ಅಥವಾ

ಒಟ್ಟು 6 ಕಡೆಗಳಲ್ಲಿ , 4 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊನ್ನಬಿಟ್ಟಡೇನು, ಹೆಣ್ಣಬಿಟ್ಟಡೇನು, ಮಣ್ಣಬಿಟ್ಟಡೇನು, ವಿರಕ್ತನಾಗಬಲ್ಲನೆ ? ಆದ್ಯರ ವಚನಂಗಳ ಹತ್ತುಸಾವಿರವ ಲೆಕ್ಕವಿಲ್ಲದೆ ಓದಿದಡೇನು, ನಿತ್ಯರಾಗಬಲ್ಲರೆ ? ಮಂಡೆಯ ಬೋಳಿಸಿಕೊಂಡು ಅಂದಚಂದಕೆ ತಿರುಗುವ ಜಗಭಂಡರ ಮೆಚ್ಚುವನೆ, ಅಮುಗೇಶ್ವರಲಿಂಗವು ?
--------------
ಅಮುಗೆ ರಾಯಮ್ಮ
ನೈಷಿ*ಕಭಾವ ನಂಬುಗೆ ಇಲ್ಲದ ಬಳಿಕ, ಎಷ್ಟು ಓದಿದಡೇನು ? ಎಷ್ಟು ಕೇಳಿದಡೇನು ? ಎಷ್ಟು ಪೂಜೆಯ ಮಾಡಿದಡೇನು ? ಅದು ನಷ್ಟವಲ್ಲದೆ ದೃಷ್ಟಕ್ಕೆ ಸಂಧಾನವಲ್ಲ ನೋಡಾ. ಇದು ಕಾರಣ, ನೈಷೆ* ಬಲಿದು ಭಾವತುಂಬಿ ನಂಬುಗೆ ಇಂಬುಗೊಂಡು ಮಾಡುವುದೆ ದೇವರಪೂಜೆ. ಅದೇ ನಮ್ಮ ಅಖಂಡೇಶ್ವರಲಿಂಗದ ಒಲುಮೆ.
--------------
ಷಣ್ಮುಖಸ್ವಾಮಿ
ಆಡಿದಡೇನು, ಹಾಡಿದಡೇನು, ಓದಿದಡೇನು ತ್ರಿವಿಧದಾಸೋಹವಿಲ್ಲದನ್ನಕ್ಕರಿ ಆಡದೆ ನವಿಲು ಹಾಡದೆ ತಂತಿ ಓದದೆ ಗಿಳಿ ಭಕ್ತಿುಲ್ಲದವರನೊಲ್ಲ ಕೂಡಲಸಂಗಮದೇವ. 207
--------------
ಬಸವಣ್ಣ
ಓದಿದಡೇನು, ಕೇಳಿದಡೇನು, ಶಿವಪಥವನರಿಯದನ್ನಕ್ಕ ಓದಿತ್ತು ಕಾಣಿರೋ ಶುಕನು, ಶಿವಜ್ಞಾನವನರಿಯದನ್ನಕ್ಕ. ಓದಿದ ಫಲವು ಮಾದಾರ ಚೆನ್ನಯ್ಯಂಗಾುತ್ತು ಕೂಡಲಸಂಗಮದೇವಾ. 143
--------------
ಬಸವಣ್ಣ
ಕೊಂಬಿನಕುರಿಯಂತೆ ಕೂಗಿದಡೇನು, ಲಿಂಗೈಕ್ಯರಾಗಬಲ್ಲರೆ ? ಕೋಟ್ಯಾನುಕೋಟಿಯನೋದಿದಡೇನು, ಸಾತ್ವಿಕರಾಗಬಲ್ಲರೆ ? ಬೆನ್ನುಹುಳಿತ ಕೋಣನಂತೆ ಮನೆಮನೆಯ ತಿರಿದುಂಡಡೇನು, ಮಹಾಜ್ಞಾನಿಯಾಗಬಲ್ಲರೆ ? ಅಮುಗೇಶ್ವರಲಿಂಗವನರಿಯದವರು ಓದಿದಡೇನು ? ಕತ್ತೆ ಬೂದಿಯಲ್ಲಿ ಬಿದ್ದಂತಾಯಿತು.
--------------
ಅಮುಗೆ ರಾಯಮ್ಮ
ವೇದ ನಾಲ್ಕನು ಓದಿದಡೇನು ? ಶಾಸ್ತ್ರವ ನೆರೆ ಕೇಳಿದಡೇನು ? ಶಿವಜ್ಞಾನಹೀನರು ಬಲ್ಲರೆ ಭಕ್ತಿಯ ಪಥವನು ? ಅಲೋಡ್ಯಂ ಚ ಚತುರ್ವೇದೀ ಸರ್ವಶಾಸ್ತ್ರವಿಶಾರದಃ | ಶಿವತತ್ವಂ ನ ಜಾನಾತಿ ದರ್ವೀ ಪಾಕರಸಂ ಯಥಾ || ಕ್ಷೀರದೊಳಗಣ ಸಟ್ಟುಗ ಸವಿಸ್ವಾದುಗಳ ಬಲ್ಲುದೆ ? ಓದಿದ ನಿರ್ಣಯವ ನಮ್ಮ ಮಾದಾರ ಚೆನ್ನಯ್ಯ, ಮಡಿವಾಳಯ್ಯ, ಡೋಹರ ಕಕ್ಕಯ್ಯನವರು ಬಲ್ಲರು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
-->