ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗತ್ಪ್ರಪಂಚ ಮಾಡಿ, ಆ ಜಗದಲ್ಲಿ ಜೀವರೂಪಿಂದ ಬಳಿಸಂದನೆಂದು ಹೇಳುವ ಶ್ರುತಿಯಂತಿರಲಿ, ಜೀವನೆ ಶಿವನಾದಡೆ ಶೋಕ ಮೋಹ ಋಣ ರೋಗ ಪುಣ್ಯ ಪಾಪ ಕಾಲ ಕಲ್ಪಿತ ಪ್ರಳಯ ಪ್ರಕೃತಿ ಸಂಸಾರಪಾಶಬದ್ಧವುಂಟೆ? ಇವೆಲ್ಲವೂ ಜೀವಂಗಲ್ಲದೆ ಶಿವಂಗಿಲ್ಲವಾಗಿ ತ್ರಿಗುಣರಹಿತ ಸೌರಾಷ್ಟ್ರ ಸೋಮೇಶ್ವರನು.
--------------
ಆದಯ್ಯ
ಹಡಪ ಚಾಮರ ಸುರಗಿ ರಜಬೋವರಿಗೆ ಧೂಪ ವಚನ ಕನ್ನಡಿ ಗುಂಡಿನಕಾಯಕವೆಂಬ ಮಂದಚಾರಿಗಳು ನೀವು ಕೇಳಿರೊ. ಒಡಲಾಸೆಯಳಿದುದೆ ಹಡಪದಕಾಯಕ. ಚಂಚು ವಂಚನೆಯ ಬಿಟ್ಟುದೆ ಚಾಮರದಕಾಯಕ. ಪರವನಿತೆಯರ ಆಸೆಯಳಿದುದೆ ಸುರಗಿಯಕಾಯಕ. ಋಣ ರುಜೆಯಿಲ್ಲದುದೆ ರಜಬೋವರಿಗೆಕಾಯಕ. ದುಸ್ಸಂಗ ದುಸ್ವಪ್ನ ದುರ್ವಾಸನೆಯಳಿದುದೆ ಧೂಪದಕಾಯಕ. ರಚ್ಚೆ ರಚನೆಯಳಿದುದೆ ವಚನಕಾಯಕ. ಪರವಧುವ ನೋಡದಿಪ್ಪುದೆ ಕನ್ನಡಿಯಕಾಯಕ. ತೊಂಡು ತೊಳಸು ಮುಂಡು ಮುರುಹು ಭಂಡ ಬೂತು ದಿಂಡೆಯತನ ಕೊಂಡೆಯವಳಿದುದೆ ಗುಂಡಿಗೆಯಕಾಯಕ. ಇಂತಲ್ಲದೆ ಕಂಡಕಂಡವರ ಕೊಂಡಾಡದೆ ಇದ್ದರೆ ಬಂಡುಗೆಲವ ಮಂಡ ಮೂಕೊರೆಯ ಭಂಡ ಬಹುಕಳ್ಳರಿಗೆ ಕಾಯಕ ಸಲ್ಲದು. ಭಕ್ತಿ ಮುಕ್ತಿಯಿಲ್ಲ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಮರೆದೊರಗಿ, ಕನಸ ಕಂಡು ಹೇಳುವಲ್ಲಿ ಸತ್ತ ಹೆಣ ಎದ್ದಿತ್ತು. ತನ್ನ ಋಣ ನಿಧಾನ ಎದ್ದು ಕರೆಯಿತ್ತು. ಹೆಪ್ಪಿಟ್ಟ ಹಾಲು ಗಟ್ಟಿತುಪ್ಪಾಗಿ ಸಿಹಿಯಾಯಿತ್ತು. ಇದಕ್ಕೆ ತಪ್ಪ ಸಾಧಿಸಲೇಕೆ ಚೆನ್ನಮಲ್ಲಿಕಾರ್ಜುನದೇವರ ದೇವನಣ್ಣಗಳಿರಾ ?
--------------
ಅಕ್ಕಮಹಾದೇವಿ
-->