮನುಮುನಿ ಗುಮ್ಮಟದೇವ
-->