ನವಪಾಷಾಣ ರಸ ಮುಂತಾದ ಔಷಧಿಗಳೆಲ್ಲವೂ
ಈ ಮೂರು ಮೂಲಿಕದೊಳಗು. ಇವು ಮತ್ರ್ಯದ ಜೀವರ ಚಿಕಿತ್ಸೆ.
ಭಕ್ತಂಗೆ, ನಿಷಾ*ಪರಂಗೆ, ಸುಚಿತ್ತ ನಿರ್ಮಲ ವಿರಕ್ತಂಗೆ,
ರೋಗರುಜೆಯಡಸಿದಲ್ಲಿ ತನುವಿಂಗೆ ಕ್ರೀ ಮಾಡಿದಡೂ ದೋಷವಿಲ್ಲ.
ಅದೆಂತೆಂದಡೆ :
ಉಷ್ಣಕ್ಕೆ ಶೈತ್ಯ ನೆರವಣಿಗೆಯಾದಂತೆ,
ಪಂಚಭೌತಿಕದಿಂದಾದ ಶರೀರಕ್ಕೆ ಚಿಕಿತ್ಸೆ,
ಅರಿವು ತಲೆದೋರಿದ ರೇತಕ್ಕೆ ಸಾವಧಾನದಲ್ಲಿ ತ್ರಿವಿಧದ ಬಿಡುಗಡೆ.
ತ್ರಿವಿಧಕಿತ್ತು ವಸ್ತುವನೊಡಗೂಡಿ ಎಂಯ್ದಿದವಂಗೆ
ರೋಗದಡಿಯಲ್ಲಿ ಸತ್ತವನಲ್ಲ,
ಮರುಳಶಂಕರರಪ್ರಿಯ ಸಿದ್ಧರಾಮೇಶ್ವರಲಿಂಗದಡಿಯೊಳಗಡಗಿದವಾ.