ಮುತ್ತಿನೈದೊಂದೆಳೆಯ ಕಟ್ಟಾಣಿ ಎನ್ನ ಕೊರಳಲ್ಲಿ ಒಪ್ಪುತಿಪ್ಪುದು.
ಸುತ್ತಿಬಂದ ಒಡ್ಡ್ಯಾಣ ಎನ್ನ ನಡುಮಧ್ಯದಲ್ಲಿ ಝಗಝಗಿಸುತಿಪ್ಪುದು.
ಕಾಲ ರುಳಿ ಕಣ್ಣಿಂಗೆ ಮಿರುಗುತಿಪ್ಪುದು,
ನವನೂತನ ಚಿಂತಾಕರ ಮಧ್ಯೆಕೊರಳಿಗೆ ಸಮನಾದ ಮೇಲೆ,
ತವಕ ಮುಂದುಗೊಂಡಿತ್ತು ತಡವೇಕೆ ನಡೆ
ನಮ್ಮ ಗುರುನಿರಂಜನ ಚನ್ನಬಸವಲಿಂಗವ ಮನ್ನಿಸಿ ಕರತನ್ನಿ.