[ಶ್ಲೋಕ]:`ಕೌಶಿಕೋ ಕಾಶ್ಯಪಶ್ಚೈವ ಭರಧ್ವಾಜಾತ್ರಿರೇವ ಚ| ಗೌತಮಶ್ಚೇತಿ
ಪಂಚೈತೇ ಪಂಚವಕ್ತ್ರೇಷು ದೀಕ್ಷಿತಾಃ || ಎಂದುದಾಗಿ ಕೌಶಿಕ ಕಾಶ್ಯಪ ಭಾರದ್ವಾಜ
ಅತ್ರಿ ಗೌತಮರುಗಳೆಂಬ ಐವರು ಶಿವನ ಪಂಚಮುಖದಲ್ಲಿ
ದೀಕ್ಷಿತರಾಗಿದ್ದಂಥವರುಗಳು. `ಏತೇಷಾಂ ಋಷಿವಂಶೇಷು ಜಾತಾಸ್ತೇಷು ಶಿವದ್ವಿಜಾಃ'
ಎಂದು ಈ ಕೌಶಿಕಾದಿ ಋಷಿಗಳ ವಂಶದಲ್ಲಿ ಹುಟ್ಟಿದವರುಗಳು
ಶಿವಬ್ರಾಹ್ಮಣರೆನಿಸಿಕೊಂಬರು, ಶಾಂತವೀರೇಶ್ವರಾ.