ಅಥವಾ

ಒಟ್ಟು 9 ಕಡೆಗಳಲ್ಲಿ , 4 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಮೀಸಲ ಬೀಸರ ಮಾಡಿದೆಯಲ್ಲಯ್ಯ. ಎನ್ನ ಮೀಸಲ ಬೀಸಾಡಿ ಕಳೆದೆಯಲ್ಲಯ್ಯ. ಎನ್ನ ಭಾಷೆಯ ಪೈಸರ ಮಾಡಿದೆಯಲ್ಲಯ್ಯ. ಎನ್ನ ಭಾಷೆಗೆ ದೋಷವ ತೋರಿಸಿದೆಯಲ್ಲಯ್ಯ. ಎನ್ನ ಮೀಸಲ ಕಾಯವ ನಿಮಗೆಂದಿರಿಸಿಕೊಂಡಿದ್ದಡೆ, ಬೀಸಾಡಿ ಕಳೆವರೆ ಹೇಳಾ ತಂದೆ ? ಏಸು ಕಾಲ ನಿಮಗೆ ನಾನು ಮಾಡಿದ ತಪ್ಪ ಈ ಸಮಯದಲ್ಲಿ ಹೊರಿಸಿ ಕೊಂದೆಯಲ್ಲಾ ಚೆನ್ಮಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ವೃಕ್ಷಾಶ್ರಮ(ಯ?)ದಲ್ಲಿದ್ದು ಭಿಕ್ಷಾಪರಿಣಾಮಿಯಾಗಿದ್ದರೇನು ? ಸುತ್ತಳಿದು ಬತ್ತಲೆಯಿದ್ದರೇನು ? ಕಾಲರಹಿತನಾದಡೇನು ? ಕರ್ಮರಹಿತನಾದರೇನು ? ಕೂಡಲಚೆನ್ನಸಂಗನ ಅನುಭಾವವನರಿಯದವರು ಏಸು ಕಾಲವಿದ್ದರೇನು ? ವ್ಯರ್ಥಕಾಣಿರೋ !
--------------
ಚನ್ನಬಸವಣ್ಣ
ಕಾಮಾ, ನಿನ್ನ ಬಿಲ್ಲಾಳುತನುವನು, ಎಸುಗೆಯನು ನೋಡುವೆನು. ಕೇಳೆಲವೊ, ಕುಸುಮಶರವನು ತೊಡು ನೀನು, ಏಸು, ನಿನ್ನೆಸುಗೆಯ ನೋಡುವೆನು ಕೇಳಾ. ಎನಗೂ ಉರಿಲಿಂಗದೇವಗೂ ತೊಟ್ಟೆಸು, ಎಸಲು ನೀ ಬಿಲ್ಲಾಳಹೆಯಾ ಕಾಮಾ.
--------------
ಉರಿಲಿಂಗದೇವ
ಉಣ್ಣೆ ಕೆಚ್ಚಲ ಹತ್ತಿದ್ದರೇನು ಕ್ಷೀರವದಕುಂಟೆ? ತಗಣಿ ತನುವ ಹತ್ತಿದ್ದರೇನು ಅಂಗನೆಯರ ಸುರತದ ಸುಖವ ಬಲ್ಲುದೆ? ಗಿಳಿ ಓದಿದರೇನು ಲಿಂಗವೇದಿಯಪ್ಪುದೆ? ಹೇಸರ ಏಸು ದೊಡ್ಡದಾದರೇನು ತೇಜಿಯಾಗಬಲ್ಲುದೆ? ತತ್ವದ ಮಾತು ಅಂಗಸಂಗಿಗಳಿಗೇಕೆ? ಭರ್ಗನ ಸಂಗ ಭವಿಗೇಕೆ? ಪಚ್ಚೆಯ ಪವಳದ ಗುಡಿಗೂಡಾರವೇಕೆ ಗೂಗೆಗೆ? ಗವುಡರ ಮನೆಯ ತೊತ್ತಿಂಗೆ ಬಲ್ಲಹನಾಣೆಯೇಕೆ? ಕೀಳು ಕುಲದೈವಕ್ಕೆರಗಿ ನರಕಕ್ಕಿಳಿವ ದುರಾಚಾರಿಗಳಿಗೆ ಶಿವಾಚಾರವಳಡುವುದೆ, ಕೂಡಲಚೆನ್ನಸಂಗಮದೇವಾ?
