ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿರಿಗಳೆಲ್ಲ ಕೂಡಿ ಮೇರುಗಿರಿಗೆ ಸರಿಯಾಗಬಲ್ಲವೆ? ತರುಗಳೆಲ್ಲ ಕೂಡಿ ಕಲ್ಪತರುವಿಗೆ ಸರಿಯಾಗಬಲ್ಲವೆ? ಸರಿಯಿಲ್ಲ ನೋಡಾ ನಮ್ಮ ಭಕ್ತರಿಗೆ ನರರು ಸುರರು ಸರಿಯಲ್ಲ ನೋಡಾ! ಪರುಷಕ್ಕೆ ಪಾಷಾಣ ಸರಿಯೆ? ಮರುಜವಣಿಗೆ ಔಷಧ ಸರಿಯೇ? ಇದು ಕಾರಣ, ಶಿವಭಕ್ತರ್ಗೆ ಲೋಕದವರು ಸರಿಯೆಂದರೆ ನರಕ ತಪ್ಪದಯ್ಯಾ, ರಾಮಾನಾಥ.
--------------
ಜೇಡರ ದಾಸಿಮಯ್ಯ
ವೈದ್ಯವೆಂದು ಮಾಡುವಲ್ಲಿ ನಾನಾಮೂಲಿಕೆ, ವನದ್ರವ್ಯ ಸಹ ಮುಂತಾಗಿ, ಲವಣ, ಪಾಷಾಣ, ಲೋಹ, ಪಂಚಸಿಂಧೂರಂಗಳಿಂದ ರಸ ದ್ರವ್ಯ ಮುಂತಾದ ಸಾರಂಗಳ ಕ್ರಮಂಗಳಲ್ಲಿ ಸರ ಸಂದಾನ ವಿಹಂಗ ಮೃಗ ನರ ಮತ್ತಿವರೊಳಗಾದ ನಾನಾ ಜೀವಂಗಳ ನಿಮಿತ್ಯವ ಪ್ರಮಾಣಿಸಿ, ತನ್ನಾತ್ಮಸಿದ್ಧಿಯಾಗಿ, ತಾ ಮಾಡಿದ ಔಷಧ ಪ್ರಸಿದ್ಧವಾಗಿ, ಇಂತಿವ ಪ್ರಮಾಣಿಸಿಕೊಂಡು, ಇದರ ರುಜೆಯ ಪರಿಹರಿಸಿದೆನೆಂಬಲ್ಲಿ, ಅವನ ದೃಷ್ಟಿ ಮುಟ್ಟಿ, ಸತ್ವ ಸಮಾಧಾನ ಅವಗಡಿಸಿದ ವ್ಯಾಧಿಯ ಚಿತ್ತವನರಿದು, ವೈದ್ಯವ ಲಕ್ಷಿಸಬೇಕು. ಅವನ ಶರೀರದ ಕಟ್ಟಳೆಯನರಿದು, ತನ್ನ ಔಷಧಿಯ ದೃಷ್ಟವ ಪ್ರಮಾಣಿಸಿ, ಅವನಂಗದ ಪೃಥ್ವಿಗುಣ, ಅಗ್ನಿಗುಣ, ವಾಯುಗುಣ, ಆಕಾಶಗುಣ, ಇಂತೀ ಪಂಚಗುಣ ಕರತಳನಾಡಿಯಲ್ಲಿದು ಆಡುವ ಐದು ಜೀವದ ಗುಣಮಂ ತಿಳಿದು, ಷಡಾಧಾರಂಗಳ ಸ್ವಸ್ಥಾನಮಂ ಮುಟ್ಟಿ ನೋಡಿ, ಆ ಮನ ವಿರೋಚನಕ್ಕೆ ಪ್ರಮಾಣದಲ್ಲಿ ಪ್ರಮಾಣಿಸಿ, ಸುಮನ ಸುಗತಿಯಲ್ಲಿ ಪಿಂಡ ಪ್ರಾಣಾರೋಗ್ಯದಿಂದ ರುಜೆಯ ಸಂಬಂಧವ ಮುರಿದವ ಪಂಡಿತನಪ್ಪ. ಅದರಂದವ ತಿಳಿದು ಬಂದೆ, ಸರ್ವಾಂಗಲಿಂಗಿಗಳಿಗೆ ಪಂಡಿತನಾಗಿ, ಮೂರ ಮುರಿದು, ಆರನರದು, ಏಳ ಕಿತ್ತು, ಎಂಟು ಗಂಟನಿಕ್ಕಿ, ಈರಾರ ಮಾರಿ, ಹದಿನಾರ ವೇಧಿಸಿ, ಇಪ್ಪತ್ತೈದು ನಷ್ಟವಮಾಡಿ, ಮುೂವತ್ತಾರ ತೂರಿ, ಗಾರುಮಾಡಿ, ಐವತ್ತೆರಡರ ಉಲುಹಿನ ಬಲೆಯ ಹರಿದು, ಸಿಂಧೂರ ಬಂದಿದೆ ಕೊಳಬಲ್ಲಡೆ ಕೊಳಬಾರದೆ ? ಕೊಂಡಡೆ ತ್ರಿವಿಧದ ತೊಟ್ಟು ಬಿಟ್ಟು, ಭವಮಾಲೆಯ ಕಟ್ಟಿದ ಕ್ರಮ ಒಡೆದು, ವಸ್ತುವಿನ ನಿಜನಿಳಯದ ಬಟ್ಟೆಯ ಹೋಹೆ. ಇದು ದೃಷ್ಟ, ಪ್ರಮಥರ ಪ್ರಸನ್ನ ಸಾಕ್ಷಿ. ಎನ್ನ ವೈದ್ಯದ ಕ್ರಮ ಸರ್ವವಿಕಾರದ ಭವಹರಿವ ತೆರ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ವೈದ್ಯ ವೈದ್ಯನಾದ.
--------------
ವೈದ್ಯ ಸಂಗಣ್ಣ
-->