ಅಥವಾ

ಒಟ್ಟು 115 ಕಡೆಗಳಲ್ಲಿ , 42 ವಚನಕಾರರು , 92 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಟ್ಟಿಯೂ ಮುಟ್ಟಬಾರದ ಠಾವಿನಲ್ಲಿ, ಹುಟ್ಟಿಯೂ ಹುಟ್ಟದೊಂದು ಶಿಶುವಾಯಿತ್ತು. ಅವ ದಿಟ್ಟನಲ್ಲ, ದ್ಥೀರ ವೀರ, ಕೊಟ್ಟದವನಲ್ಲ, ಕೊಟ್ಟುದ ಬೇಡ, ಅವನ ಮುಟ್ಟಿ ಒಡನೆರೆದವರು ನಿತ್ಯನಿತ್ಯಲಿಂಗೈಕ್ಯರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಹಸಿವಿನಲ್ಲಿ ವಿಷಯದಲ್ಲಿ ಭವಿಯ ಬೆರಸಿದೆನಾದಡೆ ಅವ ವಿಷಮಾಕ್ಷ! ನಿಮಗೆ ದೂರ. ದಶ ಶತಕೋಟಿ ವರುಷ ನರಕದೊಳಗಿಹ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ರೂಹಿಲ್ಲದಂಗೆ ಒಲಿದವರಿಗೆ ತನುವಿನ ಹಂಗುಂಟೆ ! ಮನವಿಲ್ಲದವಂಗೆ ಮಚ್ಚಿದವರಿಗೆ ಅಬ್ಥಿಮಾನದ ಹಂಗುಂಟೆ ! ದಿಗಂಬರಂಗೆ ಒಲಿದವರಿಗೆ ಕೌಪೀನದ ಹಂಗುಂಟೆ ! ಕೂಡಲಸಂಗಮದೇವಯ್ಯಾ, ಮಹಾದೇವಿಯಕ್ಕನೆಂಬ ಭಕ್ತೆಗೆ, ಅವ ಹೊರೆಯೂ ಇಲ್ಲ ನೋಡಾ, ಪ್ರಭುವೆ.
--------------
ಬಸವಣ್ಣ
ದಾಸಿ ವೇಶಿ ಮದ್ದು ಮಾಂಸ ಸುರೆ ಭಂಗಿ ಹೊಗೆ ಅನ್ಯದೈವ ಭವಿಸಂಗ-ಇಷ್ಟುಳ್ಳನ್ನಕ್ಕ ಅವ ಭಕ್ತನಲ್ಲ, ಜಂಗಮನಲ್ಲ. ಅವರಿಬ್ಬರ ಮೇಳಾಟವೆಂತೆಂದಡೆ ಹೀಹಂದಿ ಹಡಿಕೆಯ ತಿಂದು ಅವು ಒಂದರ ಮೋರೆಯನೊಂದು ಮೂಸಿದಂತೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಮುನ್ನ ಸತ್ತವರ ಕೇಳಿ, ಈಗ ಸತ್ತವರ ಕಂಡು, ನಾನು ಸತ್ತೆಹೆನೆಂಬುದ ತಾನರಿದ ಮತ್ತೆ, ಇದಿರ ನೋವನರಿಯಬೇಡವೆ ? ಇದಿರ ನೋವನರಿದವಂಗೆ ನಿಜಭಾವದಲ್ಲಿ ತಪ್ಪದೆ ಇಪ್ಪುದು, ಅವ ತಾನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಲಿಂಗನಿಷೆ*ಯುಳ್ಳ ವೀರಶೈವ ಮಹೇಶ್ವರರು ಸಕಲಪದಾರ್ಥವ ಲಿಂಗಕ್ಕೆ ಕೊಡದೆ, ಎನ್ನಂಗಕ್ಕೆ ಕೊಂಡಡೆ ವ್ರತಕ್ಕೆ ಭಂಗವೆಂದೆಂಬಿರಯ್ಯಾ ಉದಯಕಾಲದಲ್ಲಿ ಶೌಚಾಚಮನವ ಮಾಡಿ ಅಗ್ಗಣಿಯ ಬಳಸುವಿರಿ, ಆವಾಗ ಅವ ಲಿಂಗಕ್ಕೆ ಕೊಡುವಿರಿ. ಆ ಮೇಲೆ ಹಳ್ಳ ಕೊಳ್ಳ ಕೆರೆ ಬಾವಿ ನದಿಗಳಿಗೆ ಹೋಗಿ, ಮೃತ್ತಿಕಾದಿಂದ ಹಸ್ತಪಾದಕ್ಕೆ ಮೂರು ವೇಳೆ ಪೂಸಿ ಮೂರು ವೇಳೆ ತೊಳೆವಿರಿ. ಆವಾಗ ಅವ ಲಿಂಗಕ್ಕೆ ಕೊಡುವಿರಿ. ಆ ಮೇಲೆ ಶೌಚಕ್ಕೆ ಒಯ್ದ ಪಾತ್ರೆಯ ಮೃತ್ತಿಕಾದಿಂದ ತೊಳೆದು, ತಾ ಉಟ್ಟು ತೊಟ್ಟ ಪಾವಡಪಂಕಿಗಳ ನೀರಿನಲ್ಲಿ ಸೆಳೆದು ಗಾಳಿ ಬಿಸಲಾಗ ಹಾಕುವಿರಿ. ಆವಾಗ ಅವ ಲಿಂಗಕ್ಕೆ ಕೊಡುವಿರಿ. ಇಂತೀ ಎಲ್ಲವನು ಶುಚಿ ಮಾಡಿ ಜ್ಯಾಲಿ ಬೊಬ್ಬಲಿ ಉತ್ರಾಣಿಕಡ್ಡಿ ಮೊದಲಾದ ಕಡ್ಡಿಗಳ ತಂದು ಆವಾಗ ತಮ್ಮ ಅಂಗದ ಮೇಲಣ ಲಿಂಗವ ತೆಗೆದು ಅಂಗೈಯಲ್ಲಿ ಪಿಡಿದು, ಆ ಲಿಂಗಕ್ಕೆ ಮಜ್ಜನ ಮಾಡಿ, ಮರಳಿ ತಾ ಮುಖಮಜ್ಜನವ ಮಾಡಿ, ಆ ಮೇಲೆ ತಮ್ಮ ಅಂಗೈಯೊಳಗಿನ ಇಷ್ಟಲಿಂಗಕ್ಕೆ ಆ ಕಡ್ಡಿಯ ತೋರಿ, ತೋರಿದಂಥ ಧಾವನೆಯ ಮಾಡುವರು. ಲಿಂಗದ ಗೊತ್ತು ತಮಗಿ¯್ಲ ; ತಮ್ಮ ಅಂಗದ ಗೊತ್ತು ಲಿಂಗಕ್ಕಿಲ್ಲ . ಇಂತಪ್ಪ ಭಿನ್ನವಿಚಾರವನುಳ್ಳ ಮಂಗಮನುಜರಿಗೆ ಲಿಂಗನೈಷೆ*ಯುಳ್ಳ ವೀರಮಹೇಶ್ವರರೆಂದಡೆ ನಿಮ್ಮ ಶಿವಶರಣರು ಮುಖವೆತ್ತಿ ನೋಡರು. ಮನದೆರೆದು ಮಾತನಾಡರು, ತಮ್ಮೊಳಗೆ ತಾವೇ ಮುಗುಳುನಗೆಯ ನಕ್ಕು ಸುಮ್ಮನಿರುವರು ನೋಡಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬ್ರಹ್ಮ ವಿಷ್ಮು ರುದ್ರ ಈಶ್ವರ ಸದಾಶಿವ ಇದ್ದಂದು ನೀನೆ, ಅವರಿಲ್ಲದಂದು ನೀನೆ ; ಪಿಂಡದ ಬೀಜವ ನವಬ್ರಹ್ಮರು ತಂದಂದು ನೀನೆ, ಅವ ತಾರದಂದು ನೀನೆ. ಆದಿ ಮಧ್ಯಾಂತವಿದ್ದಂದು ನೀನೆ,ಅವು ಇಲ್ಲದಂದು ನೀನೆ ; ಪಿಂಡನಿರ್ಮಿತವಾದಂದು ನೀನೆ ; ಪಿಂಡಜ್ಞಾನವಾದಂದು ನೀನೆ, ಪಿಂಡಜ್ಞಾನವಿಲ್ಲದಂದು ನೀನೆ ; ಸರ್ವರಾತ್ಮಜ್ಞಾನವಾಗಿ ತೋರುತ್ತಿದ್ದೆಯಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಾವಿರದಲ್ಲಿ ಒಂದು ರಜ್ಜು ಹರಿದಡೆ, ಅದ ಸಾಗಿಸಿ ಕಡೆಹಾಸಬೇಕಲ್ಲದೆ, ಗೈದು ಬಿಟ್ಟದೆ, ಒಂದರ ಹಿಂದೊಂದಳಿಯಿತ್ತು ಆ ಅಚ್ಚು. ಬಂದುದನರಿದು ಮಾಡುವ ಭಕ್ತನ ದ್ವಂದ್ವದೊಳಗೊಂದು ತಪ್ಪಿದಡೆ, ಅವ ಹಿಂದುಳಿದನೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತನೆನಿಸಿಕೊಂಡು ಜಂಗಮದೊಡನೆ ದುರುಳತನವ ನುಡಿದರೆ ಅವ ಭಕ್ತನಲ್ಲ, ಲಿಂಗವಿರಳ ನೋಡಾ. ಕಾಯದಲ್ಲಿ ವಿಶ್ವಾಸ, ಪ್ರಾಣದಲ್ಲಿ ಅವಿಶ್ವಾಸ ಕಾಯಪ್ರಾಣದಂತೆ ಇದ್ದಿತ್ತು, ಜಂಗಮಲಿಂಗದ ನಿಲವು. ಆತ್ಮಸ್ತುತಿ ಪರನಿಂದೆವುಳ್ಳನ್ನಕ್ಕ ಕೂಡಲಚೆನ್ನಸಂಗಮದೇವ. ಕುರುಡನ ಕೈಯ ದರ್ಪಣದಂತೆ
--------------
ಚನ್ನಬಸವಣ್ಣ
ಆರಡಿ ತಾನಾಗಿಹ ಆಶ್ರಯವ ಮಾಡುವಲ್ಲಿ ಬೇರೆ ಬಾಯಿಲ್ಲ. ಕುಸುಮದ ಕಂಪಿತವನುಂಬುದಕ್ಕೆ ಬೇರೆ ಬಾಯಿಲ್ಲ. ಇಂತಿದು ಬಿಡುಮುಡಿಯ ಭೇದ. ಕರ್ತು ಭೃತ್ಯನ ವಶಗತವಾಗಿರ್ದ ತ್ರಿವಿಧಮಲವ ಮುಟ್ಟುವಲ್ಲಿ. ತನಗೆ ಬಿಟ್ಟು ಬಹ ಸಮರ್ಪಣೆಯನರಿತು, ಅವ ತೊಟ್ಟಿರ್ದುದ ತಾ ತೊಡದೆ, ಅವ ಬಿಟ್ಟುದ ತಾ ಮುಟ್ಟದೆ, ಅವ ಬಿಟ್ಟುದನರಿತು, ಅವಗೇನು ಪಾಶವ ಕಟ್ಟಿದೆ. ತೊಟ್ಟ ಬಿಟ್ಟ ಹಣ್ಣಿನಂತೆ, ನಿಜನಿಶ್ಚಯವಾದ ಭಕ್ತಿಮೂರ್ತಿ. ಮಹಾಮಹಿಮ ಕಲ್ಲೇಶ್ವರಲಿಂಗ ತಾನಾದ ಶರಣ.
