ಅಥವಾ

ಒಟ್ಟು 6 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗ್ರಾಮ ಪಟ್ಟಣವೈದು ಐದೈದು ನಾಯಕರು ತೋರಿಪ್ಪರದ ಕಂಡು ಪ್ರತ್ಯಯವನು. ಸೀಮೆ ಸಂಬಂಧವನು ಮೀರಿಪ್ಪ ನಾಯಕರು ತಾವು ನಿಂದರು ಗಡಿಯ ಸಂಬಂಧವ ಪರದಳವು ಬರಲಾಗಿ ಅರಿಯದೆ ಇದಿರಾಡಿ ಅರಿತು ಬಿಟ್ಟರು ವೀರದ್ಥೀರರಾಗಿ. ಅರಿವುಮರಹನೆ ನುಂಗಿ ಕುರುಹುಗೆಟ್ಟಾ ಸೀಮೆ ತೆರಹಿಲ್ಲದಾತ [ತಾ] ಪರಮಯೋಗಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ತೆರಹಿನ ಪಟ್ಟಣದ ಪ್ರಭೆಯಿಂತುಟು.
--------------
ಸಿದ್ಧರಾಮೇಶ್ವರ
ಈ ಭುವನದಲ್ಲಿ ಐದು ಜೀನಸಿನ ಐದು ವೃಕ್ಷ. ಆ ಐದು ವೃಕ್ಷಕ್ಕೆ ಐದೈದು ಜೀನಸಿನ ಐದೈದು ಶಾಖೆಗಳು. ಆ ಐದೈದು ಶಾಖೆಗಳಿಗೆ ಐದೈದು ಅಡ್ಡ ಶಾಖೆಗಳು. ಆ ಅಡ್ಡ ಶಾಖೆಗಳಿಗೆ ಅನಂತ ಜೀನಸಿನ ಅನಂತ ಎಲೆಗಳು. ಇಂತಪ್ಪ ಐದು ವೃಕ್ಷಗಳ ಬುಡ ಕೊನಿ ಒಳಗ ಮಾಡಿಕೊಂಡು, ಬುಡ ಕೊನಿ ಇಲ್ಲದ ಬಳ್ಳಿ ಆ ಆ ಜೀನಸಿಗೆ ತಾನು ಆ ಆ ಜೀನಸಾಗಿ ಆ ಗಿಡಯೆಂಬ ಗುರ್ತು ತೋರಿದ ಹಾಗೆ ಮುಸುಕಿಟ್ಟಿಹುದು. ಆ ಮುಸುಕಿಟ್ಟ ಬಳ್ಳಿಯ ಚಿಗುರೆಲೆಯನು ಹರಿಯದೆ, ಆ ವೃಕ್ಷದ ಕೊನರು ಡೊಂಕಿಸದೆ ಆ ಬುಡ ಕೊನಿಯಿಲ್ಲದ ಬಳ್ಳಿಯ ಕಡೆದೆಗೆದ ನಿಮ್ಮ ನಿಜಶರಣನು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಮತ್ತಂ, ಪಡುವ ತೊಡಗಿ ಮೂಡಲತನಕಲಿ ಲಿಂಗಕ್ಕೋಸುಗರಂ, ಬೀದಿಗಳಂ ಬಿಡುವುದಾ ಮೇಲೆ ಮಧ್ಯದಲೆರಡೆರಡು ಬೀದಿಗಳ ನಾಲ್ಕು ನಾಲ್ಕು ಮನೆಗಳನುಳುಹಿ- ಯಾಮೇಲೆ ಇಕ್ಕೆಲಗಳಲ್ಲಾರಾರು ಮನೆಗಳಂ ತೊಡೆವುದದರಿಂ ಮೇಲಣ ಪಂತಿಯಂ ಬಿಟ್ಟುವದರಿಂ ಮುಂದಣಪಂತಿಯಾಚೀಚೆ ಎರಡೆರಡು ಮನೆಗಳಂ ತೊಡೆದು ನಡುವಣ ಪನ್ನೆರಡು ಮನೆಗಳನುಳುಹುವದದರೀಚೆ ಪಂತಿಯಾಚೀಚೆಯ ಮೂರುಮೂರು ಮನೆಗಳಂ ತೊಡೆದು ನಡುವಣ ಪತ್ತುಮನೆಗಳನುಳುವದದರೀಚೆ ಪಂತಿಯಾಚೀಚೆಯೈದೈದು ಮನೆಗಳಂ ತೊಡೆದು ನಡುವಣಾರಾರು ಮನೆಗಳನುಳುಹುವದದರೀಚೆ ಪಂತಿಯಾಚೀಚೆಯಾರಾರು ಮನೆಗಳಂ ತೊಡೆದು ನಡುವಣ ನಾಲ್ಕು ಮನೆಗಳನುಳುಹವದದರೀಚೆ ಪಂತಿಯಾಚೀಚೆಯಾರಾರು ಮನೆಗಳಂ ತೊಡೆದು ಮತ್ತೆಯುಂ, ನಡುವಣ ನಾಲ್ಕುಮನೆಗಳನುಳುಹುವದದರೀಚೆ ಪಂತಿಯಾಚೀಚೆಯ ಐದೈದು ಮನೆಗಳಂ ತೊಡೆದು ನಡುವಣಾರು ಮನೆಗಳನುಳುಹುವದದರೀಚೆ ಪಂತಿಯಾಚೀಚೆ ಮೂರು ಮೂರು ಮನೆಗಳಂ ತೊಡೆದು ಪತ್ತು ಪಂತಿಯನುಳುಹುವದದರೀಚೆ ಪಂತಿಯಾಚೀಚೆಯಾರಾರು ಮನೆಗಳಂ ತೊಡೆದು ನಾಲ್ಕು ಪಂತಿಗಳನುಳುಹುವದಿದುಂ ಲಿಂಗಾಕಾರವಹುದೀ ಈ ಮಹಾಲಿಂಗಂ ಬ್ರಹ್ಮ ವಿಷ್ಣು ಕಾಲರುದ್ರಸಂಜ್ಞೆಯನುಳ್ಳ ರಾಜಸಿ ಸಾತ್ವಿಕಿ ರೌದ್ರಿ ಶಕ್ತಿ ಸಂಜ್ಞೆ ಪೀಠವನುಳ್ಳ ಲಿಂಗವೆ ಬ್ರಹ್ಮವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
-->