ಕಾಯವಿಡಿದು ಸೋಂಕಿದುದೆಲ್ಲ, ಪ್ರಕೃತಿಗೆ ಒಳಗು.
ಜೀವವಿಡಿದು ಸೋಂಕಿದುದೆಲ್ಲ, ಭವಕ್ಕೊಳಗು.
ಕಾಯದ ಅಳಿವನರಿತು, ಜೀವದ ಉಳಿವನರಿತು,
ಉಭಯದ ಠಾವನರಿತು,
ಕಾಯದ ಜೀವದ ಭಿನ್ನದ ಬೆಸುಗೆಯ ಠಾವನರಿತು,
ಕೂಡಬಲ್ಲಡೆ ಯೋಗ.
ಅದು ಲಿಂಗದ ಭಾವಸಂಗ, ಇದನರಿ.
ಗುಡಿಯೊಡೆಯ ಗುಮ್ಮಟನಾಥನಲ್ಲಿ
ಅಗಮ್ಯೇಶ್ವರಲಿಂಗವ ಹೆರೆಹಿಂಗದಿರು.