ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊರ ಹೊರಗಣ ಮನೆಯೊಳಗೊಂದು ಉರಿಗಣ್ಣು ಹುಟ್ಟಿ, ಈರೇಳುಲೋಕವ ನುಂಗಿ ಊರೆಲ್ಲವ ಸುಟ್ಟಿತ್ತು ನೋಡಾ. ಊರ ಸುಟ್ಟ ಉರಿಗಣ್ಣು ಅದು ಆರಿಗೂ ಕಾಣಬಾರದು. ಅದು ಮಾರಾರಿ ತಾನೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆರೂ ಇಲ್ಲದ ಅರಣ್ಯಕ್ಕೆ ಪೋಗಿ, ನಾನಾ ವರ್ಣದ ಕಟ್ಟಿಗೆಯ ತಂದು, ಸೂರ್ಯವರ್ಣದ ಕಟ್ಟಿಗೆಯಿಂದ ಗಳಿಗೆಯ ಬಂಧಿಸಿ, ಚಂದ್ರವರ್ಣದ ಕಟ್ಟಿಗೆಯಿಂದ ಗುಮ್ಮಿಯ ಬಂಧಿಸಿ, ಅಗ್ನಿವರ್ಣದ ಕಟ್ಟಿಗೆಯಿಂದ ಬುಟ್ಟಿಯ ಬಂಧಿಸಿ, ಉಳಿದ ವರ್ಣದ ಕಟ್ಟಿಗೆಯಿಂದ ತಟ್ಟಿ, ಹೆಡಗಿಯ ಬಂಧಿಸಿ, ಜ್ಯೋತಿವರ್ಣದ ಕಟ್ಟಿಗೆಯಿಂದ ಊರೆಲ್ಲವ ಬಂಧಿಸಿ, ಇಂತೀ ಪದಾರ್ಥವ ಮಾರಿ, ಕಾಯಕವ ಮಾಡುತಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->