--------------
ಹಾವಿನಹಾಳ ಕಲ್ಲಯ್ಯ
ಹುರಿಯ ಮೆಟ್ಟುವ ವಿಹಂಗ ಜಾತಿ ಜೀವಂಗಳೆಲ್ಲವೂ ಮುಂಚಿ ಅವ ಬಲ್ಲಡೆ ಸಂಚವ ಮೆಟ್ಟಿ ತಾವು ಸಿಕ್ಕುವವೆ ? ಆ ತೆರನ ಕಂಡು ತ್ರಿವಿಧದ ಹುರಿಯಲ್ಲಿ ಅಡಿಯನಿಕ್ಕಿ ಅಡೆಗೊಡ್ಡಿದಂತೆ ಬಿದ್ದಿರುತ್ತ, ಮತ್ತರಿಕೆಯ ಮಾತ ನುಡಿದಡೆ ಅದು ಬರುಕಟಿಯೆಂಬರು. ನೆರೆ ಅರಿದು ಹರಿದ ಶರಣರು ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವ ಹೊರೆಹೊರೆಯಲ್ಲಿ ವೇಧಿಸಬೇಕು
--------------
ಬಾಹೂರ ಬೊಮ್ಮಣ್ಣ
`ತತ್ರಾದೌ ಸಂಪ್ರವಕ್ಷ್ಯಾಮಿ ಶೈವ ಸಾಮಾನ್ಯಲಕ್ಷಣಂ' ಎಂದು ಆ ನಾಲ್ಕು ವಿಧವಾದ ಶೈವಂಗಳೊಳಗೆ ಮೊದಲು ಸಾಮಾನ್ಯಶೈವಲಕ್ಷಣವ ಹೇಳಿಹೆನು:`ಶಿವಲಿಂಗಂ ಯಥಾ ಪಶ್ಯೇತ್ತದಾ ಕುರ್ಯಾತ್ಸಮರ್ಚನಂ | ಪ್ರದಕ್ಷಿಣಾಂ ಮ ಪ್ರಣತಿಂ ದರ್ಶನಂ ವಾSತ್ರ ಕಾರಯೇತ್ || ಭಸ್ಮಧಾರಣಮಾತ್ರೇಣ ಶುದ್ಧೋ ಭವತಿ ಸರ್ವದಾ| ಶಿವಕಿ....ತದಾರೋಪೇ ಪ್ರೀತಿಮಾನ್ ಶಿವಭಕ್ತಕೇ || ಏತೇಷಾಂ ನಿಯತಿರ್ನಾಸ್ತಿ ಯಥಾ ಲಬ್ಧಂ ಸಮಾಚರೇತ್' ಇಂತೆಂದುದಾಗಿ ಅವನಾನೊಬ್ಬ ಸಾಮಾನ್ಯಶೈವನು ವಿಭೂತಿಯಪಟ್ಟ ಮಾತ್ರದಿಂದವೆ ಶುದ್ಧವಾಗುತ್ತಿದ್ದಾತನಾಗಿ ಸ್ವಯಂಭುಲಿಂಗವನಾದರೆಯೂ ದೇವದಾನವಮಾನವಾದಿಗಳಿಂ ಪ್ರತಿಷಿ*ಸ ಲ್ಪಟ್ಟ ಲಿಂಗನಾದರೆಯೂ ಅವ ವೇಳೆಯಲ್ಲಿ ಕಂಡನು, ಆ ವೇಳೆಯಲ್ಲಿ ಅರ್ಚನೆಯನಾದರೂ ಮಾಡೂದು, ಪ್ರದಕ್ಷಿಣ ದರ್ಶನ ನಮಸ್ಕಾರವನಾದಡೆಯೂ ಮಾಡುವುದು, ಶಿವಕೀರ್ತಿ ಶಿವನ ವಚನ ಶಿವಭಕ್ತರಲ್ಲಿ ಪ್ರೀತಿಯುಳ್ಳಾತನಹನು. ಈ ಶಿವಾರ್ಚನಾದಿಗಳಲ್ಲಿ ಸಂಪೂರ್ಣ ನಿಯತಿಯಿಲ್ಲದೆ ಇದರೆ ಯಥಾ ಲಬ್ಧವಾದ ಕ್ರೀಗಳನಾಚರಿಸುವುದು. ಮತ್ತಂ, `ಸಾಮಾನ್ಯಲಕ್ಷಣಂ ಪ್ರೋಕ್ತಂವಕ್ಷೆ ್ಯೀ ಮಿಶ್ರಸ್ಯ ಲಕ್ಷಣಂ'-ಸಾಮಾನ್ಯಶೈವ ಲಕ್ಷಣವು ನಿರೂಪಿಸಲ್ಪಟ್ಟಿತ್ತು. ಮಿಶ್ರಶೈವಲಕ್ಷಣವನು ನಿರೂಪಿಸಿಹೆನು ಕೇಳಿಂದು ಶಿವನು ಷಣ್ಮುಖದೇವರಿಗೆ ಉಪದೇಶಿಸುತ್ತಿ ರ್ದನಯ್ಯ, ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಕಾಮನೆಂಬ ಬಿಲ್ಲಾಳವುಂಟೆಂಬುದ, ನಾವು ಕೇಳಿ ಬಲ್ಲೆವೈಸೆ ! ಅವನೆಲ್ಲರನೆಸೆವ ಅವ ನಮ್ಮ ಕಂಡಡೆ, ಬೆಟ್ಟೆಮ್ಮ ನಿಟ್ಟೈಸದೆ ಸರಿವ. ಸಕಳೇಶ್ವರದೇವರನರಿಯದ ನಿರ್ಭಾಗ್ಯರನೆಸೆವಾ.
