ಅಥವಾ

ಒಟ್ಟು 21 ಕಡೆಗಳಲ್ಲಿ , 7 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಂಗಮಪ್ರಸಾದ ಮುಂತಾಗಿಯಲ್ಲದೆ ಒಲ್ಲೆನೆಂಬ ಭಕ್ತನ ಕಟ್ಟಳೆಯ ವಿವರ: ಶಿಶು, ಬಂಧುಗಳು, ಚೇಟಿ, ಬೆವಸಾಯವ ಮಾಡುವವರು ಮುಂತಾದ ಇವರಿಗೆಲ್ಲಕ್ಕೂ ಒಡೆಯರಿಗೆ ಸಲುವುದಕ್ಕೆ ಮುನ್ನವೆ ಸೀತಾಳ ಶಿವದಾನವೆಂದು ಇಕ್ಕಬಹುದೆ? ಒಡೆಯರ ಕಟ್ಟಳೆಯಠಾವಿನಲ್ಲಿ ನಿಮ್ಮ ಕೃತ್ಯಕ್ಕೆ ನಿಮ್ಮ ಮನವೆ ಸಾಕ್ಷಿ. ಇದು ದಂಡವಲ್ಲ, ನೀವು ಕೊಂಡ ಅಂಗದ ನೇಮ. ಇದಕ್ಕೆ ನಿಮ್ಮ ಏಲೇಶ್ವರಲಿಂಗವೆ ಸಾಕ್ಷಿ.
--------------
ಏಲೇಶ್ವರ ಕೇತಯ್ಯ
ಒಡೆಯರ ಕಂಡಡೆ ಕಳ್ಳನಾಗದಿರಾ, ಮನವೆ. ಭವದ ಬಾರಿಯ ತಪ್ಪಿಸಿಕೊಂಬಡೆ ನೀನು ನಿಯತನಾಗಿ, ಭಯಭರಿತನಾಗಿ, ಅಹಂಕಾರಿಯಾಗದೆ ಶರಣೆನ್ನು, ಮನವೆ. ಕೂಡಲಸಂಗನ ಶರಣರಲ್ಲಿ ಭಕ್ತಿಯ ನೋನುವಡೆ ಕಿಂಕಿಲನಾಗಿ ಬದುಕು, ಮನವೆ. 275
--------------
ಬಸವಣ್ಣ
ಒಡೆಯರ ಕಟ್ಟಳೆಯೆಂದು ಮಾಡಿಕೊಂಡು ಆಡುವ ತನಕ ಅಂಗಳ ಬಾಗಿಲಲ್ಲಿ ಗುಡಿಗೂರಿ ಎನಬಹುದೆ? ಒಡೆಯರಂತೆ, ಮನೆಗೊಡೆಯನಂತೆ ಗಡಿತಡಿಯಲ್ಲಿ ಕಾಯಲುಂಟೆ? ಅದು ತುಡುಗುಣಿಕಾರರ ನೇಮ. ಒಡೆಯರತ್ತ ನಾವಿತ್ತ. ಗಡಿಗೆಯ ತುಪ್ಪ, ಹೆಡಿಗೆಯ ಮೃಷ್ಟಾನ್ನತುಡುಗುಣಿಯಂತೆ ತಿಂಬವಂಗೆ ಮತ್ತೊಡೆಯರ ಕಟ್ಟಳೆಯೆ? ಇಂತೀ ಕಡುಕರ ಕಂಡು ಅಂಜಿದೆಯಲ್ಲಾ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ?
