ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಡಗ ಹರಿಗೋಲ ನಂಬಿದವರು ಕಡಲತೊರೆ ದಾಂಟರೇನಯ್ಯಾ ? ಧನು ಖಡ್ಗವ ಪಿಡಿದು ಕಾಳಗವ ಮಾಡಿದವರು ರಣವ ಗೆಲ್ಲರೇನಯ್ಯಾ ? ಗುರುವ ನಂಬಿದವರು ಭವವ ಗೆಲ್ಲರೇನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?
--------------
ಹೇಮಗಲ್ಲ ಹಂಪ
ಶ್ರೀಗುರು ಬಂದು ತ್ರಿವಿಧದೀಕ್ಷೆಯಿಂದ ಉಪದೇಶವ ಮಾಡುವ ಕಾಲದಲ್ಲಿ ಹಸ್ತದಲ್ಲಿ ಶಸ್ತ್ರವ ಹಿಡಿದು ಕಡಿದುಕೊಂಡು ನುಂಗಿದಾತನೇ ಶಿಷ್ಯನೆಂಬೆ. ಲಿಂಗವು ಬಂದು ಹಸ್ತದಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಪೂಜೆಗೊಂಬ ವೇಳೆಯಲ್ಲಿ ವಜ್ರಾಯುಧದಿಂದ ಬಡಿದು ಒಡೆದು ಚೂರ್ಣವ ಮಾಡಿ ಉದಕದೊಳಗೆ ಹಾಕಿ ಕುಡಿಯುವವನೇ ಶರಣನೆಂಬೆ. ಜಂಗಮ ಬಂದು ಇದುರಿನಲ್ಲಿ ಕುಳಿತು ಅನುಭಾವಬೋಧೆಯನು ಮಾಡುವ ಸಮಯದಲ್ಲಿ ಹಸ್ತದಲ್ಲಿ ಖಡ್ಗವ ಪಿಡಿದು ಎಡಕ ಬಂದವನ ಕುಟ್ಟಿ, ಬಲಕ ಬಂದವನ ಹೆಟ್ಟಿ, ಎದುರಿನಲ್ಲಿ ಬಂದವನ ಮೆಟ್ಟಿ, ಆ ಜಂಗಮವನು ಕಡಿದು ಅವನ ಕಂಡವ ಚಿನಿಪಾಲವ ಮಾಡಿ, ನೀರಿಲ್ಲದೆ ಅಟ್ಟು, ಕಿಚ್ಚಿಲ್ಲದೆ ಸುಟ್ಟು, ಹಸ್ತವಿಲ್ಲದೆ ಪಿಡಿದು, ಬಾಯಿಲ್ಲದೆ ಸವಿದು, ಜಿಹ್ವೆಯಿಲ್ಲದೆ ರುಚಿಸಿ, ಸಂತೋಷವಿಲ್ಲದೆ ಪರಿಣಾಮಿಸಬಲ್ಲರೆ ಭಕ್ತನೆಂಬೆ. ಇಂತೀ ತ್ರಿವಿಧದ ಅನುಭಾವವ ಹೇಳಬಲ್ಲರೆ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂಬೆ. ಲಿಂಗಾಂಗಿ ಎಂಬೆ, ಶಿವಜ್ಞಾನಸಂಪನ್ನರೆಂಬೆ, ಪರಶಿವಯೋಗಿಗಳೆಂಬೆ, ಚಿತ್ಪ್ರಕಾಶಜ್ಞಾನಿಗಳೆಂಬೆ, ಈ ವಚನದ ಭೇದವ ತಿಳಿಯದಿದ್ದರೆ ಸತ್ತಹಾಗೆ ಸುಮ್ಮನೆ ಇರು ಎಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಂಚಭೂತಂಗಳಂ ಮೀರಿರ್ಪಆತ್ಮರಾರೆಂದು ತಿಳಿವುದೆಂತೆಂದೊಡೆ: ಸಾಮ್ಯವಸ್ತುವಿನಿಂದ ಗೋಚರಮಲ್ಲಮಾಗಿ ತನ್ನಲ್ಲಿ ತಾನೇ ತಿಳಿಯಬೇಕು. ಧೈರ್ಯವಂ ತಾಳಿ, ವೈರಾಗ್ಯವೆಂಬ ಖಡ್ಗವಂ ಪಿಡಿದು, ಆ ಸೂಕ್ಷ್ಮ ಮಾರ್ಗದಲ್ಲಿ ನಿಶ್ಶಂಕೆಯಿಂ ತಾನೊಬ್ಬನೇ ಪ್ರವೇಶಿಸಿ, ಭಾವವೆಂಬ ಮಹಾಬಯಲೊಳಗೆ ಗಮಿಸುತ್ತಾ, ಮಿಥ್ಯಾಪ್ರಪಂಚನಡಗಿಸಿ, ನಿಜವಂ ಹೊಂದಿ, ತತ್ವಾಮೃತವಂ ಪೀರಿ, ನಲಿವುತ್ತಿರ್ಪ ಪ್ರಮಥಗಣಂಗಳಂ ನೋಡಿ ಪಾಡಿ ಮಣಿದು ಕುಣಿದು ತತ್ಪ್ರಸಾದಾಮೃತವಂ ಸವಿದು, ಮಹಾತೃಪ್ತಿಸ್ಥಾನದಲ್ಲಿ ಸ್ವಪ್ನದಲ್ಲಿ ತಾನು ಪಟ್ಟ ಭ್ರಮೆಯು ಜಾಗ್ರದಲ್ಲಿ ತನಗೆ ಅಪಹಾಸ್ಯಮಪ್ಪಂತೆ, ತನ್ನಲ್ಲಿ ತಾನೇ ಲಯಿಸುತ್ತಾ, ಮಹಾಲಿಂಗವೇ ನಾನಾಗಿರ್ಪ ಸುಖವಂ ಕಾಲವಿಳಂಬವನೆಸಗದೆ ನನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಇಷ್ಟಲಿಂಗವ ಮರೆದು ಬರಿಯ ಕಲ್ಲಿಗೆರಗುವ ಭ್ರಷ್ಟಂಗಿನ್ನೆಲ್ಲಿಯ ಶಿವಾಚಾರವಯ್ಯಾ ! ಖಡ್ಗವ ಬಿಟ್ಟು ಕೋಲುವಿಡಿದು ಕಾಳಗವ ಮಾಡಿದರೆ ತಲೆ ಹೋಗುವುದನರಿಯಾ ಮನುಜ. ಲಿಂಗವ ಬಿಟ್ಟು ಅನ್ಯಲಿಂಗವ ಪೂಜೆಮಾಡಿದರೆ ನರಕವೆಂಬುದನರಿಯಾ ಪಾಪಿ. ಸಾಕ್ಷಿ :``ಇಷ್ಟಲಿಂಗೇ ಪರೇತ್ ಚ ಭಾವಾದನ್ಯತ್ರ ಗಚ್ಛತಿ | ಸ ಕಿಲ್ಬಿಷಮವಾಪ್ನೋತಿ ಪೂಜಯನ್ ನಿಃಫಲೋ ಭವೇತ್||'' ಎಂಬ ವಚನವನರಿಯದೆ ಮುಂದುಗಾಣದನ್ಯದೈವಕೆರಗುವ ಅಂಧಕರಿಗೆಂದೆಂದು ಭವಹಿಂಗದೆಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
-->