ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನವಪಾಷಾಣ ರಸ ಮುಂತಾದ ಔಷಧಿಗಳೆಲ್ಲವೂ ಈ ಮೂರು ಮೂಲಿಕದೊಳಗು. ಇವು ಮತ್ರ್ಯದ ಜೀವರ ಚಿಕಿತ್ಸೆ. ಭಕ್ತಂಗೆ, ನಿಷಾ*ಪರಂಗೆ, ಸುಚಿತ್ತ ನಿರ್ಮಲ ವಿರಕ್ತಂಗೆ, ರೋಗರುಜೆಯಡಸಿದಲ್ಲಿ ತನುವಿಂಗೆ ಕ್ರೀ ಮಾಡಿದಡೂ ದೋಷವಿಲ್ಲ. ಅದೆಂತೆಂದಡೆ : ಉಷ್ಣಕ್ಕೆ ಶೈತ್ಯ ನೆರವಣಿಗೆಯಾದಂತೆ, ಪಂಚಭೌತಿಕದಿಂದಾದ ಶರೀರಕ್ಕೆ ಚಿಕಿತ್ಸೆ, ಅರಿವು ತಲೆದೋರಿದ ರೇತಕ್ಕೆ ಸಾವಧಾನದಲ್ಲಿ ತ್ರಿವಿಧದ ಬಿಡುಗಡೆ. ತ್ರಿವಿಧಕಿತ್ತು ವಸ್ತುವನೊಡಗೂಡಿ ಎಂಯ್ದಿದವಂಗೆ ರೋಗದಡಿಯಲ್ಲಿ ಸತ್ತವನಲ್ಲ, ಮರುಳಶಂಕರರಪ್ರಿಯ ಸಿದ್ಧರಾಮೇಶ್ವರಲಿಂಗದಡಿಯೊಳಗಡಗಿದವಾ.
--------------
ವೈದ್ಯ ಸಂಗಣ್ಣ
-->