ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಚಾಚಾರವ ಧರಿಸಿದ ಶರೀರಕ್ಕೆ ಅಷ್ಟೋತ್ತರಶತವ್ಯಾಧಿ ಬಂದಿತ್ತೆಂದು ಕಲ್ಪಿಸಬಹುದೆ ? ಪಾದತೀರ್ಥ ಪ್ರಸಾದವೆಂದು ನೈಷ್ಠಿಕದಲ್ಲಿ ಕೊಂಬ ಜಿಹ್ವೆ, ಔಷಧಿ ಕಷಾಯ ಕೊಂಡಡೆ ಪಂಚಾಚಾರಕ್ಕೆ ದೂರ ಪಾದೋದಕ ಪ್ರಸಾದವಿಲ್ಲ ಇಹಪರಕ್ಕೆ ಸಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಅವರನೊಲ್ಲ.
--------------
ಅಕ್ಕಮ್ಮ
ಪಿಂಡ ಪ್ರಾಣ ಆರೋಗ್ಯಂಗಳ ಚಿಕಿತ್ಸೆಯನರಿದು, ವೈದ್ಯವ ಮಾಡಬಲ್ಲಡೆ ಪಂಡಿತನಪ್ಪ. ಘಟತ್ರಯದ ಭೇದವನರಿದು ಮಾಡುವ ಕ್ರಮವೆಂತುಂಟೆಂದಡೆ : ಕಟಿ ಮೊದಲಾದ ಕೀಳುದೆಸೆಯಲ್ಲಿ ಸಂದಿನ ಭೇದ. ಅಂಗುಲಿ ಸಂದು ಇಪ್ಪತ್ತು, ಮಡಸಂದು ಎರಡು, ಪಚ್ಚಳ ಸಂದು ಎರಡು. ಇಂತೀ ಅಧಮನಾಳದಿಂದ ಕೆಳಗಾದ ನಾಳ ನಾಡಿಗಳ ಸೋಧಿಸಿಕೊಂಡು, ಊಧ್ರ್ವದಂಡದಲ್ಲಿ ಉಭಯಪಕ್ಷದಲ್ಲಿ ಕೆಲವರಿದ ಸಂದು ಅರುವತ್ತಾರು. ಅಂತು ಕೀಳು ಮೊದಲಾದ ಸಂದು ನರ ಇಪ್ಪತ್ತನಾಲ್ಕು. ಅದರಿಂದ ಮೊದಲಾದ ಉಭಯಕರದ ಸಂದು, ಅಂಗುಲಿಯ ಸಂದು ಇಪ್ಪತ್ತಂಟು. ಇಂತೀ ಉಭಯಕರದ ಸಂದಾರು. ಇಂತೀ ಕರದೊಳಗಾದ ಮೂವತ್ತುನಾಲ್ಕರ ಸಂದಿನ ನಾಳನಾಡಿಗಳನರಿದು, ಅದರಿಂದ ಮೇಲೆ ಸಂಪುಟವೆರಡು. ಜಿಹ್ವೆ ಮೊದಲಾದ ಏಳುದ್ವಾರಂಗಳ ಸೋಧಿಸಿಕೊಂಡು, ಕಪಾಲದ ತ್ರಿವಿಧದ ಹೊಲಿಗೆಯ ಕಂಡು, ಅಂಗುಷ್ಟ ತೊಟ್ಟು ವಾಣಾಗ್ರಪರಿಯಂತರದಲ್ಲಿ ಸ್ಥಾನವ ಮುಟ್ಟಿ ನೋಡಿ, ರವಿ ಶಶಿ ಪವನ ಪಾವಕ ಮುಟ್ಟಿ ಎಡೆಯಾಡುವ ಲಕ್ಷಣವ ಕಂಡು, ಅವಕ್ಕೆ ಚಿಕಿತ್ಸೆಯಪ್ಪ ಅನ್ನ ಔಷಧಿ ಪಯಪಾನ ಉದಕ ಮುಂತಾದ ತೆರವನರಿದಡೆ, ಆತನೆ ಇರವನರಿದವ. ಇಂತೀ ಕಾಯಕದ ವೈದ್ಯವ ಮಾಡಬಲ್ಲವ, ಮೇಲನರಿದು ಕೀಳ ಮರೆಯಬಲ್ಲಡೆ, ಆತ ವೈದ್ಯಪಂಡಿತನೆಂಬೆ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವ ಬಲ್ಲವ.
--------------
ವೈದ್ಯ ಸಂಗಣ್ಣ
-->