ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಡ ಸತ್ತ ಮುಂಡೆಗೆ ಮೂವರು ಮಿಂಡರು. ಒಬ್ಬಂಗೆ ಅಂಡಿನ ಆಶೆ, ಒಬ್ಬಂಗೆ ಖಂಡಿಯಾಶೆ, ಒಬ್ಬಂಗೆ ಮಂಡೆಯಾಶೆ. ಇಂತೀ ಮೂವರಿಗಾದ ಸೂಳೆ ಸೂಳಕೊಡುವ ಪರಿಯಿನ್ನೆಂತೊ? ಅಂಡಿಗೆ ಖಂಡಿಗೆ ಮಂಡೆಗೆ ದಿಂಡೊಂದೆ ಮೂವರು ಕೊಂದಾಡುತ್ತಿದ್ದರು. ಅಭಿಸಂಧಿಯ ತಿಳಿ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಬ್ರಹ್ಮ ಅಂಡಿಂಗೆ ಒಡೆಯನಾದಲ್ಲಿ, ವಿಷ್ಣು ಖಂಡಿಂಗೆ ಒಡೆಯನಾದಲ್ಲಿ, ರುದ್ರ ಮಂಡೆಗೆ ಒಡೆಯನಾದಲ್ಲಿ ಅಂಡು ಆಧಾರ, ಖಂಡಿ ಸ್ಥಿತಿ, ಮಂಡೆ ಮರಣ. ಇಂತೀ ಮೂವರ ಅಂದವನರಿತ ಮತ್ತೆ ಕೊಂಡಾಡಲೇತಕ್ಕೆ? ಬೇರೊಂದು ಲಿಂಗವುಂಟೆಂದು ಮೂವರ ಹಂಗ ಹರಿದಲ್ಲದೆ ಪ್ರಾಣಲಿಂಗಿಯಲ್ಲ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
-->