ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಶರಣಸಂಬಂಧವನರಿದ ಬಳಿಕ, ಕುಲಮದ ಛಲಮದವಿಲ್ಲ ಕಂಡಯ್ಯಾ.ಲಿಂಗಸಂಬಂಧವನರಿದ ಬಳಿಕ, ಶೀಲಸಂಬಂಧವಿಲ್ಲ ಕಂಡಯ್ಯಾ.ಪ್ರಸಾದಸಂಬಂಧವನರಿದ ಬಳಿಕ, ಇಹಪರಂಗಳೆಂಬವಿಲ್ಲ ಕಂಡಯ್ಯಾ.ಮಹಲಿಂಗ ಕಲ್ಲೇಶ್ವರಾ, ಇಂತೀ ತ್ರಿವಿಧ ಸಂಬಂಧಕ್ಕೆ ಇದೇ ದೃಷ್ಟ.