ಅಥವಾ

ಒಟ್ಟು 4 ಕಡೆಗಳಲ್ಲಿ , 2 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗಪೂಜೆಯುಳ್ಳನ್ನಕ್ಕ ಲಿಂಗವಿಲ್ಲ. ಲಿಂಗದ ನೆನವು ಉಳ್ಳನ್ನಕ್ಕ ಲಿಂಗವಿಲ್ಲ. ಲಿಂಗವ ಕೂಡಬೇಕು, ಲಿಂಗವನರಿಯಬೇಕೆಂಬನ್ನಕ್ಕ ಲಿಂಗವಿಲ್ಲ. ಲಿಂಗವನರಿಯದಿರ್ದು, ಲಿಂಗವನರಿದು, ಲಿಂಗದಲ್ಲಿ ಬೆರೆದು, ಸುಖಿಯಾದೆನೆಂಬನ್ನಕ್ಕ ಲಿಂಗವಿಲ್ಲ. ನಾ ನನ್ನ ನಿಜವನರಿದು ಪರಿಣಾಮಿಯಾದೆನೆಂಬನ್ನಕ್ಕ ಲಿಂಗವಿಲ್ಲ. ಲಿಂಗೈಕ್ಯನಾದೆನೆಂದು ಪರರ ಮುಂದೆ ಬೀರುವನ್ನಕ್ಕ ಎಂದೆಂದಿಗೂ ಮುನ್ನವೆ ಲಿಂಗವಿಲ್ಲ. ಮತ್ತಂ, ಲಿಂಗವನರಿಯಬೇಕು, ಲಿಂಗವ ಕೊಡಬೇಕು, ಭವಬಂಧವ ಕಡಿಯಬೇಕೆಂದು ದೇಶದೇಶವ ತಿರುಗಿದರಿಲ್ಲ. ಊರಬಿಟ್ಟು ಅರಣ್ಯವ ಸೇರಿದರಿಲ್ಲ, ಹೊನ್ನು ಹೆಣ್ಣು ಮಣ್ಣು ಮೊದಲಾದ ಮನೆಮಾರು ತೊರೆದು ಸನ್ಯಾಸಿಯಾಗಿ ವೈರಾಗ್ಯತೊಟ್ಟು ವನವಾಸಗೈದರಿಲ್ಲ. ಅಶನ ವ್ಯಸನವ ಬಿಟ್ಟು, ಹಸಿವು ತೃಷೆಗಳ ತೊರೆದು, ಪರ್ಣಾಹಾರ ಕಂದಮೂಲ ತಿಂದು, ತನುಮನಧನವನೊಣಗಿಸಿದರಿಲ್ಲ. ಮಾತನಾಡಿದರಿಲ್ಲ, ಮಾತುಬಿಟ್ಟು ಮೌನದಿಂದಿದ್ದರೂ ಇಲ್ಲ. ಕ್ರೀಯ ಬಿಟ್ಟರಿಲ್ಲ, ಕ್ರೀಯ ಮಾಡಿದರಿಲ್ಲ. ಏನು ಮಾಡಿದರೇನು ವ್ಯರ್ಥವಲ್ಲದೆ ಸ್ವಾರ್ಥವಲ್ಲ. ಅದೇನುಕಾರಣವೆಂದರೆ, ತಮ್ಮ ನಿಲವು ತಾವು ಅರಿಯದ ಕಾರಣ. ನಮ್ಮ ಗುಹೇಶ್ವರಲಿಂಗವ ಬೆರೆಸಬೇಕಾದರೆ ಸಕಲಸಂಶಯ ಬಿಟ್ಟು, ಉಪಾದ್ಥಿರಹಿತನಾಗಿ, ಎರಡಳಿದು ಕರಕಮಲದಲ್ಲಿ ಅಡಗಬಲ್ಲರೆ ಪರಶಿವಲಿಂಗದಲ್ಲಿ ಅಚ್ಚಶರಣ ತಾನೇ ಎಂದನಯ್ಯ ನಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತಾಯಿ ಮಗಳ ಸಂಗವ ಮಾಡಿ ತಂದೆಗೆ ಹುಟ್ಟಿದ ಮಗನ ಕೈಯೊಳೆತ್ತಿ ಊರಬಿಟ್ಟು ಕಡೆಗೆ ಬರುವಲ್ಲಿ, ಕಾಡಬಂದವರಾರು ಕೂಡಬಂದರು ನೋಡಾ. ಕೆಡಿಸಬಂದವರಾರು ನುಡಿಸಬಂದರು ಕಾಣಾ. ಸುಖಿಸಬಂದವರಾರು ಸುಳಿದುನಿಂದರು ಕೇಳಾ. ಗೋಮಕ್ಕಳೆಲ್ಲರು ಗುಲಾಮರಾದಲ್ಲಿ ಗಸಣಿಯಡಗಿತ್ತು. ಗುರುನಿರಂಜನ ಚನ್ನಬಸವಲಿಂಗಕ್ಕೆ ಶರಗ ಹಾಸಿದರೆ ಮರಳಿ ಹೇಳದ ಸುಖವೆನಗೆ ಸ್ವಯವಾಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಂತಪ್ಪ ಲಿಂಗೈಕ್ಯದ ಭೇದವ ತಿಳಿಯದೆ ತಮ್ಮಾತ್ಮನ ಭಿನ್ನಭಾವಮೂಢಮತಿಯಿಂದ ಲಿಂಗೈಕ್ಯವಾಗಬೇಕೆಂದು ಊರಬಿಟ್ಟು ಕಾಂತಾರಕ್ಕೆ ಪೋಗಿ ಗುಡ್ಡ ಗಂಹಾರ ಕಲ್ಲುಪಡಿ ಗುಹೆದಲ್ಲಿ ಅನ್ನ ಉದಕವ ತೊರೆದು, ವಸ್ತ್ರವ ಬಿಟ್ಟು, ಕಂದಮೂಲ ಪರ್ಣಾಹಾರವ ಭಕ್ಷಿಸಿ, ಇರುವ ಮರುಳುಗಳೆಲ್ಲಾ ಮರಣವಾದ ಮೇಲೆ, ಮರಳಿ ವನಚರಪಕ್ಷಿಯಾಗಿ ಗೂಗಿಯಾಗಿ ಪುಟ್ಟುವರಲ್ಲದೆ, ಇವರು ಲಿಂಗೈಕ್ಯವಾಗಲರಿಯರು ನೋಡೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮುಖದಲ್ಲಿ ಮಂತ್ರ, ಪಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ಹೃದಯದಲ್ಲಿ ಶಿವಲಿಂಗಸಜ್ಜೆಯ ಧರಿಸಿ, ಭಕ್ತಿಸ್ಥಲವನಾಚರಿಸುವ ಶರಣಜನಂಗಳು ಶಿವಗಣಂಗಳ ಕಂಡು ಹರಹರ ಶಿವಶಿವ ಶಿವಮಹಾದೇವ ಎಂದು ನಮಸ್ಕಾರವ ಮಾಡಿ, ಅವರ ಪಾದದ ಮೇಲೆ ಉರುಳಾಡಿ, ಅವರ ಪಾದಧೂಳವ ಸರ್ವಾಂಗದಲ್ಲಿ ಧರಿಸಿ, ತಮ್ಮ ತಮ್ಮ ಗೃಹಾಶ್ರಮಕ್ಕೆ ಬಿಜಯಂಗೈಸಿಕೊಂಡು ಹೋಗಿ, ಪಾದಾರ್ಚನೆಯಂ ಮಾಡಿ ಉನ್ನತಾಸನದ ಮೇಲೆ ಮುಹೂರ್ತವ ಮಾಡಿಸಿ, ಅಂಬಲಿ ಸೊಪ್ಪು ಮೊದಲಾದ ಪಂಚಾಮೃತವ ಎಡೆ ಮಾಡಿ, 'ಸ್ವಾಮೀ ಮನಃಪೂರ್ವಕ ಸಲಿಸೆಂ'ದು ಹಸ್ತ-ಪಾದವ ಜೋಡಿಸಿಕೊಂಡು 'ಶರಣಾರ್ಥಿ ಸ್ವಾಮಿ ಲಿಂಗಾರ್ಪಣವಾಗಲೆಂ'ದು ಅಡಿಗಡಿಗೆ ಇಚ್ಫಾಪದಾರ್ಥವ ಎಡೆಮಾಡಿ, ಅವರು ಸಲಿಸಿದ ಮೇಲೆ ವೀಳ್ಯ ಅಡಿಕೆಯ ನೀಡಿ, ಅವರ ಸುಖ-ದುಃಖವ ವಿಚಾರಿಸಿ, ಅವರಿಗೆ ಶಿವಕೊಟ್ಟ ದ್ರವ್ಯವನು ಭಿಕ್ಷವ ನೀಡಿ, ತಮ್ಮಾಪ್ತರಾದ ಬೀಗರು ಸ್ನೇಹಿತರು ಬಾಂಧವರು ಉಲ್ಲಾಸದಿಂದ ಸರ್ವರೂ ಕೂಡಿ ಊರಬಿಟ್ಟು ಹೊರಯಕ್ಕೆ ಬಂದು, ಒಬ್ಬರಿಗೊಬ್ಬರು ಶರಣು ಶರಣೆಂದು ಕಳಿಸಿದ ಹಾಗೆ, ಶಿವಗಣಂಗಳ ಪಾದಕ್ಕೆ ದೀರ್ಘದಂಡ ನಮಸ್ಕಾರವ ಮಾಡಿ, 'ಸ್ವಾಮಿ ಬರುವಂಥವರಾಗಿರಿ' ಎಂದು ಶರಣು ಮಾಡಿದಾತನೆ ಶಿವಭಕ್ತ; ಮೂರು ಲೋಕಕ್ಕೆ ಒಡೆಯನಾಗುವನು ನೋಡಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->