ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ, ನಿನ್ನ ಚಿದಂಗದ ಷಟ್ಸ್ಥಾನಂಗಳಲ್ಲಿ ಎಪ್ಪತ್ತೈದು ತತ್ತ್ವಂಗಳು ಅಡಗಿರ್ಪವಯ್ಯ. ಚಿದ್ಘನಲಿಂಗದ ಷಟ್ಸ್ಥಾನಂಗಳಲ್ಲಿ ಹದಿನೆಂಟು ತತ್ತ್ವಂಗಳು ಅಡಗಿರ್ಪವಯ್ಯ. ಆ ಚಿದಂಗ ಚಿದ್ಘನಲಿಂಗದ ಮಧ್ಯದಲ್ಲಿ ಬೆಳಗುವ ಅಖಂಡ ಮಹಾಜ್ಯೋತಿಪ್ರಣಮದ ಷಟ್ಸ್ಥಾನಂಗಳಲ್ಲಿ ಅಷ್ಟವಿಧತತ್ವಂಗಳು ಅಡಗಿರ್ಪವಯ್ಯ. ಆ ತತ್ವÀಂಗಳ ವಿಭಾಗೆಯೆಂತೆಂದಡೆ: ಪೃಥ್ವೀತತ್ತ್ವ ಇಪ್ಪತ್ತೈದು, ಅಪ್ಪುತತ್ತ್ವ ಇಪ್ಪತ್ತು, ಅಗ್ನಿತತ್ತ್ವ ಹದಿನೈದು, ವಾಯುತತ್ವ ಹತ್ತು, ಆಕಾಶತತ್ತ್ವ ಐದು. ಇಂತು ಎಪ್ಪತ್ತೈದು ತತ್ತ್ವಂಗಳು ಆತ್ಮತತ್ವ ಒಂದರಲ್ಲಿ ಅಡಗಿ, ಇಂಥ ಅನಂತ ಅನಂತ ಆತ್ಮರು ಔದುಂಬರ ವೃಕ್ಷಕ್ಕೆ ಫಲ ತೊಂತಿದೋಪಾದಿಯಲ್ಲಿ ಆ ಚಿದಂಗಕ್ಕೆ ಅನಂತ ಆತ್ಮತತ್ತ್ವಂಗಳು ತೊಂತಿಕೊಂಡಿರ್ಪವು ನೋಡ. ಅಂಥ ಚಿದಂಗ ಹದಿನೆಂಟು ಪ್ರಣಮರೂಪಿನಿಂದ ಚಿದ್ಘನಲಿಂಗವನಾಶ್ರೈಸಿರ್ಪುದು ನೋಡ. ಆ ಚಿದ್ಘನಲಿಂಗವು ಅಷ್ಟವಿಧಸಕೀಲಂಗಳಿಂದ ಅಖಂಡ ಮಹಾಜ್ಯೋತಿಪ್ರಣಮವನಾಶ್ರೈಸಿರ್ಪುದು ನೋಡ. ಇಂತು ನೂರೊಂದು ಸಕೀಲಂಗಳ ತತ್ವರೂಪಿನಿಂದ ತಿಳಿದು ಅಂತು ಅಂಗಲಿಂಗಸಂಗದಲ್ಲಿ ಅಡಗಿರುವ ನೂರೊಂದುತತ್ವ ಸಕೀಲಂಗಳ ನೂರೊಂದುಸ್ಥಲದಲ್ಲಿ ನೆಲೆಗೊಳಿಸಿ ಪರತತ್ವ ಲಿಂಗಲೀಲೆಯಿಂದ ನಿಂದ ನಿಲುಕಡೆಯ ಅನುಗ್ರಹದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಸ್ವತಂತ್ರಮೂರ್ತಿ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
-->