ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ ಬಂದಾನಂದ ಅಕ್ಷರ ದೀಕ್ಷೆಯನು ಗೋಪ್ಯತರಂದದನು ಸಂಭವಿಸಲು, ಖ್ಯಾತ ಮೂವತ್ತಾರು ಬೆರಸಿ ಬೆರೆಯದ ತತ್ವ, ಆ ಗುರುವ ಪಾಲಿಸಿದ ಶಿಷ್ಯ ಜ್ಯೋತಿರ್ಮಯನೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಶ್ರೀ ಪಂಚಾಕ್ಷರಿಯುಳ್ಳ ಅಗ್ರಜ ವಿಪ್ರನಿಂದಧಿಕ ನೋಡಾ ! ಶ್ರೀ ಪಂಚಾಕ್ಷರಿಯುಳ್ಳ ಅಂತ್ಯಜ ವಿಪ್ರನಿಂದಧಿಕ ನೋಡಾ ! ಶ್ರೀ ಪಂಚಾಕ್ಷರಿಯನಾವಾತನಾದರೂ ನೆನೆದರೆ ರುದ್ರನಪ್ಪುದು ತಪ್ಪದು ನೋಡಾ ಅಯ್ಯಾ ! ಅದೆಂತೆಂದರೆ : ಸಾಕ್ಷಿ : ``ಅಗ್ರಜೋ ಅಂತ್ಯಜೋ ವಾಪಿ ಮೂರ್ಖೋವಾ ಪಂಡಿತೋý ಪಿವಾ | ಜಪೇತ್ ಪಂಚಾಕ್ಷರೀಂ ನಿತ್ಯಂ ಸ ರುದ್ರೋ ನಾತ್ರ ಸಂಶಯಃ ||'' ಎಂದಿತ್ತು ದೃಷ್ಟ. `ಓಂ ನಮಃ ಶಿವಾಯಃ' ಯೆಂಬ ಆರಕ್ಷರವ ನೆನೆಯಲರಿಯದೆ ಜಪ ತಪ ನೇಮ ನಿತ್ಯ ಅನುಷಾ*ನ ಪೂಜೆಗಳೆಲ್ಲ ನಿಷ್ಫಲವೆಂದಿತ್ತು ರಹಸ್ಯದಲ್ಲಿ. ಸಾಕ್ಷಿ :``ಷಡಕ್ಷರಮಿದಂ ಖ್ಯಾತಂ ಷಡಾನನಂ ಷಡನ್ವಿತಂ | ಷಡ್ವಿಧಂಯೋನ ಜಾನಾತಿ ಪೂಜಾಯಾಂ ನಿಃಫಲಂ [ಭವೇತ್]'' ಎಂಬ ಷಡಕ್ಷರಿಯ ಸಂಭ್ರಮದಲ್ಲಿ ನೆನೆದು, ಭವಾಂಬೋಧಿಯ ದಾಂಟಿ, ಸ್ವಯಂಭುವಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
-->