--------------
ಅಕ್ಕಮ್ಮ
ಒಡೆಯರ ಕಟ್ಟಳೆಯಾದ ಮತ್ತೆ, ಒಡಗೂಡಿ ಸಹಪಂಙÂ್ತಯಲ್ಲಿ ಮೃಡಶರಣನ ಪ್ರಸಾದವ ಕೊಳಲೊಲ್ಲದೆ, ತುಡುಗುಣಿನಾಯಂತೆ ತೊಗಲಗಡಿಗೆಯ ತುಂಬುವ, ಗುರುಪಾತಕರಿಗೆಲ್ಲಿಯದೊ ಒಡೆಯರ ಕಟ್ಟಳೆ? ಒಡೆಯನ ನಿರೀಕ್ಷಣೆಯಲ್ಲಿ ಸರಿಗದ್ದುಗೆಯನೊಲ್ಲದೆ, ಒಡೆಯಂಗೆ ಮನೋಹರವಾಗಿ ಸಡಗರಿಸಿ ಸಮರ್ಪಿಸಿದ ಮತ್ತೆ, ತನ್ನೊಳಗಿಪ್ಪ ಆತ್ಮಂಗೆ ತೃಪ್ತಿ, ಕೂರ್ಮನ ಶಿಶುವಿನ ಸ್ನೇಹದಂತೆ. ಹೀಂಗಲ್ಲದೆ ಭಕ್ತಿ ಸಲ್ಲ. ಎನಗೆ ಪರಸೇವೆ ಪರಾಙ್ಮುಖವೆಂದು, ಒಡೆಯರಿಗೆ ಎಡೆಮಾಡೆಂದು ಎನಗೆ ತಳುವೆಂದಡೆ, ಒಪ್ಪುವರೆ ನಿಜಶರಣರು? ಸತಿ ಕೋಣೆಯಲ್ಲಿದ್ದು, ಪತಿ ನಡುಮನೆಯಲ್ಲಿದ್ದಡೆ ರತಿಕೂಟವುಂಟೆ? ಇದರ ಗಸಣೆಗಂಜಿ, ವಿಶೇಷವನರಿಯದ ಪಶುಗಳಿಗೆಲ್ಲಿಯೂ, [ಐಕ್ಯಾನುಭಾವ], ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಅರ್ಥ ಪ್ರಾಣ ಅಭಿಮಾನದಲ್ಲಿ ವಂಚನೆುಲ್ಲದಿಹುದೆ ಭಕ್ತಿ, ಹೆಚ್ಚು ಕುಂದಿಲ್ಲದಿಹುದೆ ಸಮಯಾಚಾರ, ಜಂಗಮವೆ ಲಿಂಗವೆಂಬುದಕ್ಕೆ ಏನು ಗುಣ ಮನದ ಲಂಪಟತನ ಹಿಂಗದಾಗಿ ಒಡೆಯರ ಬರವಿಂಗೆ ಕುನ್ನಿ ಬಾಲವ ಬಡಿದಡೆ ವೆಚ್ಚವೇನು ಹತ್ತುವುದು ಕೂಡಲಸಂಗಮದೇವಾ 217
--------------
ಬಸವಣ್ಣ
ಹೊಳೆಯ ಹರುಗೋಲಲ್ಲಿಯೆ ಮೆಟ್ಟಡಿಯ ಮೆಟ್ಟಿಹೆನೆಂದು ಚರ್ಮಕ್ಕೆ ಕೊಟ್ಟು ತನ್ನ ಠಾವಿನಲ್ಲಿ ಕಚ್ಚಾಡಲೇತಕ್ಕೆ ? ಆ ಗುಣ ವ್ರತನೇಮಿಗಳಿಗೆ ನಿಶ್ಚಯವೆ ? ಕೊಟ್ಟಲ್ಲಿ ಬೇಯದೆ ತಂದಲ್ಲಿ ನೋಯದೆ ಭಕ್ತರ ಒಡೆಯರ ಚಿತ್ತವಿದ್ದಂತೆ ಅಚ್ಚೊತ್ತಿದಂತಿರಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ನೇಮ ಸಂದಿತ್ತು.
--------------
ಅಕ್ಕಮ್ಮ
ತಾ ನೇಮವ ಮಾಡಿಕೊಂಡು ಕೃಷಿ ಬೇಸಾಯವಿಲ್ಲದೆ ಒಡೆಯರ ಕಟ್ಟಳೆ ಇಷ್ಟು ಅವಧಿಗೊಡಲೆಂದು, ಹೀಗಲ್ಲದೆ ಎನ್ನ ಒಡಲ ಹೊರೆಯೆನೆಂದು, ಹೋದ ಹೋದಠಾವಿನಲ್ಲಿ ಓಗರವನಿಕ್ಕಿಸುವ ಲಾಗಿನ ಶೀಲವಂತರ ಮನದ ಭೇದವ ನೀವೇ ಬಲ್ಲಿರಿ ಏಲೇಶ್ವರಲಿಂಗವೆ.
