ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಲಿಂಗಮುಖವು ಜಂಗಮವೆಂದುದಾಗಿ,ತಾನು ಸತ್ಕಾಯದಿಂದ ಸಂಪಾದಿಸಿದ ಸತ್ಪದಾರ್ಥವ ಜಂಗಮಕ್ಕಿತ್ತುತತ್ಪ್ರಸಾದವ ಭಕ್ತಿಯಿಂದ ಪಡೆದು ಸೇವಿಸಬಲ್ಲಡೆಅದು ಅಶನವೆಂಬೆ, ಈ ಕ್ರಮಕ್ಕೆ ಹೊರಗಾದುದೆ ಅನಶನವೆಂಬೆ,`ಸಾಶನಾನಶನೇ ಭಿ' ಎಂದುದಾಗಿ.ಇಂತೀ ಅಶನ ಅನಶನಗಳ ಭೇದವನರಿಯದೆತನುವ ದಂಡಿಸದೆ ಮನವ ಖಂಡಿಸದೆತನಗಾಗಿ ಜನವ ಮೋಸಂಗೈದು ತಂದುಮನೆಯಲ್ಲಿ ಮಡಗಿದ ದ್ರವ್ಯವು ಗುರುವಿಂಗೆ ಸಲ್ಲದು,ಲಿಂಗಕ್ಕೆ ಸಲ್ಲದು, ಜಂಗಮಕ್ಕೆ ಸಲ್ಲದಾಗಿ.ಇಂತೀ ಬಿನುಗು ಮಾನವನ ನಮ್ಮ ಕೂಡಲಚೆನ್ನಸಂಗಮದೇವನುಹೀನಯೋನಿಯಲ್ಲಿ ಬರಿಸದೆ ಮಾಣ್ಬನೆ ?
ಕಾಯ ಖಂಡಿಸದೆ ಮನ ಹರಿಯದೆ ಪ್ರಾಣ ತೊರೆಯದೆಭಾವ ಬಿಚ್ಚದೆ ಬರಿದೆ ಹೆಚ್ಚಿ ಬಂಧನಕ್ಕೊಳಗಾದರಲ್ಲ !ಈ ಭಾವವೇನು ಅಷ್ಟತನು ಮದಭಾವವೊ ?ಅಷ್ಟಕುಲಾದಿ ಮದಭಾವವೊ! ಅಷ್ಟ ಸಂಸ್ಥಿತಾದಿ ಮದಭಾವವೊ ?ಚೌರಾಸಿ ಲಕ್ಷ ಯೋನಿಯಲ್ಲಿ ತಿರುಗುವ ಸಾಮಥ್ರ್ಯಭಾವವೊ ? ಹೇಳಾ !ಧರ್ಮಕರ್ತುವಿನ ಭಾವರಸವಿನೋದಮಯನೆಂದು ಬಂದ ಬಳಿಕಅತಿಶಯದ ಸತಿಪತಿರತಿಭಾವದಂತಿರಬೇಕಲ್ಲದೆಸುರೆಭಾಂಡದ ಸಿರಿಯಂತೆ ಕಾಣಿಸಿಕೊಂಡರೇನು ?ಪರಿಕಿಸಿದರೆ ದುರ್ಗಂಜಳ, ಸೋಂಕದಿಪ್ಪರು ಹಿರಿಯರು.ಪರಿಕಿಸಿದರೆ ಇಂಥ ಅಂಗಹೀನ ಭವಿಗಳ ಸಂಗವನೊಲ್ಲದಿರ್ದನುಗೌರವಾಂಗದ ಘನಚರಿತೆಯೊಳಗೊಲಿದುಚನ್ನ ತನುಮನಭಾವ ಪ್ರಸನ್ನಲಿಂಗವು.
ಹೊತ್ತು ಹೊತ್ತಿಗೆ ಕಿಚ್ಚನೆಬ್ಬಿಸಿದಡೆ ಕಲೆ ಉರಿದುದೆಂದು, ಹೊತ್ತು ಹೊತ್ತಿಗೆ ಪ್ರಾಣಕ್ಕೆ ಪ್ರಸಾದವ ಸ್ಥಾಪ್ಯವ ಮಾಡಿ, ತನುವ ಖಂಡಿಸದೆ, ಕಾಯವ ಮರುಗಿಸದೆ, ಭಾವವನೆ ಬಯಲು ಮಾಡಿ, ಬಯಕೆ ಸವೆದು, ಕಾಣದ ಪಥವನೆ ಕಂಡು, ಮಹಾಬೆಳಗಿನಲ್ಲಿ ಬಯಲಾದರು ಕಾಣಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.