ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಗಂಡ ಸತ್ತ ಮುಂಡೆಗೆ ಮೂವರು ಮಿಂಡರು.ಒಬ್ಬಂಗೆ ಅಂಡಿನ ಆಶೆ,ಒಬ್ಬಂಗೆ ಖಂಡಿಯಾಶೆ,ಒಬ್ಬಂಗೆ ಮಂಡೆಯಾಶೆ.ಇಂತೀ ಮೂವರಿಗಾದ ಸೂಳೆ ಸೂಳಕೊಡುವ ಪರಿಯಿನ್ನೆಂತೊ?ಅಂಡಿಗೆ ಖಂಡಿಗೆ ಮಂಡೆಗೆ ದಿಂಡೊಂದೆಮೂವರು ಕೊಂದಾಡುತ್ತಿದ್ದರು.ಅಭಿಸಂಧಿಯ ತಿಳಿ ನಾರಾಯಣಪ್ರಿಯ ರಾಮನಾಥಾ.
ಬ್ರಹ್ಮ ಅಂಡಿಂಗೆ ಒಡೆಯನಾದಲ್ಲಿ,ವಿಷ್ಣು ಖಂಡಿಂಗೆ ಒಡೆಯನಾದಲ್ಲಿ,ರುದ್ರ ಮಂಡೆಗೆ ಒಡೆಯನಾದಲ್ಲಿಅಂಡು ಆಧಾರ, ಖಂಡಿ ಸ್ಥಿತಿ, ಮಂಡೆ ಮರಣ.ಇಂತೀ ಮೂವರ ಅಂದವನರಿತ ಮತ್ತೆ ಕೊಂಡಾಡಲೇತಕ್ಕೆ?ಬೇರೊಂದು ಲಿಂಗವುಂಟೆಂದು ಮೂವರ ಹಂಗ ಹರಿದಲ್ಲದೆಪ್ರಾಣಲಿಂಗಿಯಲ್ಲನಾರಾಯಣಪ್ರಿಯ ರಾಮನಾಥಾ.