ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಗೆ ಇಂದ್ರನೀಲಲಿಂಗ, ಬ್ರಹ್ಮಂಗೆ ಶೈಲಲಿಂಗ, ಶಕ್ರಂಗೆ ಮಣಿಮಯಲಿಂಗ, ಸೂರ್ಯಂಗೆ ತಾಮ್ರಲಿಂಗ, ಸೋಮಂಗೆ ಮೌಕ್ತಿಕಲಿಂಗ, ಕುಬೇರಂಗೆ ಹೇಮಲಿಂಗ, ನಾಗರ್ಕಳಿಗೆ ಪವಳದ ಲಿಂಗ, ಅಷ್ಟವಸುಗಳಿಗೆ ಕಂಚಿನ ಲಿಂಗ, ವರುಣಂಗೆ ರತ್ನದ ಲಿಂಗ, ನೈರುತ್ಯಂಗೆ ಪರುಷದ ಲಿಂಗ, ವಾಯವ್ಯಗೆ ಹಿತ್ತಾಳಿಯ ಲಿಂಗ, ಕಾಮಂಗೆ ಕುಸುಮ ಲಿಂಗ, ಋಷಿಗಳಿಗೆ ಪರ್ವತದ ಲಿಂಗ, ಅಸುರರಿಗೆ ಕಬ್ಬುನದ ಲಿಂಗ, ದಶರಥಗೆ ಸುವರ್ಣದ ಲಿಂಗ, ಅಶ್ವಿನಿಗೆ ಕರಪಾತ್ರೆಯ ಲಿಂಗ, ಅಂತಕಂಗೆ ಪರಿಪರಿಯ ಲಿಂಗ, ಗಾಯತ್ರಿಗೆ ಮರಕತದ ಲಿಂಗ, ಚಾಮುಂಡಿಗೆ ವಜ್ರದ ಲಿಂಗ, ಭೂದೇವಿಗೆ ಪಚ್ಚದ ಲಿಂಗ, ದುರ್ಗಿಗೆ ಕನಕದ ಲಿಂಗ, ಸಪ್ತಮಾತೃಕೆಯರಿಗೆ ಮಳಲ ಲಿಂಗ, ಇದೆಂತೆಂದಡೆ: ಇಂದ್ರನೀಲಮಯಂ ಲಿಂಗಂ ವಿಷ್ಣುಃ ಪೂಜಯತೇ ಸದಾ ವಿಷ್ಣುತ್ವಂ ಪ್ರಾಪ್ಯತೇ ತೇನ ಸಾದ್ಭುತೈಕಂ ಸನಾತನಂ ಬ್ರಹ್ಮಾ ಪೂಜಯತೇ ನಿತ್ಯಂ ಲಿಂಗಂ ಶೈಲಮಯಂ ಶುಭಂ ತಸ್ಯ ಸಂಪೂಜನಾದೇವ ಪ್ರಾಪ್ತಂ ಬ್ರಹ್ಮತ್ವಮುತ್ತಮಂ ಶಕ್ರೋ[s]ಪಿ ದೇವ ರಾಜೇಂದ್ರೋ ಲಿಂಗಂ ಮೃಣ್ಮಯಂ ಶುಭಂ ಭಕ್ತ್ಯಾ ಪೂಜಯತೇ ನಿತ್ಯಂ ತೇನ ಶಕ್ರತ್ವಮಾಪ್ನುಯಾತ್ ತಾಮ್ರಲಿಂಗಂ ಸದಾಕಾಲಂ ಭಕ್ತ್ಯಾ ದೇವೋ ದಿವಾಕರಃ ತ್ರಿಕಾಲಂ ಯಜತೇ ತೇನ ಪ್ರಾಪ್ತಂ ಸೂರ್ಯತ್ವಮುತ್ತಮಂ ಮುಕ್ತಾಫಲಮಯಂ ಲಿಂಗಂ ಸೋಮಃ ಪೂಜಯತೇ ಸದಾ ತೇನ ಸೋಮೇನ ಸಂಪ್ರಾಪ್ತಂ ಸೋಮತ್ವಂ ಸತತೋಜ್ವಲಂ ಲಿಂಗ ಹೇಮಮಯಂ ಕಾಂತಂ ಧನದೋ[s]ರ್ಚಯತೇ ಸದಾ ತೇನ ಸಾಧನತೋ ದೇವಃ ಧನದತ್ವಮವಾಪ್ತವಾನ್ ವಸವಃ ಕಾಂಸ್ಯಕಂ ಲಿಂಗಂ ಪೂಜ್ಯ ಕಾಮಾನವಾಪ್ನುಯಾತ್ ನಾಗಾಃ ಪ್ರವಾಳಜಂ ಲಿಂಗಂ ಪೂಜ್ಯ ರಾಜ್ಯಾನಿ ಲೇಬ್ಥಿರೇ ಲಿಂಗಂ ರತ್ನಮಯಂ ಚಾರು ವರುಣೋಡಿರ್ಚಯತೇ ಸದಾ ತೇನ ತದ್ವರುಣತ್ವಂ ಹಿ ಪ್ರಾಪ್ತಂ ಭದ್ರಸಮನ್ವಿತಂ ಲಿಂಗಮಧ್ಯೇ ಜಗತ್ಸರ್ವಂ ಸರ್ವಂ ಲಿಂಗೇ ಪ್ರತಿಷ್ಠಿತಂ ತಸ್ಮಾತ್ ಸಂಪೂಜಯೇಲ್ಲಿಂಗಂ ಯದಿ ಚೇತ್ಸಿದ್ಧಿಮಾತ್ಮನಃ ಐವಂ ದೇವಾಶ್ಚ ಗಂಧರ್ವಾ ಯಕ್ಷೋರಗರಾಕ್ಷಸಾಃ ಪೂಜಯಂತಿ ಸದಾಕಾಲಮೀಶಾನಂ ಸುರನಾಯಕಂ ಬ್ರಹ್ಮಾವಿಷ್ಣುಸ್ತಥಾ ಶಕ್ರೋ ಲೋಕಪಾಲಾಶ್ಚ ದೇವತಾಃ ಲಿಂಗಾರ್ಚನರತಾ ಹ್ಯೇತೇ ಮಾನುಷೇಷು ಚ ಕಾ ಕಥಾ ? ಇಂತೆಂದುದಾಗಿ ಸುರಪ ಹರಿ ವಿರಂಚಿ ಗಂಧರ್ವ ಯಕ್ಷ ರಾಕ್ಷಸ ಋಷಿ ದೇವತೆಗಳೆಲ್ಲರೂ ಲಿಂಗವ ಪೂಜಿಸಿ ಇಷ್ಟಕಾಮ್ಯಸಿದ್ಧಿಯ ಪಡೆದು ಭವಭಾರಿಗಳಾದರು. ಸೌರಾಷ್ಟ್ರ ಸೋಮೇಶ್ವರನ ಶರಣರು ಫಲಪದಂಗಳ ಮೀರಿ ಅರಿಕೆಯರತು ಬಯಕೆ ಬರತು ಹುಟ್ಟುಗೆಟ್ಟು ಭವಹಿಂಗಿ ಅಭಂಗರಾದರು
--------------
ಆದಯ್ಯ
ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಬ್ರಹ್ಮಂಗೆ ಬ್ರಹ್ಮಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ವಿಷ್ಣುವಿಂಗೆ ವಿಷ್ಣುಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ದೇವತೆಗಳಿಗೆ ದೇವಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿ ಸ್ನಾನವ ಮಾಡಿದ ಋಷಿಗಳಿಗೆ ಋಷಿಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಗಂಧರ್ವರುಗಳಿಗೆ ಗಂಧರ್ವಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ರುದ್ರಗಣರಿಗೆ ರುದ್ರಗಣಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಯಕ್ಷರಿಗೆ ಯಕ್ಷಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಕಿನ್ನರರಿಗೆ ಕಿನ್ನರಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಅಮರಗಣರಿಗೆ ಅಮರಗಣಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಪಿತೃಗಣರಿಗೆ ಪಿತೃಗಣಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಭೂತಗಣರಿಗೆ ಭೂತಗಣಪದವಾಯಿತ್ತು. ಅದೆಂತೆಂದೊಡೆ : ``ಬ್ರಹ್ಮವಿಷ್ಣ್ವಾದಿದೇವಾ ಋಷಯೋ ಗಂಧರ್ವಾ ಯಕ್ಷಕಿನ್ನರಾಃ | ಮರುದ್‍ಗಣಾಃ ಪಿತೃಗಣಾಃ ಸರ್ವೇ ಭೂತಗಣಾ ಅಪಿ | ನಿತ್ಯಂ ಚ ಸರ್ವಯತ್ನೇನ ಭಸ್ಮಸ್ನಾನಂ ಪ್ರವರ್ತತೇ ||'' ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯ ಮಹತ್ವವ ಕಂಡು ಕೇಳಿ ನಂಬಲರಿಯದೆ ಗರ್ವದಿಂದೆ ಮುಂದುಗೆಟ್ಟ ಮರುಳಮಾನವರಿಗೆ ಭವರಾಟಾಳದಲ್ಲಿ ಸತ್ತು ಸತ್ತು ಹುಟ್ಟಿ ಹುಟ್ಟಿ ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->