ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗಸ್ವರೂಪಕ್ಕೆ ಪಂಚಸೂತ್ರ ಲಕ್ಷಣವನರಿತು ವರ್ತುಳ ಖಂಡಿಕಾದಂಡ ಗೋಮುಖ ಗೋಳಕಾಕಾರವಪ್ಪ ಲಿಂಗಮೂರ್ತಿಯಿಂದ ಶಶಿ ರವಿ ಪವನ ಪಾವಕ ಆತ್ಮ ಮುಂತಾದ ಭೇದಂಗಳನರಿದು ಪಂಚಸೂತ್ರದಿಂದ ಪ್ರಯೋಗಿಸಿ, ಅಚೇತನವಪ್ಪ ಶಿಲೆಯ ಕುಲವಂ ಹರಿದು, ತಾ ಶುಚಿರ್ಭೂತನಾಗಿ ಆ ಇಷ್ಟಲಿಂಗವ ತನ್ನ ಕರಸ್ಥಲದಲ್ಲಿ ಮೂರ್ತಿಗೊಳಿಸಿ ತನು ಕರಗಿ ಮನ ರೆುsುೂಂಪಿಸಿ ಪುಳಕಿತದಿಂದ ಆನಂದಾಶ್ರು ಉಣ್ಮಿ ನಿಧಾನಿಸಿ ನಿಕ್ಷೇಪವ ಕಾಬವನಂತೆ ಬಯಲ ಬಂದಿವಿಡಿವವನಂತೆ ಶಿಲೆಯಲ್ಲಿ ರಸವ ಹಿಳವವನಂತೆ ರತ್ನದ ಕಳೆಯ ಗಂಟನಿಕ್ಕಿ ಕಟ್ಟಿ ತಾಹವನಂತೆ ಮುತ್ತಿನೊಳಗಡಗಿದ ಅಪ್ಪುವಿನ ವಿರಾಳದಿಂದ ಶೋದ್ಥಿಸಿ ಮುಚ್ಚಿತಾಹವನಂತೆ ಜ್ಯೋತಿಗೆ ಪ್ರತಿಹಣತೆಯಿಂದ ಆ ಬೆಳಗ ಮುಟ್ಟಿಸಿ ಕಾಹವನಂತೆ, ಇಂತೀ ನಿರವಯದ ಸುವಸ್ತುವಿನ ಪ್ರಯೋಗದಿಂದ ದಿವ್ಯಪ್ರಕಾಶನ ತನ್ನ ಕರತಳಾಮಳಕದಂತೆ ಮೂರ್ತಿಗೊಂಡಿದ್ದ ಶಿವಲಿಂಗಮೂರ್ತಿಗೆ ಧ್ಯಾನದ ಕೈಯಿಂದ ಆ ಸ್ವರೂಪಕ್ಕೆ ಮೂರ್ತಿಗೊಳಿಸಿ ಷೋಡಶಕಳೆಯಿಂದ ಉಪಚರಿಸಿ ನವಕಳಶ ಪ್ರಯತ್ನ ಪ್ರಯೋಗವ ಮಾಡಿ ಚತುರ್ವಿಧ ಆಚಾರ್ಯರ ಕೂಡಿ ಅಷ್ಟದೆಸೆಗಳಲ್ಲಿ ಕರ್ತೃಕಳಶ ನಾಲ್ಕು, ಭೃತ್ಯಕಳಶ ನಾಲ್ಕು, ಶ್ರೀಗುರುಕಳಶ ಮಧ್ಯದಲ್ಲಿ ನಾಲ್ಕು ವರ್ಣಕ್ರೀ ಮುಂತಾದ ಪ್ರಾಣಲಿಂಗವೆಂದು ಉಪೇಕ್ಷಿಸಿ ಧಾರಣವ ಮಾಡುವಲ್ಲಿ ಗುರು ನಾನೆಂಬುದ ಮರೆದು ಅಹಂಕಾರವ ತೊರೆದು ಆತ್ಮತೇಜವ ಹರಿದು ಮುಂದಣ ತ್ರಿವಿಧ ಸೇವೆಯ ತೋರಿ ಮಂತ್ರಾಬ್ಥಿಷೇಕ ತೀರ್ಥಮಂ ತಳೆದು ಶ್ರೀವಿಭೂತಿಯಲ್ಲಿ ಸರ್ವಾಂಗ ಧೂಳಿತವಂ ಮಾಡಿ ತ್ರಿಕರಣ ಶುದ್ಧವಂ ಮಾಡಿ ಕಪಾಲಕ್ಕೆ ಕರವನಿಟ್ಟಲ್ಲಿ ಪರುಷರಸ ಪಾಷಾಣ ಲೋಹದ ಮೇಲೆ ಬಿದ್ದಂತೆ ನಂಜೇರಿದಂಗೆ ಸಂಜೀವನ ಸಂದ್ಥಿಸಿದಂತೆ ಇಂತೀ ಕಪಾಲಕ್ಕೆ ಕರವನಿಟ್ಟು ಕರ್ಣಕ್ಕೆ ಮಂತ್ರವ ಹೇಳಿದಲ್ಲಿ ಹುಸಿ ಕೊಲೆ ಕುಹಕ ಪಾರದ್ವಾರ ಚೋರತ್ವ ಪಿಸುಣತನವಂಬಿಟ್ಟು ಅರುವತ್ತುನಾಲ್ಕು ಶೀಲ, ಐವತ್ತೆರಡು ನೇಮ, ಮೂವತ್ತರೊಳಗಾದ ನಿತ್ಯಕೃತ್ಯ, ಆರುಸ್ಥಲದೊಳಗಾದ ಆಚಾರ, ಇಪ್ಪತ್ತೈದರೊಳಗಾದ ತತ್ತ್ವ ಇಂತಿವರೊಳಗಾದವರಲ್ಲಿ ಸತ್ವಕ್ಕೆ ತಕ್ಕ ಸಾಮಥ್ರ್ಯದಲ್ಲಿ ನಿಶ್ಚೆ ೈಸಿ ನಡೆಯೆಂದು ಲಿಂಗಧಾರಣವ ಮಾಡುವದಿದು ಗುರುದೀಕ್ಷಾ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 82 ||
--------------
ದಾಸೋಹದ ಸಂಗಣ್ಣ
ತ್ರಿವಿಧಲಿಂಗಕ್ಕೆ ಸೂತ್ರಭೇದ. ಸ್ಥಾವರಲಿಂಗ ಬಾಣಲಿಂಗ ಇಷ್ಟಲಿಂಗಕ್ಕೆ, ಪಂಚಸೂತ್ರದ ತ್ರಿವಿಧಲಿಂಗಕ್ಕೆ ಲಕ್ಷಣಭೇದ. ಚಕ್ರದಂಡಕ್ಕೆ ಖಂಡಿಕಾದಂಡಕ್ಕೆ ಶಕ್ತಿಪೀಠ ಗೋಮುಖಕ್ಕೆ ಪಂಚಾಂಗುಲದಲ್ಲಿ ಪ್ರಥಮಾಂಗುಲದ ರೇಖೆ ಮಧ್ಯದಲ್ಲಿ ಹೇಮ ಪ್ರಥಮ ಅಂಗುಲ ಗತಿ ನಾಲ್ಕರಲ್ಲಿ ಏಕಾದಶ ಪ್ರಕಾರ ಪ್ರಯೋಗದಲ್ಲಿ ಗುಣಿತದ ಸೂತ್ರ ಲೆಕ್ಕ ಪ್ರಯೋಗಿಸಿರೆ ಚಕ್ರದಂಡಭೇದ. ಆ ಅರೆಪ್ರಯೋಗ ಸೂತ್ರ ಖಂಡಿಕಾದಂಡ. ಆ ಉಭಯಭೇದ ಸೂತ್ರಸಂಬಂಧ ಗೋಮುಖ ಸೂತ್ರಾವಟ್ಟ ಪರಿವರ್ತನ ಪ್ರಯೋಗಸಂಬಂಧ. ವಿಸ್ತೀರ್ಣಕ್ಕೆ ದಿಗ್ವಳಯಕ್ಕೆ ಸರ[ಳ]ರೇಖೆ ಶುದ್ಧಪೀಠಿಕಾವಳಯಕ್ಕೆ ಮೇಲೆ ಲಿಂಗಪ್ರಯೋಗ ಚಕ್ರ. ಖಂಡಿಕಾಶಕ್ತಿಪೀಠಕ್ಕೆ ಲಿಂಗಪ್ರಮಾಣ ಲಕ್ಷಣಭೇದ. ಕುಬ್ಜ ದೀರ್ಘ ಹರಿವರಿಯಿಲ್ಲದೆ ಪ್ರಮಾಣ ಪಂಚಸೂತ್ರವಾಗಿ ರವಿ ಶಶಿ ಪವನ ಪಾವಕ ಪವಿತ್ರಯೋಗಿ ರೇಖೆ ಮುಂತಾದ ಲಕ್ಷಣಯುಕ್ತಿಯಲ್ಲಿ ಪ್ರತಿಷೆ* ಶೈವಲಿಂಗಭೇದ. ಆ ಪ್ರಮಾಣುವಿನಲ್ಲಿ ಸ್ಥೂಲಕ್ಕೆ ಸ್ಥೂಲ ಸೂಕ್ಷ್ಮಕ್ಕೆ ಸೂಕ್ಷ್ಮ. ಈ ಸೂತ್ರದಲ್ಲಿ ಬಾಣಲಿಂಗ ಇಷ್ಟಲಿಂಗದ ಲಕ್ಷಣಯುಕ್ತಿ. ಇಂತೀ ಭೇದ ಉತ್ತಮ ಕನಿಷ* ಮಧ್ಯಮವೆಂದು ಸಂಕಲ್ಪಕ್ಕೊಳಗಹ ವೇದಾಂತ ಪ್ರಥಮಪ್ರತಿಷೆ* ಆಚಾರ್ಯನ ಕರ್ಮಕ್ರೀ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ ಆಚಾರ್ಯನಂಗ.
--------------
ಪ್ರಸಾದಿ ಭೋಗಣ್ಣ
-->