--------------
ಸಕಳೇಶ ಮಾದರಸ
ಹಸಿವ ಮುಂದಿಟ್ಟುಕೊಂಡು ಸುಳಿವಾತ ಜಂಗಮವಲ್ಲ. ಹಸಿವ ಮುಂದಿಟ್ಟುಕೊಂಡು ಸುಳಿಯಲದೇಕೊ ? ಹಸಿವೆಂಬುದೆ ತನುಗುಣಲಕ್ಷಣಕೆ ಚೈತನ್ಯವಾಗಿಹುದು. ಆ ತನುಗುಣಲಕ್ಷಣ ಹಿಂಗಿದಲ್ಲದೆ ಜಂಗಮವಲ್ಲ. ಅದಕ್ಕೆ ಏನಾಯಿತ್ತು ? ಹಸಿವ ಮುಂದಿಟ್ಟು ಸುಳಿವುದಕ್ಕೆ ತೆರನುಂಟು. ಉಂಡರೆ ಹಂಗಿಗನೆ ಶಿವಯೋಗಿ ? ಅನುವರಿದುಣಬಲ್ಲಡೆ ಎನ್ನವನೆಂಬೆನು. ಅನುವನರಿಯದೆ ಭಕ್ತನ ಹರುಷವ ಮುರಿದು ಉಂಡರೆ, ಕೊಂಡರೆ ಬ್ರಹ್ಮನವನಲ್ಲದೆ ಅವ ನಮ್ಮವನಲ್ಲ. ಅನುವನರಿಯದೆ ಭಕ್ತನ ಭ್ರಮೆಗೊಳಿಸಿ ಉಂಡರೆ, ಕೊಂಡರೆ ಹರಿಯವನಲ್ಲದೆ ನಮ್ಮವನಲ್ಲ. ಅನುವನರಿಯದೆ ಭಕ್ತರಿಗೆ ಕೋಪವ ಹುಟ್ಟಿಸಿ ಉಂಡರೆ, ಕೊಂಡರೆ ರುದ್ರನವನಲ್ಲದೆ ನಮ್ಮವನಲ್ಲ. ಇಂತೀ ತ್ರಿವಿಧ ತೆರೆನನರಿಯದೆ ಉಂಬವರೆಲ್ಲರು ತ್ರಿವಿಧ ಭಾಜನರು ಕಾಣಾ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ನಾದದ ಉತ್ಪತ್ತಿ ಸ್ಥಿತಿ ಲಯವನು ಹೇಳಿದಡೇನು ಕೇಳಿದಡೇನು, ಎಲೆ ಮರುಳೆ ! ಬಿಂದು ದಳದ ಉತ್ಪತ್ತಿ ಸ್ಥಿತಿ ಲಯವನು ಹೇಳಿದಡೇನು ಕೇಳಿದಡೇನು ಎಲೆ ಮರುಳೆ ! ಮಧ್ಯದಳದ ಉತ್ಪತ್ತಿ ಸ್ಥಿತಿ ಲಯವನು ಹೇಳಿದಡೇನು ಕೇಳಿದಡೇನು ಎಲೆ ಮರುಳೆ ! ಮುಗಿಲಗಲದ ಅಂಬರ ವಾಯು ಅಗ್ನಿಜಲ ಧರೆಯ ಹೊತ್ತುಕೊಂಡು ಅವ, ಹೇಳಿದಡೇನು ಕೇಳಿದಡೇನು ಎಲೆ ಮರುಳೆ ! ಗುಹೇಶ್ವರಲಿಂಗದ ಬಾರಿಗೊಳಗಾಗಿ, ಇವೆಲ್ಲವನುಂಟುಮಾಡಲರಿಯೆನಾಗಿ_ಎನಗಿಲ್ಲವೆನುತಿರ್ದೆನಯ್ಯಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->