ಅಥವಾ

ಒಟ್ಟು 7 ಕಡೆಗಳಲ್ಲಿ , 2 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೀಮೆಯ ಮೀರಿದ ಸಿರಿವಂತನೆ, ಪದವ ಮೀರಿದ ಬಹುರೂಪನೆ, ಆನಂದ ಆನಂದವಾದ ನಿತ್ಯ ಸಾನಂದನೆ, ಸುಗುಣದಲ್ಲಿ ಬೆಳಗುತಿಹ ನಿತ್ಯ ಸಾನಂದನೆಲೆ ಅಯ್ಯಾ, ನಿನ್ನಾನಂದವನಾರು ಬಲ್ಲರು? ನೀನು ಲಿಂಗತ್ರಯದೊಳಗೆ, ಎರಡೈದು ಪಾದೋದಕದ, ಐದಾರು ಕೂಡಿದ ಪ್ರಸಾದದಲ್ಲಿ, ನಿತ್ಯಸುಖಿಯೆಂಬುದ ಸತ್ಯಶುಚಿಯೆಂಬುದ ನಿನ್ನವರೆ ಬಲ್ಲರು. ಜಡವಿಡಿದು ನುಡಿವ ಅಜ್ಞಾನಿ ಹೊರಸುಗಳು ಬಲ್ಲರೆ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ತನುತ್ರಯದಲ್ಲಿ ಘನಂಗ ಪ್ರಾಣಸಂಬಂಧಿಯಾದವರ ತೋರಯ್ಯಾ, ನಿಮ್ಮ ಧರ್ಮ. ಅವಯವಂಗಳೆ ನಿಮ್ಮ ವದನಂಗಳಾಗಿ, ಅರ್ಪಿತವಲ್ಲದ ಅನರ್ಪಿತವ ಕೊಳ್ಳರಾಗಿ, ಐದಾರು ಪ್ರಸಾದದಲ್ಲಿ ಅನುಮಾನವಿಲ್ಲದೆ ನಿತ್ಯರಪ್ಪವರ, ಈರೈದು ಪಾದೋದಕದಲ್ಲಿ ವಿರಳವಿಲ್ಲದೆ ವಿಮಲರಪ್ಪವರ, ನೋಡಿ ಕಂಡೆಹೆನೆಂದಡೆ, ಎನಗೆ ಕಾಣಬಾರದು. ಅವರಿಚ್ಛಾಮಾತ್ರದಲ್ಲಿ ನೀನಿಪ್ಪೆಯಾದಂತೆ, ನಿನಗೆ ಕಾಣಬಹುದು. ಅಲ್ಲದ್ದಡೆ ನಿನಗೆಯೂ ಅಭೇದ್ಯ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮೇಲುಗೆಟ್ಟ ಸೀಮೆ, ತೆರಹುಗೆಟ್ಟ ಬ್ರಹ್ಮ. ಐದಾರು ಕಣೆಯದಿಂ ಮೇಲೆ ದುರ್ಗ. ಕಾಲಾಳು ನಾಯಕರು, ಮೇಲೆ ರಥಪಾಯಕರು, ಆರೈದು ಓರಂತೆ ದುರ್ಗದಲ್ಲಿ. ಧಾರುಣಿಯ ಕಳ್ಳರಿಗೆ ತಾನಂಜಿ ದುರ್ಗದೊಳು ಓರಂತೆ ಅಡಗಿರ್ದಾತ, ಶ್ರೀಮಲ್ಲಿಕಾರ್ಜುನ.
--------------
ಮಲ್ಲಿಕಾರ್ಜುನ ಪಂಡಿತಾರಾಧ್ಯ
ತನುತ್ರಯದ ಗುಣದಲ್ಲಿ ತಾಮಸಿಯಲ್ಲ ಬಸವಣ್ಣ; ಮನತ್ರಯದಲ್ಲಿ ಮತ್ತನಲ್ಲ ಬಸವಣ್ಣ; ಮಲತ್ರಯದಲ್ಲಿ ಮಗ್ನನಲ್ಲ ಬಸವಣ್ಣ; ಲಿಂಗತ್ರಯದಲ್ಲಿ ನಿಪುಣ ಬಸವಣ್ಣ; ಐದಾರು ಪ್ರಸಾದದಲ್ಲಿ ಪ್ರಸನ್ನ ಬಸವಣ್ಣ; ಈರೈದು ಪಾದೋದಕದಲ್ಲಿ ಪ್ರಭಾವ ಬಸವಣ್ಣ; ಎರಡು ಮೂರು ಭಕ್ತಿಯಲ್ಲಿ ಸಂಪನ್ನ ಬಸವಣ್ಣ; ಮೂವತ್ತಾರು ತತ್ತ್ವದಿಂದತ್ತತ್ತ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ, ಫಲಪದಕ್ಕೆ ದೂರವಾದನಯ್ಯಾ ನಮ್ಮ ಬಸವಣ್ಣನು.
--------------
ಸಿದ್ಧರಾಮೇಶ್ವರ
ಐದಾರು ಏಳೆಂಟೆಂದೆಂಬ ಬಲೆಯಲ್ಲಿ ಸಿಲಿಕಿ ಎಯ್ದೆಗಾರಾಗುತ್ತಲಿದ್ದೇನೆ. ಮೀರಲಾರೆನು ಕರ್ಮಂಗಳನು ಹಾರು ಮಾಡಿಹವು ಎನ್ನ ಬೇರೆ ಮತ್ತೊಂದು ಉಳ್ಳಡೆ ತೋರಾ. ಸಾರುವ ಶ್ರುಗಳಿಗಿಂದತ್ತಲಾದ ಮಹಾಘನ ನೀನು ನೀರ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ತಂದೆ.
--------------
ಸಿದ್ಧರಾಮೇಶ್ವರ
ತಟ್ಟುವ ಮುಟ್ಟುವ ಭೇದವನೊಲ್ಲ ; ಅದೇನು ಕಾರಣ? ಐದಾರು ಪ್ರಸಾದದಲ್ಲಿ ಈರೈದು ಪಾದೋದಕದ್ಲ ಸಂಪನ್ನನಾಗಿ ಅವನ ಲಿಂಗತನುವೆನ್ನರಿ ಕಂಡಿರೆ, ಅದು ಪ್ರಸಾದತನು. ಆತನ ಮಸ್ತಕದಲ್ಲಿ ಒಪ್ಪಿಪ್ಪ ಲಿಂಗದ ಗುಣಂದ, ಆತನು ಲಿಂಗತನುವಾದನೈಸಲ್ಲದೆ ಆತನು ಸಾಕ್ಷಾತ್‍ಪ್ರಸಾದತನು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಮೂರರಿಂದಂ ಮುನ್ನ, ಮೂರರಿಂದಂ ಹಿಂದೆ, ತೋರಿಪ್ಪುದಾರರು ಅತ್ಯ್ಕತಿಷ್ಯ. ಐದಾರು ಏಳೆಂಟತಿಗಳೆಯ ಬಲ್ಲಡೆ, ತಾನು ಚಿದ್ರೂಪ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
-->