--------------
ಏಲೇಶ್ವರ ಕೇತಯ್ಯ
ಭಕ್ತರಾಶ್ರಯಕ್ಕೆ ಭಕ್ತರು ಹೋಹಲ್ಲಿ ಅವರ ನಿತ್ಯಕೃತ್ಯವ ವಿಚಾರಿಸಿ, ತಮ್ಮ ನೇಮಕ್ಕೆ ಅವರ ಭಾವವೊಂದಾದಲ್ಲಿ ತಮ್ಮ ಕೃತ್ಯದ ಒಡೆಯರು ಮುಂತಾಗಿ ಹೋಗಬೇಕಲ್ಲದೆ, ಆ ಭಕ್ತರ ಆಶ್ರಯಕ್ಕೆ ಒಡೆಯರ ಕಟ್ಟಳೆ ಉಂಟೆಂದು, ತಮ್ಮ ಒಡೆಯರ ಬಿಟ್ಟು ತುಡುಗುಣಿತನದಲ್ಲಿ ಉಂಬವಂಗೆ_ ಇಂತಿ ಬಿಡುಮುಡಿಯ [ಭ]ಂಡರನೊಪ್ಪ ಏಲೇಶ್ವರಲಿಂಗವು.
--------------
ಏಲೇಶ್ವರ ಕೇತಯ್ಯ
ಸತಿ ಸುತ ಪುರುಷರಿಗೆಲ್ಲಕ್ಕೂ ಬೇರೊಂದು ಒಡಲುಳ್ಳನ್ನಕ್ಕ, ವ್ರತ ಕ್ರೀಭಾವ ಬೇರಾದಲ್ಲಿ ಬೇರೆ ಒಬ್ಬ ಒಡೆಯರ ಕಟ್ಟಣೆ ಬೇಕು. ಇದು ಸತ್ಪಥಕ್ಕೆ ಎಯ್ದುವ ಹಾದಿ, ವ್ರತಸ್ಥಲದ ಭಕ್ತಿಯುಕ್ತಿ, ಏಲೇಶ್ವರಲಿಂಗವ ಮುಟ್ಟುವ ಗೊತ್ತು.
--------------
ಏಲೇಶ್ವರ ಕೇತಯ್ಯ
ಉಂಡವರ ನೋಡಿ, ತಮ್ಮ ಬಂಧುಗಳ ನೋಡಿ, ಅವರು ಜಂಗಮವೆಂದು, ತನ್ನ ಸಂದೇಹದ ಕಟ್ಟಳೆಯವರೆಂದು ಮಾಡುವ ಲಂದಣಿಗರ ಜಗಭಂಡರ ಒಡೆಯರ ಕಟ್ಟಳೆ, ವ್ರತದಂಗದ ಸಂಗವಲ್ಲ, ಏಲೇಶ್ವರಲಿಂಗಕ್ಕೆ ದೂರ.
--------------
ಏಲೇಶ್ವರ ಕೇತಯ್ಯ
ಖಂಡಿತಕಾಯಕದ ವ್ರತಾಂಗಿಯ ಮಾಟದ ಇರವೆಂತೆಂದಡೆ ಕೃತ್ಯದ ನೇಮದ ಸುಯಿದಾನವ ಅಚ್ಚೊತ್ತಿದಂತೆ ತಂದು ಒಡೆಯರ ಭಕ್ತರ ತನ್ನ ಮಡದಿ ಮಕ್ಕಳು ಸಹಿತಾಗಿ ಒಡಗೂಡಿ, ಎಡೆಮಾಡಿ ಗಡಿಗೆ ಭಾಜನದಲ್ಲಿ ಮತ್ತೊಂದೆಡೆಗೆ, ಈಡಿಲ್ಲದಂತೆ, ಬಿಡುಮುಡಿಯನರಿಯದೆ, ಮತ್ತೆ ಇರುಳೆಡೆಗೆಂದಿರಿಸದೆ, ಹಗಲೆಡೆಯ ನೆನೆಯದೆ, ಇಂದಿಗೆ ನಾಳಿಗೆ ಎಂಬ ಸಂದೇಹಮಂ ಬಿಟ್ಟು ಮುಂದಣ ಕಾಯಕ ಅಂದಂದಿಗೆ ಉಂಟು ಎಂಬುದನರಿತು ಬಂದುದ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ ಸದಾನಂದದಲ್ಲಿಪ್ಪ ಭಕ್ತನಂಗಳ ಮಂಗಳಮಯ ಕೈಲಾಸ; ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಬೆಳಗು.
