ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೃದಯದಲ್ಲಿಪ್ಪ ಪ್ರಾಣಲಿಂಗವನು ತ್ರಿಕೂಟದಲ್ಲಿ ತಂದು, ಆ ತ್ರಿಕೂಟದಲ್ಲಿಪ್ಪ ಆತ್ಮಲಿಂಗವನು ಬ್ರಹ್ಮರಂಧ್ರದಲ್ಲಿ ತಂದು, ಆ ಬ್ರಹ್ಮರಂಧ್ರದಲ್ಲಿಪ್ಪ ಮಹಾಜ್ಞಾನವನು ಶಿಖಾಚಕ್ರದಲ್ಲಿ ತಂದು, ಆ ಶಿಖಾಚಕ್ರದಲ್ಲಿಪ್ಪ ಸ್ವಯಜ್ಞಾನವನು ಪಶ್ಚಿಮಚಕ್ರಕ್ಕೆ ತಂದು, ಆ ಪಶ್ಚಿಮಚಕ್ರದಲ್ಲಿಪ್ಪ ನಿರಂಜನವ ಅಣುಚಕ್ರಕ್ಕೆ ತಂದು, ಆ ಅಣುಚಕ್ರದಲ್ಲಿಪ್ಪ ಝೇಂಕಾರಲಿಂಗವನು ನಿಶ್ಚಿಂತ ನಿರಾಳದಲ್ಲಿ ತಂದು ತಾನು ತಾನಾಗಿರ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->