ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣರೊಡನೆ ಶ್ರವವ ಮಾಡಿ, ಮಾರುಗೋಲ ಬಿಡುವೆನಯ್ಯಾ. ತಾಗಲಿ, ತಪ್ಪಲಿ ಗೆಲವೆನ್ನದೆಂಬೆನಯ್ಯಾ. ಕಳನಿಂದ ಕಡೆಗಳಕ್ಕೆ ಓಡುವೆ, ಕೂಡಲಸಂಗಯ್ಯಾ.
--------------
ಬಸವಣ್ಣ
ನಡೆಯ ಕಂಡಾ ನಂಬಿ, ನುಡಿಯೆಲ್ಲಾ ಉಪಚಾರ ! ಮಿಗಿಲೊಂದು ಮಾತು ಬಂದಡೆ ಸೈರಿಸಲಾರೆನು. ತುಯ್ಯಲಾದಡೆ ಉಂಬೆ, ಹುಯ್ಯಲಾದಡೆ ಓಡುವೆ, ಆಳು ಬೇಡಿದಡೆ ಆಳ್ದನೇನನೀವನಯ್ಯಾ ಆಳಾಗಿ ಹೊಕ್ಕು ಅರಸಾಗಿ ನಡೆದಡೆ, ಆಳಿಗೊಂಡಿತೆನ್ನ ಕೂಡಲಸಂಗನ ಭಕ್ತಿ. 254
--------------
ಬಸವಣ್ಣ
ಹರನೆಂಟಂಗದ ಹರಿಯಲ್ಲಿ ತಿರುಗುವ ನರಪತಿಯನೊತ್ತಿಕೊಂಡ ಕರಿಗಮನೆ ನಾನು. ಇರವರಿಯದವರ ನೋಡುವೆ, ಎನಗೊಲಿದವರ ಕಾಡುವೆ, ಎನ್ನ ಸೋಂಕಿದವರಿಗೆ ಹಾಕುವೆ, ಎನ್ನ ನೆನೆದವರ ಅನುಗೆಡಿಸುವೆ, ನೋಡುವವರ ಕಣ್ಣ ತಿರುಹುವೆ, ನಾಡ ಹಿಡಿದು ನಡೆವವರ ಹಂತಿಯ ಕಟ್ಟಿ ತುಳಿಸಿಹಾಕುವೆ. ನಾನಂಜಿ ಓಡುವೆ ನಿರಂಜನ ಚನ್ನಬಸವಲಿಂಗ ಶರಣರ ಸುಳುಹು ಕಂಡರೆ.
--------------
ದೇಶಿಕೇಂದ್ರ ಸಂಗನಬಸವಯ್ಯ
-->