--------------
ಅಕ್ಕಮ್ಮ
ಅನ್ನ-ಉದಕಕ್ಕೆ, ನನ್ನಿಯ ಮಾತಿಗೆ, ಚೆನ್ನಾಯಿತ್ತು ಒಡೆಯರ ಕಟ್ಟಳೆ. ಮಿಕ್ಕಾದವಕ್ಕೆ ಗನ್ನವ ಮಾಡಿ- ಈ ಬಣ್ಣ ಬಚ್ಚಣೆಯ[ಲ್ಲಿ] ನಡೆವ ಕನ್ನಗಳ್ಳರ ಶೀಲ ಇಲ್ಲಿಗೆ ಅಲ್ಲಿಗೆ ಮತ್ತೆಲ್ಲಿಗೂ ಇಲ್ಲ. ಏಲೇಶ್ವರಲಿಂಗವು ಅವರವೊಲ್ಲನಾಗಿ.
--------------
ಏಲೇಶ್ವರ ಕೇತಯ್ಯ
ನೆರಹಿ ಮಾಡುವ ಮಾಟ ಅಘಹರನ ಮುಟ್ಟದು. ಬೇಡಿ ಮಾಡುವ ಮಾಟ ಪುಣ್ಯವೃದ್ಧಿಗೆ ಸಲ್ಲದು. ಕೃತ್ಯಕ್ಕೆ ಒಡೆಯರ ಕಟ್ಟಳೆಯಿಲ್ಲದೆ ಒಲ್ಲೆನೆಂದಡೆ ಮನಮುಟ್ಟದ ಕಟ್ಟಳೆಯ ಗುತ್ತಿಗೆಯ ಹೋದವರುಂಟೆ? ನಿಶ್ಚಯವನರಿಯದ ಕೃತ್ಯವ ಮಾಡಿಕೊಂಡಂತೆ ಮತ್ತೆ ಅದ ಬಿಟ್ಟು ಕೃತ್ಯವಿಲ್ಲದಿರೆ ಮತ್ತೊಂದುವ ಮುಟ್ಟಿದೆನಾದಡೆ ಹೊಟ್ಟೆಯೊಳಗಣ ಸತ್ತ ಕತ್ತೆಯಮರಿಯ ನರಿಯು ತಿಂದು ಮಿಕ್ಕುದ ನಾಯಿತಿಂದಡೆ, ಇದರಚ್ಚುಗಕ್ಕಂಜಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಗೊತ್ತಿಗೆ ಮರೆಯಾದ.
--------------
ಅಕ್ಕಮ್ಮ
ಒಡೆಯರ ಕಂಡಡೆ ಬಡಿವುದಯ್ಯಾ ಬಾಲವನು ಸುನಿ. ಕೊಡುವ ಕೊಂಬುವರ ಕಂಡು ಅವರಡಿಗೆರಗುವರಯ್ಯಾ. ಮೃಡನ ವೇಷವ ತೊಟ್ಟು ಕುರಿಗಳಂತೆ ತಿರುಗುವ ಜಡಜೀವಿಗಳ ಕಂಡಡೆ, ಮೃಡನ ಶರಣರು ಮೋರೆಯನೆತ್ತಿ ನೋಡರು ಕಾಣಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಒಡೆಯರ ಸಮಯಾಚಾರವೆಂದ ಮತ್ತೆ ಹಲ್ಲುಕಡ್ಡಿ, ದರ್ಪಣ, ನಖಚಣ, ಮೆಟ್ಟಡಿ ಮುಂತಾದ ತಾ ಮುಟ್ಟುವ, ತಾ ತಟ್ಟುವ, ಸೋಂಕುವ, ತನ್ನಯ ಸಂದೇಹ ಮುಂತಾದ ದಿಟ ಮೊದಲು ಹುಸಿ ಕಡೆಯಾದ ದ್ರವ್ಯವೆಲ್ಲವನು ಕೊಟ್ಟು ತಾ ಕೊಳ್ಳದಿದ್ದನಾಯಿತ್ತಾದಡೆ ಬೈವುದಕ್ಕೆ ಬಾಯಿ ತೆರಪಿಲ್ಲ ; ಹೊಯ್ವದಕ್ಕೆ ಕೈಗೆ ಅಡಹಿಲ್ಲ. ನೋಡುವ ಕಣ್ಣನೆ ಮುಚ್ಚುವೆ, ಈ ನೋವನಿನ್ನಾರಿಗೂ ಹೇಳೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ, ನೀನೇ ಬಲ್ಲೆ.
--------------
ಅಕ್ಕಮ್ಮ
ಇನ್ನಷ್ಟು ... -->