--------------
ಚನ್ನಬಸವಣ್ಣ
ಅರಿದೊಡೆ ಶರಣ, ಮರೆದೊಡೆ ಮಾನವ. ಪಾತಕನು, ಹೊಲೆಯನು, ನಾನೇತಕ್ಕೆ ಬಾತೇ ? ಹೊತ್ತಿಂಗೊಂದೊಂದು ಪರಿಯ ಗೋಸುಂಬೆಯಂತೆ ಈಶನ ಶರಣರ ಕಂಡುದಾಸೀನವ ಮಾಡುವ ದಾಸೋಹವನರಿಯದ ದೂಷಕನು ನಾನಯ್ಯ. ಏಸು ಬುದ್ಧಿಯ ಹೇಳಿ ಬೇಸತ್ತೆನೀ ಮನಕೆ, ಈಶ ನೀ ಸಲಹಯ್ಯಾ, ಉರಿಲಿಂಗತಂದೆ.
--------------
ಉರಿಲಿಂಗದೇವ
ವೃಕ್ಷಾಶ್ರಮ(ಯ?)ದಲ್ಲಿದ್ದು ಭಿಕ್ಷಾಪರಿಣಾಮಿಯಾಗಿದ್ದರೇನು? ಸುತ್ತಳಿದು ಬತ್ತಲೆಯಿದ್ದರೇನು? ಕಾಲರಹಿತನಾದಡೇನು? ಕರ್ಮರಹಿತನಾದರೇನು? ಕೂಡಲಚೆನ್ನಸಂಗನ ಅನುಭಾವವನರಿಯದವರು ಏಸು ಕಾಲವಿದ್ದರೇನು? ವ್ಯರ್ಥಕಾಣಿರೋ !
--------------
ಚನ್ನಬಸವಣ್ಣ
ಗಿರಿಯ ಶಿಖರದ ಮೇಲೆ ಕುಳಿತುಕೊಂಡು, ಜಡೆಯನೇರಿಸಿಕೊಂಡು ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗದೊಡನೊಡನೆ ಸವೆದ ಪಾಷಾಣ ! ನಮ್ಮ ಕೂಡಲಸಂಗನ ಶರಣರ ಪ್ರಸಾದಜೀವಿಗಳಲ್ಲದವರು ಏಸು ಕಾಲವಿರ್ದಡೇನು, ಅದರಂತು ಕಾಣಿರಣ್ಣಾ.
--------------
ಬಸವಣ್ಣ
ಕೂರ್ತಾಗ ಭಕ್ತ, ಮುನಿದಾಗ ಮಾನವ, ಪಾತಕ ನಾನೇತಕ್ಕೆ ಬಾತೆ ? ಗೋಸುಂಬೆಯಂತೆ ಎನ್ನ ಮನ ಗಳಿಗೆಗೊಂದು ಪರಿ ! ಈಶ್ವರಾ, ನಿಮ್ಮ ಭಕ್ತರ ಉದಾಸೀನವ ಮಾಡಿ ದಾಸೋಹವಿಲ್ಲದ ಅತಿದೂಷಕ ದ್ರೋಹಿ, ನಾನಯ್ಯಾ ! ಬೇಸತ್ತೆನೀ ಮನಕ್ಕೆ, ಏಸು ಬುದ್ಧಿಯ ಹೇಳಿದಡೂ ಕೇಳುದು, ಈಶಾ, ಸಂತೈಸಯ್ಯಾ, ಉರಿಲಿಂಗದೇವಾ.
--------------
ಉರಿಲಿಂಗದೇವ
ಹುತ್ತಕ್ಕೆ ಏಸು ಬಾಯಾದಡೇನು ಸರ್ಪನಿಪ್ಪುದು ಒಂದೇ ಸ್ಥಾನ ! ಭಾವ ಭಾವಿಸಿ ಭ್ರಮೆಯಳಿದು ನೋಡಾ; ಆ ಭಾವ ಭಾವಿಸಲು ನಿರ್ಭಾವ ಕೂಡಲಸಂಗಮದೇವಾ.
--------------
ಬಸವಣ್ಣ
-->